Home / ಕವನ / ಕವಿತೆ / ಯಾರು ನಿನಗೆ ಸಮಯದಿ

ಯಾರು ನಿನಗೆ ಸಮಯದಿ

ಯಾರು ನಿನಗೆ ಸಮಯದಿ
ಸಹಾಯ ಮಾಡುವರೋ
ಅವರ ಸ್ನೇಹ ಮಾಡಿಕೊ|
ಯಾರು ನಿನ್ನ ಹಿತವ ಕೋರುವರೋ
ಅವರನೇ ಬಂಧು ಎಂದುಕೊ|
ಎಲ್ಲೇ ಇರಲಿ ಹೇಗೇ ಇರಲಿ
ಒಳ್ಳೆಯತನವ ಬೆಳೆಸಿಕೊ||

ನಿನ್ನ ಬಾಲ್ಯ ಗೆಳೆಯ ನಿನಗೆ
ಸಮಯದಿ ಸಿಗದಿರಬಹುದು|
ನಿನ್ನ ಆತ್ಮೀಯ ಬಂಧುಗಳು
ತಟ್ಟನೆ ಕಷ್ಟಕಾಗದಿರಲೂ ಬಹುದು|
ಸಮಯಗೊದಗಿದವರೇ ನಿನ್ನ ಸ್ನೇಹಿತರು
ಹತ್ತಿರವಿದ್ದವರೇ ನಿನ್ನ ಬಂಧುಗಳೆಂದುಕೊ||

ನೀನೂ ನಿನ್ನ ಸ್ನೇಹಿತನಿಗೆ
ಸಮಯಕಾಗದಿರಬಹುದು!
ಎಂದಮಾತ್ರಕೆ ನೀ ಅವನ
ಆಪ್ತವಿತ್ರನಲ್ಲವೇನು?|
ಅಷ್ಟೂ ದಿನದ ನಿನ್ನ ಸ್ನೇಹವನು
ಮರೆಯಲು ಸಾಧ್ಯವೇನು?
ಬಂಧುಗಳು ಸದಾ ಜೊತೆಗೆ
ಇಲ್ಲದಲೇ‌ಇರಬಹುದು
ಅಂದಮಾತ್ರಕೆ ಬಂಧುಗಳೇ
ಅಲ್ಲವೇನು?||

ಯಾರದೆಷ್ಟು ಪುಣ್ಯ ಇರುವುದೋ
ಅಷ್ಟೇ ಭಾಗ್ಯ ಸಿಗುವುದು|
ಯಾರಲಿ ನಿನ್ನ ಋಣವಿರುವುದೋ
ಅದುವೇ ಮಾತ್ರ ನಿನಗೆ ಲಭಿಸುವುದು|
ಸಂಬಂಧಗಳ ಬಂಧ ಅತೀ ಸೂಕ್ಷ್ಮ
ಒರೆಗಚ್ಚುವುದು ಅನುಮಾನಿಸುವುದು ತರವೇ|
ಗಾಜಿನಮನೆಯಲ್ಲಿದ್ದುಕೊಂಡು
ಬೇರೆಯವರ ಗಾಜಿನಮನೆಗೆ
ಕಲ್ಲು ತೂರುವುದು ನ್ಯಾಯವೇ?||
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...