Home / ಕವನ / ಕವಿತೆ / ಹುಷ್ ! ಸದ್ದು!

ಹುಷ್ ! ಸದ್ದು!


ಬಾಗಿಲಿಲ್ಲದ ಬಯಲೊಳಗಿಂದ
ಮೆಲ್ಲಗೆ ಬಳುಕುತ್ತಾ ಬಂತು
ಬೆಳಕಿನ ಹೊಳೆ
ಅದರಾಳದಿಂದೆದ್ದ ನೂರಾರು ನಿಹಾರಿಕೆಯರು
ಬೊಗಸೆ ತುಂಬಿ ಸುರಿಸುತ್ತಾರೆ
ಬಣ್ಣದ ಬೆಳಕಿನ ಮಳೆ.

ಹೇಳಿಕೊಳ್ಳಲು ಊರಿಲ್ಲದ
ಊರಿಕೊಳ್ಳಲು ಬೇರಿಲ್ಲದ
ಸೋರಿಕೊಳ್ಳಲು ನೀರಿಲ್ಲದ
ಬೆಳಕಿನ ಹೊಳೆಯಲಿ
ಬರಿದೇ ತೇಲುವ
ಮಿನುಗು ತಾರೆಯರ
ಮೈ ತುಂಬಾ ಕಣ್‌ ಕೋರೈಸುವ ಬೆಳಕು
ಚೆಲುವು – ಒಲವು ಮೇಳೈಸಿ ನಿಂತ ರೂಪು
ಕನಸಿನ ಲೋಕದಿಂದ
ತುಂಡರಿಸಿ ಬಿದ್ದುದೇ ಈ ಮಿಣುಕು!


ಕುತ್ತಿಗೆಗೆ ಬಿಗಿದ
ಹಗ್ಗ ಮತ್ತೆ ಮತ್ತೆ
ತುಂಡರಿಸಿ ಜೀವ ಭಕ್ಷಿಸು ಪಡೆದ
ಮುಗ್ಧ ಕಂದನಿಗೆ ಬೆಳಕಿನಾಸೆ
ಎಂದೂ ಯಾರೊ ಕಾಣದ ಕನಸು ಕಾಣುವಾಸೆ.


ಬೆಳಕು ಬೇಕೆ ಬೆಳಕು?
ಕನಸು ಬೇಕೇ ಕನಸು?
ಸೆರಗಿನ ತುಂಬಾ ಬೆಳಕು – ಕನಸು ಹಿಡಿದು
ಸುಮ್ಮನೆ ಕೆಣಕು
ಮೈನವಿರೇಳುವ ಪಿಸುಗು
ಬೆಳಕಿನ ಗುತ್ತಿಗೆ ಪಡೆದ
ಬೆಡಗಿನ ನಿಹಾರಿಕೆಯೆರದು!


ಬೇಕು – ಬೇಡಗಳ ಪ್ರಶ್ನೆ ನೆವಕ್ಕಷ್ಟೇ
ಬಣ್ಣವಿಲ್ಲದ ಬರೀ ಬೆಳಕಿನ
ನಗೆಗೇ – ಬಗೆಗೇ ಸೋತ ಕಂದನ
ಪ್ರೀತಿಯಿಂದ ತಬ್ಬಿ
ಎದೆಯ ಕಣ್ಣೀರು ಒರೆಸಿ
ಸುಮ್ಮಸುಮ್ಮನೆ ಒಲವು ಹರಿಸಿ
ಬೇಡವೆಂದರೂ ಬೆಳಕಿನ ನೀರು ಸುರಿಸಿ
ಅವನ ತೋಯಿಸುತ್ತಾರೆ
ಮೀಯಿಸುತ್ತಾರೆ
ಲಾಲಿ ಹಾಡಿ ತಬ್ಬಿ ಮೆಲ್ಲಗೆ
ಮಲಗಿಸುತ್ತಾರೆ.


ಹುಷ್! ಸದ್ದು!
ಕಂದನೀಗ ಬೆಳಕಿನಮೃತ ಹೀರುತ್ತಾ
ಬೆಳೆಯುತ್ತಿದ್ದಾನೆ
ಬೆಳಕಾಗುತ್ತಿದ್ದಾನೆ!
ಬೆಳಕಿನ ಕನಸಾಗುತ್ತಿದ್ದಾನೆ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...