Home / ಕವನ / ಕವಿತೆ / ಅಮ್ಮನ ಪಡಿಯಚ್ಚು

ಅಮ್ಮನ ಪಡಿಯಚ್ಚು

ಹಸಿರು ಬಳ್ಳಿ ಛಪ್ಪರ ಕಂಡಾಗ
ನೆನಪಗುತ್ತಾಳೆ ನನಗೆ ಅಮ್ಮ
ಅವಳೇ ಕಟ್ಟಿದ್ದ ಛಪ್ಪರದ ಮೇಲೆ
ಹಾಗಲ, ಹೀರೇ, ಪಡುವಲ ಬಳ್ಳಿ
ಕುಂಬಳಕಾಯಿ ಚಳ್ಳವರೆಯ ಹಸಿರು
ಮನೆಮುಂದೆ ದಟ್ಟ ಹಸಿರು ಹಂದರ
ನೆರಳಿತ್ತು ಮನೆಯ ಹಿಂದೆ ಮುಂದೆ
ಬರೀ ಹಸಿರೇ ಹಸಿರಿತ್ತು.

ಅಮ್ಮನ ಆ ಮನೆಗೀಗ
ಸೊಸೆಯ ಆಗಮನವಾಗಿದೆ
ಮಾಡರ್ನ್ ಸೊಸೆ ಹೇಳುತ್ತಾಳೆ
“ರೀ ನನಗೆ ಶೋ ಗಿಡ ಇಷ್ಟ”
ಮಗ ಕ್ಯಾಕ್ಟಸ್, ಪಾಪಾಸು ತಂದ
ಅದಕ್ಕಿಟ್ಟ ಸಮೃದ್ಧ ನೀರು, ಗೊಬ್ಬರ
ಎಲೆಯಿಲ್ಲ, ಕಾಯಿಯಿಲ್ಲ ನೆರಳಿಲ್ಲ
ಎತ್ತರ ನೋಡಿ ಮಗ ಸಂಭ್ರಮಿಸಿದ.

ಅಮ್ಮ ನನ್ನ ತಲೆತುಂಬ ಎಣ್ಣೆ ಹಚ್ಚಿ
ಹೇನು ತೆಗೆದು, ಸೀ‌ರ್ ಒರೆದು
ನೇರ ತಲೆಮಧ್ಯೆ ಬೈತಲೆ ತೆಗೆದು
ದಿಮ್ಮನೆ ಬಿಗಿದು ಎರಡು ಜಡೆ ಮಡಿಚಿಕಟ್ಟಿ
ಮೂರು ದಿನವಾದರೂ ಹಾಳಾಗದಂತೆ
ಹೆಣೆದ ಜಡೆ ಮೇಲೆ ರಿಬ್ಬನ್ನು
ಕಟ್ಟಿದ್ದ ನನ್ನ ಅಮ್ಮ
ನನಗೀಗಲೂ ನೆನೆಪಾಗುತ್ತಾಳೆ.

ಸುಖದ ಸಮಯದಲ್ಲಿ ನಮಗೆ
ಸಾವಿರಾರು ಬಂದುಗಳು ಮಗಳೇ
ದುಃಖದಲ್ಲಿ ಯಾರೂ ಬರುವುದಿಲ್ಲ
ಇದೇ ಈ ಜಗದ ನಿಯಮ
ತಿಳಿದುಕೋ ಮುದ್ದು ಮಗಳೇ
ನಿನ್ನ ಕಾಲ ಮೇಲೆ ನೀ ನಿಂತು
ಬದುಕುವುದ ಕಲಿತುಕೋ
ಹಂಗಿನ ಅನ್ನ ತಿನ್ನಬೇಡ ಮಗಳೇ
ಎಂದು ಬುದ್ಧಿ ಹೇಳುತ್ತಿದ್ದ ಅಮ್ಮ
ನನಗೀಗಲೂ ನೆನಪಗುತ್ತಾಳೆ.

ಅಮ್ಮ ಬದುಕಿದ್ದಾಳೆ ಇಲ್ಲಿಯೇ
ನನ್ನ ಪಡಸಾಲೆಯ ಮುಂದೆಯೇ
ಅಲ್ಲಿ ನನ್ನ ಮನೆ ಮುಂದಿನ ಛಪ್ಪರದಲಿ
ನಾನು ಬೆಳೆಸಿದ್ದೆ; ಅವರೇ, ಕುಂಬಳಕಾಯಿ
ಹೀರೇ, ಹಾಗಲಕಾಯಿ-ಹಸಿರನ ಮಧ್ಯೆ
ಅಮ್ಮನ ನೆರಳಿದೆ ನೋಡು
ಅಣ್ಣ-ಅತ್ತಿಗೆಯರಿಗೆ ಇದು ಕಾಣದಿರಬಹುದು
ನನ್ನ ಮನೆ ಮುಂದಿನ ಹಂದರದಲಿ
ಹಸಿರು ಜೀವ ಚೇತನ ಕಂಡಾಗ
ನನಗೆ ಅಮ್ಮ ನೆನಪಾಗುತ್ತಾಳೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...