Home / ಕವನ / ಕವಿತೆ / ನಮ್ಮಭಾಗ್ಯ

ನಮ್ಮಭಾಗ್ಯ

ಓ ನನ್ನ ಸೌಭಾಗ್ಯ!
ಇಲ್ಲಿಹುದು ನೋಡು ನಮ್ಮ ನಿಜ ಭಾಗ್ಯ
ನೋಡು! ಆಡು ಹಾಡು
ನೀನು ನೀನೇ ಆಗು.

ಆಗಸವ ತುಂಬಿವೆ
ಮದದಾನೆ ಹಿಂಡಂತೆ
ಗಾಂಭೀರ್‍ಯ, ಚೆಲುವಿನ ಬಿಳಿ ಮೋಡ ದಂಡು.

ಬೆಳಗುತಿಹವು
ಸುಮಂಗಲಿಯ ಕೊರಳ ಸರದ ಮುತ್ತು ಹವಳದಂತೆ
ಬೆಟ್ಟ ಗುಡ್ಡ ಸಾಲು

ವಾತ್ಸಲ್ಯ ತಾಯ ನೇವರಿಕೆಯಾಗಿ
ಪುಳಕವನು ತರುತಿಹುದು
ಅಪರೂಪ ಹೂ ಗಂಧ ಗಾಳಿ.
ಮಾನವನ ಬೆವರಿಗೆ
ಧರೆ ಪುಷ್ಪವತಿಯಾಗಿ
ಉದ್ದಕ್ಕೂ ನೆರೆದಿದೆ
ಹುಚ್ಚುಚ್ಚು ಹಸುರಿನ ಫಲಪೈರು.

ಸಂತಸದಿ ವಿಹರಿಸಲು ಬಂದ ಸುರಲೋಕ ಸುಂದರರು
ಈ ಪಕ್ಷಿ ಸಂಕುಲ
ಅದೆಷ್ಟು ರಮ್ಯ!
ಕೇಳುತಿರೆ, ಇವುಗಳ ಗಾನ, ಕೇಳಿಗಳ ಮಧುರ ಕಲರವ.
ತಾಯ ಮಡಿಲ ಚಿಣ್ಣರಾಟದಂತೆ
ಕಣ್ಣು ಕಟ್ಟುತಿಹುದು, ಈ ನೋಟ
ಈ ಪ್ರಾಣಿಗಳೆಲ್ಲದರ ಆಟ, ಚೆಲ್ಲಾಟ, ನಲಿದಾಟ

ಬಾ! ಬಾ! ಬೆಡಗಿ
ಇಲ್ಲಿವೆ ನೋಡು
ತರ ತರದ ಹೂವು
ಆರಿಸಿ ಕೊಡುವೆ
ಮುಡಿ ಬಾರೆ ನೀನು
ನಿನಗೆ ಬೇಕಾದ ಹೂವು
ಇದು ತಾರಲಿಲ್ಲವೆ ನಿನಗೆ ಸಂತಸ ಹಿಗ್ಗ
ಈಗ್ಹೇಳು
ಎಲ್ಲಿದೆ ಆ ನಿನ್ನ ಸ್ವರ್ಗ?
ನೋಡು! ನೋಡು!
ಇದು ನಮ್ಮ ಭಾಗ್ಯ! ಇದುವೆ ನಮ್ಮ ನಿಜ ಸೌಭಾಗ್ಯ!
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...