Home / ಕವನ / ಕವಿತೆ / ಬುಗುರಿಹುಳದ ಧ್ಯಾನ

ಬುಗುರಿಹುಳದ ಧ್ಯಾನ

ನಡೆವುದೆಂದರೆ ಹೀಗೆ….
ಪ್ರದಕ್ಷಿಣಿಯೋ ಅಪ್ರದಕ್ಷಿಣಿಯೋ
ಗಿರಗಿರನೆ ಗುಂಡಗೆ
ಬುಗುರಿಹುಳದ
ಇಡೀ ದೇಹವೇ
ವೃತ್ತಾಕಾರ ತಿರುಗುತ್ತಾ
ಗಾಳಿಯಿಲ್ಲದೆಯೂ ಗಿರಗಟ್ಟೆ.

ತಿರುಗುತ್ತಲೇ ಒಂದಿಷ್ಟು ಮುಂದೆ
ಯಾರಿಗೆ ಗೊತ್ತು?
ಹಿಂದಕ್ಕೂ ಆಗಿರಬಹುದು ಆ ನಡಿಗೆ!

ಅದರ ದಾರಿಯುದ್ದಕ್ಕೂ
ಕಲ್ಲು ಮುಳ್ಳು.
ಗುಡುಗುಡಿಸುತ್ತಾ
ಅದನೇರಿ ಇಳಿದು
ತನ್ನ ಸುತ್ತಲೇ ತಾನು
ಗಿರಿಗಿಟ್ಟಲೆ ಆಡಿ
ಖುಷಿಯ ಚಪ್ಪಾಳೆ.

ಬೆನ್ನು ಕೆಳಗಾಗಿ
ಬಿದ್ದು ಕೊಂಡು
ತೊಪ್ಪೆಯ ಗುಪ್ಪೆಯಿಂದ
ಜೊಯ್ಯನೆ ಜಾರಾಟ
ದೇಹವೇ ಪಾದವಾಗಿ
ಬೆನ್ನು ಸವೆಸಿ ಗಿರ್ರನೆ
ಸುತ್ತುತ್ತಾ ಸುತ್ತುತ್ತಾ
ಅಷ್ಟ ದಿಕ್ಕಿಗೂ ನಮಸ್ಕಾರ.

ತೇವದ ಮೆದು
ಮಣ್ಣು ಸ್ಪರ್ಶಿಸಿದೊಡನೇ
ಇಡೀ ದೇಹ ತನ್ನ
ಹೊರ ಕವಚದೊಳಗೆ
ಎಳೆದು ಮುದುರಿಸಿ
ಇಡಿಕಿರಿದು ತುರುಕಿ
ಒಮ್ಮೆ ದೇಹ
ಠರ್ರನೆ ಗುಂಡಗೆ ತಿರುಗಿಸಿ
ಹದ ಮಾಡಿಕೊಂಡು
ದೇಹವೇ ತಾನಾಗಿ
ಸೊಯ್ಯನೊಮ್ಮೆ ಸುತ್ತಿ
ಮಣ್ಣು ಕುಳಿ ಮಾಡಿ
ಅದರೊಳಗೆ ಕಣ್ಣು ಕಿವಿಮುಚ್ಚಿ
ಕಿರ್ರೋ ಧ್ವನಿ ಕೆಲ ಕ್ಷಣ
ಮತ್ತೆ ಗಾಢ ನಿಶ್ಯಬ್ಧ
ದೇಹ ಉರುಟುವ
ಸದ್ದೂ ಇಲ್ಲ!
ಸತ್ತೇ ಹೋಯ್ಯ್ತೋ ಏನೋ?

ಎಷ್ಟು ಕಾಲ ಕಳೆಯಿತೋ ಹೀಗೇ…
ಕೊನೆಗೊಮ್ಮೆ
ಬುಗುರಿಹುಳು
ಮಲ್ಲೊಳಗಿಂದೆದ್ದು
ಹಾರಿತು ಪುರ್ರನೆ
ತನ್ನ ಹೊಸ ರೆಕ್ಕೆ ಬಡಿಯುತ್ತಾ….

ಹೊಸ ಧ್ಯಾನಕ್ಕೆ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...