Home / ಕವನ / ಕವಿತೆ / ಹರಿಶ್ಚಂದ್ರ ರಾಜ್ಯವಿಯೋಗ

ಹರಿಶ್ಚಂದ್ರ ರಾಜ್ಯವಿಯೋಗ

(ಮತ್ತೇಭ ವಿಕ್ರೀಡಿತ)

ಅಡಿಯಂ ಮೆಲ್ಲನಿಡುತ್ತೆ, ಕಂದು ಮೊಗಮಂ ಕೀಳೋದು, ಕಣ್ಣೀರ್ಗಳಿಂ|
ಮಿಡಿದುಂ, ತಾಮೊಡವರ್ಪೆವೆಂದು ನೃಪನಂ ಬೆಂಬತ್ತಿ ಬಂದಿರ್ಪರಂ|
ಜಡಿದುಂ ಜಾಡಿಸಿ, ಪಿಂದಕಟ್ಟಿ ಪುರಕಂ, ಗಾಧೇಯನುಂ ಮೂವರಂ|
ಕಡುಗಲ್ತೀವಿದರಣ್ಯಮಂ ಪುಗಿಸಿದಂ – ಕೈಗೂಡಿಸಲ್ ಪಂತವಂ ||೧||

ಮನುವಿಂದಿನ್ನೆವರಂ ಮಹಾವಿಭವದಿಂ ಸಾಮ್ರಾಜ್ಯಮಂಗೈದ ಪ|
ತ್ತನಮಂ ನಿಟ್ಟಿಸುತೊರ್ಮೆ ನಿಂದರಿನಿಸುಂ; ಮೇಣೊರ್ಮೆಯೋಕೋರ್ವರುಂ|
ನನೆಗೂಸಂ ನೆರೆ ನೋಡಿ ನೋಡಿ, ನುಡಿದರ್ ನೇತ್ರಂಗಳಿಂ ಮತ್ತೆ ಮಾ
ನಿನಿ ತನ್ನಂಬಕದಿಂದೆ ಬಿಳ್ದ ಪನಿಮುತ್ತಂ ಮಾಜಿದಳ್ ಸೀರೆಯಿಂ ||೨||

“ಎಲೆ! ಪ್ರಾಣೇಶ್ವರಿ! ತಕ್ಕುದಲ್ತು ದುಗುಡಂ ಪ್ರಸ್ತಾನದಾರಂಭದೊಳ್|
ಪಲವುಂ ದಂದುಗಮಂತು ರೋಗರುಜೆಯುಂ, ಸಂಕಷ್ಟ ಕಷ್ಟಂಗಳುಂ|
ಸತಿ ಎಮ್ಮುದರಣಾರ್ಥಮಾಗಿ, ಪ್ರಭು ತಾಂ ಕೈಗಾಯ್ದ ಸೌಭಾಗ್ಯಮಂ|
ದೊಲಿದುಂ ತಾಳ್ವುದು – ಭಕ್ತರಕ್ಷಣದೊಳುಂ ‘ದೈವೀ ವಿಚಿತ್ರಾಗತೀ!’” ||೩||

ಎನಸುಂ ಸಂತವಿಡುತ್ತೆ ಚಂದ್ರಮತಿಯಂ, ಮುದ್ದಾಡುತಂ ಬಾಲನಂ,|
ಜನಪಂ ಕೊಂಡು ತಳರ್ದನೆಲ್ಲ ನೆಲಮುಂ ಕಣ್ಮುಂದೆ ಪರ್ಬಿತ್ತು ದೇ|
ವನ ಹಸ್ತಾಬ್ಜದ ಛಾಯೆಯಿರ್ಪುದೆನುತಂ, ನಲ್ಲಳ್ಗೆ ಕೈಗೊಟ್ಟು, ಮೆ|
ಲ್ಲನೆ ಪೋದಂ, ತಡಗಾಲ ಪಜ್ಜೆ ತೊಡರಲ್, ಶಂಕವಂ ರಾಜ್ಯದಿಂ| ||೪||
*****
(ಸುವಾಸಿನಿ ಏಪ್ರಿಲ್ ೧೯೦೩, ಪುಸ್ತಕ ೨, ಅಂಕ ೧೦, ಪುಟ ೨೧೭)

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...