Home / ಕಥೆ / ಸಣ್ಣ ಕಥೆ / ಕೊಲೆ ಮಾಡಲು ಬಂದ ಕಳ್ಳರು

ಕೊಲೆ ಮಾಡಲು ಬಂದ ಕಳ್ಳರು

ಕೆಲವು ಕಾಲದ ಮೇಲೆ ತಿರುಚನಾಪಳ್ಳಿಯ ಅರಸನು ತನ್ನ ಜಟ್ಟಿಯನ್ನು ಕಾಳಗದಲ್ಲಿ ಕೊಂದವನೇ ಶ್ರೀರಂಗಪಟ್ಟಣದ ಒಡೆತನಕ್ಕೆ ಬಂದನೆಂಬುದನ್ನು ತಿಳಿದು ಭಯಭ್ರಾಂತನಾದನು. ಇಷ್ಟು ಪೌರುಷಸಾಹಸಗಳುಳ್ಳ ಒಡೆಯರು ತಮ್ಮ ರಾಜ್ಯದಮೇಲೆ ಕೈ ಮಾಡಿದರೇನುಗತಿಯೆಂದು ಚಿಂತಿಸುತ್ತ ಆ ಅರಸನು ಕಡೆಗೆ ರಹಸ್ಯವಾಗಿ ಒಡೆಯರನ್ನು ಕೊಲ್ಲಿಸುವುದೇ ಸರಿಯೆಂದು ನಿಶ್ಚಯಮಾಡಿ, ೨೫ ಮಂದಿ ಕಳ್ಳರಿಗೆ ಹಣವನ್ನು ಕೊಟ್ಟು ಕಂಠೀರವ ಒಡೆಯರ ತಲೆಯನ್ನು ತೆಗೆದುಕೊಂಡು ಬರುವುದೆಂದು ಅಪ್ಪಣೆ ಮಾಡಿದನು. ಆ ಕಳ್ಳರು ಬೇರೆ ಬೇರೆ ವೇಷಗಳನ್ನು ಧರಿಸಿ ಶ್ರೀರಂಗಪಟ್ಟಣಕ್ಕೆ ಬಂದು, ಅಲ್ಲಿನ ಮರ್ಮಗಳನ್ನು ತಿಳಿದುಕೊಳ್ಳುತ್ತಾ ಸಮಯವನ್ನು ನಿರೀಕ್ಷಿಸುತ್ತಲಿದ್ದರು. ಕಡೆಗೊಂದು ದಿನ ಈ ಕಳ್ಳರು ಕನ್ನ ತೆಗೆದುಕೊಂಡೇ ಅರಮನೆಯನ್ನು ಪ್ರವೇಶಮಾಡಿ ಅವಿತುಕೊಂಡಿದ್ದರು. ಅಂತಃಪುರದಲ್ಲಿ ದೊರೆಗಳು ಒಬ್ಬರೇ ಮಂಚದ ಮೇಲೆ ಕುಳಿತು ತಾಂಬೂಲವನ್ನು ಸವಿಯುತ್ತಿದ್ದ ಸಮಯದಲ್ಲಿ ನಿದ್ರೆಯ ಮಾಳಿಗೆಯು ಮುಂದಣ ಹಜಾರದ ಕಂಬಗಳ ಮನೆಯಲ್ಲಿ ಬೇರೆ ಬೇರೆಯಾಗಿ ನಿಂತಿದ್ದ ಈ ೨೫ ಜನರ ನೆರಳುಗಳನ್ನು ನೋಡಿ “ಯಾರೋ ವಂಚನೆಯಿಂದ ನಮ್ಮ ಪ್ರಾಣವನ್ನಪಹರಿಸುವುದಕ್ಕೆ ಬಂದಿರುತ್ತಾರೆ” ಎಂದು ತಿಳಿದು ಹಾಗೆಯೇ ಸಮೀಪದಲ್ಲಿದ್ದ ವಿಜಯ ನಾರಸಿಂಹವೆಂಬ ತಮ್ಮ ಕತ್ತಿಯನ್ನು ಕೈಗೆ ತೆಗೆದುಕೊಂಡರು. ಹೊಂಚು ಹಾಕುತ್ತಲಿದ್ದ ಆ ಕಳ್ಳರು ಅದನ್ನು ಕಂಡು, ಎಲ್ಲರೂ ಗುಂಪುಗೂಡಿ ದೊರೆಗಳನ್ನು ಸುತ್ತಿಕೊಂಡರು. ಆಗ ದೊರೆಗಳು ತಮ್ಮ ಸಾಧಕದ ಚಾತುರ್ಯದಿಂದ ಪಟ್ಟವನ್ನು ತಿರುಹಿ, ತಲೆಗಳನ್ನು ಹೊಡೆದು, ಈ ಪೆಟ್ಟನ್ನು ತಪ್ಪಿಸಿಕೊಂಡು ಸಮೀಪಕ್ಕೆ ನುಸುಳಿಕೊಂಡು ಬಂದ ಕೆಲವರು ತಮ್ಮ ಭುಜಬಲದಿಂದ ಎರಡು ಕಂಕಳುಗಳಲ್ಲಿಯೂ ಇರುಕಿಸಿಕೊಂಡು ಕತ್ತುಗಳನ್ನು ಮುರಿದು, ಮತ್ತೆ ಕೆಲವರನ್ನು ಕಾಲಿನಿಂದ ಒದ್ದು ನಿರ್ಜಿವವಾಗುವಂತೆ ಕೆಡಹಿದರು. ಉಳಿದ ಹಲಕೆಲವು ಓಡಿಹೋಗುವುದಕ್ಕೆ ಅವಕಾಶವಿಲ್ಲದೆ ಆಯುಧಗಳನ್ನು ಕೆಳಕ್ಕೆ ಹಾಕಿ ವಾದಾಕ್ರಾಂತರಾದರು. ಒಡೆಯರು ಅವರನ್ನು ಜೀವಂತ ಬಿಟ್ಟು, ಬಾಗಿಲನ್ನು ಮುದ್ರೆ ಮಾಡಿ ಹೊರಗೆ ಕಾದಿದ್ದ ಗೊಲ್ಲರು ಮುಂತಾದವರನ್ನು ಕೂಗಿ ಕರೆದು, ಸತ್ತವರ ಹೆಣಗಳನ್ನು ಹೊರಕ್ಕೆ ಸಾಗಿಸಿ, ಉಳಿದವರನ್ನು ಮರುದಿನ ಸಭೆಗೆ ಕರತರುವಂತೆ ಆಜ್ಞಾಪಿಸಿದರು.

ಮಾರನೆ ದಿನ ಸಭೆಯಲ್ಲಿ ವಿಚಾರಿಸಿದಾಗ, ಅವರು ತಿರುಚನಾಪಳ್ಳಿಯ ಅರಸನಿಂದ ಪ್ರೇರೇಪಿತರಾಗಿ ಬಂದರೆಂದು ತಿಳಿಯಿತು. ಆಗ ದೊರೆಗಳು “ನೀವು ತಿರುಚನಾಪಳ್ಳಿಗೆ ಹೋಗಿ ಇಲ್ಲಿ ನಡೆದದ್ದನ್ನು ನಿಮ್ಮ ದೊರೆಗೆ ತಿಳಿಸಿ, ಹೋಗಿ” ಎಂದು ಕಳುಹಿಸಿಬಿಟ್ಟರು.
*****
[ವಂಶರತ್ನಾಕರ ಪುಟ ೮೧; ವಂಶಾವಳಿ ಪುಟ ೭೭-೭೮]

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...