Home / ಕವನ / ಕವಿತೆ / ಬೆಂಗಳೂರಿನ ಕವಿತೆ

ಬೆಂಗಳೂರಿನ ಕವಿತೆ

ಮೊದಲು ಆಕಾಶವಿತ್ತು,
ಆಕಾಶಕ್ಕೆ ಕಣ್ಣಿತ್ತು, ಕಿವಿಯಿತ್ತು
ಆದರೆ ಕಾಲುಗಳಿರಲಿಲ್ಲ
ಬ್ರಹ್ಮಾಂಡದ ಮೇಲೆ
ತೇಲಾಡುತ್ತಿತ್ತು

ಹಸುಗೂಸು-ಅಂಬೆಗಾಲಿಕ್ಕಿ ನೀನು ಬಂದೆ
ಜಗವೆಲ್ಲ ಖಾಲಿ ಇತ್ತು ನೀನು ಕಂಡೆ
ನಿನ್ನ ಕಣ್ಣುಗಳಲ್ಲಿ ಆಶ್ಚರ್ಯವಿತ್ತು,
ಹೊಳಪಿತ್ತು, ನಗುವಿತ್ತು, ಅಳುವಿತ್ತು
ನೀನು ತಂದೆ:

ಮೌನಕ್ಕೆ ಜೀವ ತುಂಬುವ ಅರ್ಥ
ನಿನ್ನ ಬಗೆಗಣ್ಣಲ್ಲಿ ನೂರಾರು ನವಿಲು
ಎಲ್ಲಾ ನವಿಲುಗಳು ಬಿಟ್ಟು ಹೋಗಿವೆ ತಮ್ಮ ನವಿಲುಗರಿ
ನಿನ್ನ ಹಣೆ ಮೇಲೆ ನಿಲ್ಲವುದೆ ಗರಿಯ ಗುರಿ ?
ತಿಳಿಯಲಿಲ್ಲ

ನೀನು ಹೊರಟೆ
ನಿನ್ನ ನಗು ಅಳೆದಿದ್ದು ಊರವಿಸ್ತಾರ
ನೀನು ಈಗಲೂ ನಗುವೆ.  ಯಾವ ಆರ್ಥ ?

ನೀ ಕಟ್ಟಿದೂರು ಇದು ಬೆಂಗಳೂರು
ಇಲ್ಲಿ ಕಾಮನ ಬಿಲ್ಲುಗಳಿವೆ ನವಿರಾಗಿ ನೆಡುವ
ನೂರಾರು ಮುಳ್ಳುಗಳಿವೆ ಇಲ್ಲಿ
ನಾನು ಬಂದೆ. ಇಲ್ಲಿ ನಾನು ಕಂಡೆ.
ತಿಳಿಯಬಾರದ್ದನ್ನೂ ತಿಳಿಯಬೇಕಾದ್ದನ್ನೂ
ತಿಳಿದುಕೊಂಡೆ.
ಈಗ ಹೇಳಿಬಿಡುವೆ

ಉದ್ಯಾನಗಳ ನಗರಿ-ನಿನ್ನ ಪ್ರೀತಿಸುವೆ
ನನ್ನ ಗೆಳೆಯರನೆಲ್ಲ ಕೈ ಮಾಡಿ ಕರೆವೆ
ಬೆಂಗಳೂರಿಗೆ ಬಾ ಬೆಂಗಳೂರಿಗೆ ಬಾ
ಬೆಂಗಳೂರೇ-ಒಮ್ಮೆ
ನನ್ನ ಊರಿಗೆ ಬಾ

ನಿನ್ನ ಮೈ ಸುಡುವ ಸೂರ್ಯ
ತನ್ನ ಮ್ಮೆ ತೊಳೆವ ಊರು
ಅವನ ಅವಿತಿಟ್ಟುಕೊಳುವ
ನನ್ನೂರ ವಿಸ್ತಾರ ಕಡಲು-
ನನ್ನೂರ ಅತಿಸಹಜ ಚೆಲುವು-
ಬೆಂಗಳೂರಿಗೆ ಬಾ ಬೆಂಗಳೂರಿಗೆ ಬಾ
ಬೆಂಗಳೂರೇ-ಒಮ್ಮೆ
ನನ್ನ ಊರಿಗೆ ಬಾ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...