Home / ಕವನ / ಕವಿತೆ / ಏನಪರಾಧ ಮಾಡಿದೆನೆಂದು?

ಏನಪರಾಧ ಮಾಡಿದೆನೆಂದು?

ಏನಪರಾಧ ಮಾಡಿದೆನೆಂದು?
ನನಗೀಗತಿಯನು
ನೀ ದಯಪಾಲಿಸಿದೆ|
ನನ್ನಯ ಸತ್ಯದೀಕ್ಷೆಗೇಕಿಂತ
ಪರೀಕ್ಷೆಯ ವಿಧಿಸಿದೆ ವಿಧಿಯೆ|
ಕಾಪಾಡು ಕರುಣಾಳು
ಕಾಶಿಪುರ ಪೋಷಿಪನೆ
ಶಂಕರ ಶಶಿಧರನೆ||

ಸೂರ್ಯವಂಶದರಸನಾಗಿ ಎಲ್ಲರನು
ಸಮಾನತೆಯಿಂದ ನೋಡುತಲಿದ್ದೆ|
ದಾನ ಪುಣ್ಯಾದಿ ಸತ್ಕಾರ್ಯಾಗಳ
ಧರ್ಮ ಬುದ್ಧಿಗನುಸಾರವಾಗಿ ಯೋಚಿಸಿ
ಯತೋಚಿತವಾಗಿ ನಿರ್ವಹಿಸಿದೆ|
ವಯೋವೃದ್ದರು ಬಾಲಕರು ಸ್ತ್ರೀಯರ
ಆದರಿಸಿ ಪ್ರೀತಿಸಿ ಗೌರವಿಸಿದೆ||

ರಾಜಧರ್ಮ ಸತ್ಯಮಾರ್ಗ
ಕರುಣಾ ನೀತಿ ನಿಯಮ
ಅನುಸರಿಸಿಯೇ ನಡೆದೆ|
ಹಿಂದೆ ಮಾಡಿದ ಕರ್ಮಫಲವು
ಮುಂದೆ ಪುಣ್ಯ ನೀಡಲು ಪರೀಕ್ಷೆಯೊ?
ಏನೊಂದನೂ ಅರಿಯೆ|
ಮಡದಿ ಮಗನನು ಜೀತಕ್ಕಿರಿಸಿ
ಋಣಮಕ್ತನಾಗೆ ಸ್ಮಶಾನ ಸೇವೆ ಗೈಯುತಿರುವೆ||

ಕ್ಷಾತ್ರಧರ್ಮಕ್ಕನುಸಾರವಾಗಿ
ದಾನ ಸ್ವೀಕರಿಸುವಂತಿಲ್ಲ|
ಕೈತುಂಬಾ ಮುತ್ತು ರತ್ನಗಳ
ದಾನ ನೀಡುತ್ತಿದ್ದ ಕೈಗಳೀಗ
ನಿರ್ಜೀವ ದೇಹ ಅಸ್ತಿಗಳನು
ಅಗ್ನಿಗೆ ಅರ್ಪಿಸುತಲಿಹವು|
ಸ್ಮಶಾನ ಸುಂಕದೊಂದು ಭಾಗವ
ಸ್ವೀಕರಿಸಿ ಹೊಟ್ಟೆಹೊರೆಯುತಿರುವೆ|
ಮಡದಿ ಮಕ್ಕಳೆಲ್ಲೊ?
ಗಂಡ ಹೆಂಡತಿ ಮಗ ಒಂದೆಡೆಸೇರಿ|
ಸಾಮಾನ್ಯ ಜನರ ಜೀವನ ನಡೆಸೆ
ಭಾಗ್ಯವ ಕರುಣಿಸು, ಸತ್ಯವ ಜಯಿಸು
ನನ್ನೀ ಸತ್ಯ ವ್ರತವನು ಪೂರ್ಣಗೂಳಿಸು||
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...