೩,೫೦೦,೦೦೦

(೧೯೪೩ನೆಯ ಇಸವಿಯ ಕೊನೆಯ ೪ ತಿಂಗಳಲ್ಲಿ ಬಂಗಾಲದಲ್ಲಿ ಕ್ಷಾಮಕ್ಕೂ ರೋಗಕ್ಕೂ ತುತ್ತಾದವರನ್ನು ಕುರಿತು)

ಸತ್ತರೇ ಅಕಟ ಮೂವತ್ತಯಿದು ಲಕ್ಷ
ಬಂಗಾಲದೊಳಗೆಮ್ಮ ಕಂಗಾಲ ಬಳಗಂ!
ಬೋನದಾ ದುರ್‍ಭಿಕ್ಷ, ಬೇನೆಯ ಸುಭಿಕ್ಷ –
ಕರು ಉಂಡಿತೇ ಹಾಲು ತುರು ಹಿಂಡೆ ಕೊಳಗಂ?

ಇಳೆ ಭಾರವನ್ನಿಂತೆ ಇಳುಹುದೆನೆ ತನ್ನ,
ಹೌರಕ್ಕೆ ಹೌರ ಗಡ ಭಾರತರೊ ಭಾರ?
ವಡಬಾಗ್ನಿಯಿಂ ತನ್ನ ಕಡಲಿಗೆನೆ ಬನ್ನ,
ಯೂರೋವದೌರ್‍ವದಿಂ ಭಾರತಕೊ ಘೋರ?

ಯಾರ ಸೊಕ್ಕಿಗೆ, ದೇವ, ಯಾರ ತಲೆ ದಂಡ?
ಸಾಲದೆನೆ ನಮ್ಮ ಏಗಾಲದೀ ಅಡಿಮೆ
ಮತ್ತೆ ಲೋಕದ ಪಾಪ ಹೊತ್ತ ಕುರಿವಿಂಡ
ಬೇನೆ ಬರ ಮುಕ್ಕೆ ಇನ್ನೇನೆಮಗೆ ಕಡಿಮೆ?

ಇನಿಸೆ ಭಾಗ್ಯಕೆ, ಜೀಯ, ಜನಿಸಿದೆವೆ ನಾವು?-
ಕೂಳಿದ್ದು ಉಪವಾಸ, ಬಾಳಿದ್ದು ಸಾವು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಿರಿಗನ್ನಡ ವೈಭವ
Next post ಭಾರತದ ಸಂತನ ಕತೆ

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…