Home / ಕಥೆ / ಕಿರು ಕಥೆ / ಪ್ರಾಮಾಣಿಕ ಅನಿಸಿಕೆ

ಪ್ರಾಮಾಣಿಕ ಅನಿಸಿಕೆ

ಸಂಜೆ ಸಮಯ.

ಅವನು ಒಳಗೆ ಬಂದ. ತನ್ನ ಮಾದಕ ನೋಟದಿಂದ ಅವಳು ಅವನನ್ನು ಬಾಗಿಲಲ್ಲಿಯೇ ಸ್ವಾಗತಿಸಿದಳು. ಅವಳ ಲಿಪ್‌ಸ್ಟಿಕ್ ತುಟಿ, ಪೌಡರ್‍ ಮೆತ್ತಿದ ಕೆನ್ನೆಯ ಗುಳಿ ಅವನನ್ನು ರೋಮಾಂಚನಗೊಳಿಸಿದವು. ಆಕೆಯ ತುರುಬು ಶೃಂಗರಿಸಿದ್ದ ಮಲ್ಲಿಗೆಯ ಗಜರಾವನ್ನು ಅವನು ಮೂಸಿದ.

ಪಲ್ಲಂಗದ ಮೇಲೆ ಕುಳಿತುಕೊಳ್ಳುತ್ತ ಅವಳನ್ನು ಬರಸೆಳೆದು ತಬ್ಬಿಕೊಂಡು ಇಡೀ ಮೈಯನನ್ನು ಮುದ್ದಿಸತೊಡಗಿದ. ಅವನೊಂದಿಗೆ ಅವಳೂ ತೀವ್ರವಾಗಿ ಸ್ಪಂದಿಸತೊಡಗಿದಳು.

ಅವಳ ದೇಹ ಸೊಬಗಿಗೆ ಸಂಪೂರ್ಣ ಸೋತುಹೋದ ಅವನು ಉತ್ಕಟವಾಗಿ ಉಲಿತ “ನೀನಿಲ್ಲದ ಪ್ರತಿಯೊಂದು ಕ್ಷಣಗಳು ನನಗೆ ಶೂನ್ಯ.”

“ನನಗೂ ಅಷ್ಟೆ” ಆಕೆ ಮೋಹಕವಾಗಿ ಪ್ರತಿಕ್ರಿಯಿಸಿದಳು.

“ನನ್ನ ನಿನ್ನ ಸಂಬಂಧ ಜನ್ಮಾಂತರದ್ದು ಅನಿಸುವುದು.”

“ಹೌದು”.

“ನನ್ನ ಹೆಂಡತಿಯಲ್ಲಿ ಇಲ್ಲದ ಆಕರ್ಷಣೆ ನಿನ್ನಲ್ಲಿದೆ.”

“ಎಲ್ಲರೂ ಹಾಗೆ ಹೇಳುವರು.”

“ಎಲ್ಲರಂತಲ್ಲ ನಾನು. ನಿನ್ನನ್ನು ತುಂಬಾ ಇಷ್ಟಪಡುತ್ತೇನೆ.”

“ನಾನೂ ಅಷ್ಟೇ.”

“ನಿನಗಾಗಿ ನನ್ನ ಹೆಂಡತಿಯನ್ನು ಬಿಡುತ್ತೇನೆ ನಾನು.”

“ಏಕೆ?”

“ನನ್ನೆದೆಯಲ್ಲಿ ನೀನು ಹೆಪ್ಪುಗಟ್ಟಿರುವೆ.”

ಆಕೆ ಮಾತನಾಡದೆ ಅವನೆದೆಯ ಮೇಲೆ ಒರಗಿ ತನ್ನ ಕಣ್ಣು ರೆಪ್ಪೆ ಪಿಳುಕಿಸಿದಳು.

“ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ.”

ಅವಳು ಉತ್ಸಾಹದಿಂದ ಕೆನ್ನೆ ಕುಣಿಸಿ ನಕ್ಕಳು.

“ನೀನು…..?” ಅವನು ಕೇಳಿದ.

“ನಾನು ನಿನ್ನ ಹಾಗೆ ಸುಳ್ಳು ಹೇಳುವುದಿಲ್ಲ” ಆಕೆ ಎದ್ದು ಕುಳಿತಳು.

“ಅಂದರೆ….?” ಗಲಿಬಿಲಿಯಾಗಿ ಕೇಳಿದ ಅವನು.

“ನಾನು ನಿನ್ನ ಹಣವನ್ನು ಪ್ರೀತಿಸುತ್ತೇನೆ” ಎದೆಯ ಮಾತು ಹೇಳಿದಳಾಕೆ.

ಆಕಾಶದಿಂದ ಬಿದ್ದವನಂತೆ ತತ್ತರಿಸಿದ ಅವನು ಭ್ರಮೆಯ ಪದರುಗಳಿಂದ ಹೊರಬಂದಂತೆ ಕಣ್ಣು ಹಿಗ್ಗಿಸಿ ಹೇಳಿದ “ನೀನು ಪಕ್ಕಾ ವೇಶ್ಯೆ!”

“ಅದು ಜಗತ್ತಿಗೆ ಗೊತ್ತು” ಎಂದಾಕೆ ಅವನು ಮೂಸಿದ ಗಜರಾ ಕಿತ್ತೆಸೆದು ಬಾಗಿಲಿನತ್ತ ಒಗೆದಳು.

*****

 

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...