Home / ಕವನ / ಕವಿತೆ / ಏನಪರಾಧ ಮಾಡಿದೆನೆಂದು?

ಏನಪರಾಧ ಮಾಡಿದೆನೆಂದು?

ಏನಪರಾಧ ಮಾಡಿದೆನೆಂದು?
ನನಗೀಗತಿಯನು
ನೀ ದಯಪಾಲಿಸಿದೆ|
ನನ್ನಯ ಸತ್ಯದೀಕ್ಷೆಗೇಕಿಂತ
ಪರೀಕ್ಷೆಯ ವಿಧಿಸಿದೆ ವಿಧಿಯೆ|
ಕಾಪಾಡು ಕರುಣಾಳು
ಕಾಶಿಪುರ ಪೋಷಿಪನೆ
ಶಂಕರ ಶಶಿಧರನೆ||

ಸೂರ್ಯವಂಶದರಸನಾಗಿ ಎಲ್ಲರನು
ಸಮಾನತೆಯಿಂದ ನೋಡುತಲಿದ್ದೆ|
ದಾನ ಪುಣ್ಯಾದಿ ಸತ್ಕಾರ್ಯಾಗಳ
ಧರ್ಮ ಬುದ್ಧಿಗನುಸಾರವಾಗಿ ಯೋಚಿಸಿ
ಯತೋಚಿತವಾಗಿ ನಿರ್ವಹಿಸಿದೆ|
ವಯೋವೃದ್ದರು ಬಾಲಕರು ಸ್ತ್ರೀಯರ
ಆದರಿಸಿ ಪ್ರೀತಿಸಿ ಗೌರವಿಸಿದೆ||

ರಾಜಧರ್ಮ ಸತ್ಯಮಾರ್ಗ
ಕರುಣಾ ನೀತಿ ನಿಯಮ
ಅನುಸರಿಸಿಯೇ ನಡೆದೆ|
ಹಿಂದೆ ಮಾಡಿದ ಕರ್ಮಫಲವು
ಮುಂದೆ ಪುಣ್ಯ ನೀಡಲು ಪರೀಕ್ಷೆಯೊ?
ಏನೊಂದನೂ ಅರಿಯೆ|
ಮಡದಿ ಮಗನನು ಜೀತಕ್ಕಿರಿಸಿ
ಋಣಮಕ್ತನಾಗೆ ಸ್ಮಶಾನ ಸೇವೆ ಗೈಯುತಿರುವೆ||

ಕ್ಷಾತ್ರಧರ್ಮಕ್ಕನುಸಾರವಾಗಿ
ದಾನ ಸ್ವೀಕರಿಸುವಂತಿಲ್ಲ|
ಕೈತುಂಬಾ ಮುತ್ತು ರತ್ನಗಳ
ದಾನ ನೀಡುತ್ತಿದ್ದ ಕೈಗಳೀಗ
ನಿರ್ಜೀವ ದೇಹ ಅಸ್ತಿಗಳನು
ಅಗ್ನಿಗೆ ಅರ್ಪಿಸುತಲಿಹವು|
ಸ್ಮಶಾನ ಸುಂಕದೊಂದು ಭಾಗವ
ಸ್ವೀಕರಿಸಿ ಹೊಟ್ಟೆಹೊರೆಯುತಿರುವೆ|
ಮಡದಿ ಮಕ್ಕಳೆಲ್ಲೊ?
ಗಂಡ ಹೆಂಡತಿ ಮಗ ಒಂದೆಡೆಸೇರಿ|
ಸಾಮಾನ್ಯ ಜನರ ಜೀವನ ನಡೆಸೆ
ಭಾಗ್ಯವ ಕರುಣಿಸು, ಸತ್ಯವ ಜಯಿಸು
ನನ್ನೀ ಸತ್ಯ ವ್ರತವನು ಪೂರ್ಣಗೂಳಿಸು||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...