Home / ಲೇಖನ / ವಿಜ್ಞಾನ / ಜನಸಂಖ್ಯಾ ಸ್ಫೋಟ

ಜನಸಂಖ್ಯಾ ಸ್ಫೋಟ

ಕಳೆದ ದಶಕದ ಕೊನೆಯಲ್ಲಿ ಬೆಂಗಳೂರಿದ ಜನಸಂಖ್ಯೆ ೪೭ ಲಕ್ಷ ವಿತ್ತು, ಕೇವಲ ೧೦ ವರ್ಷಗಳ ಅವಧಿಯಲ್ಲಿ ೮೦ ಲಕ್ಷವನ್ನು ಮೀರಿದೆ. ಇದು ಬೆಂಗಳೂರಿನಂತಹ ಒಂದು ನಗರದ ಕಥೆಯಲ್ಲ ಏಷಿಯಾ, ಲ್ಯಾಟಿನ, ಆಫ್ರಿಕಾ, ಅಮೇರಿಕಾದಂತಹ ನಗರಗಳಲ್ಲಿಯೂ ಕೂಡ ಜನಸಂಖ್ಯೆಯ ಸ್ಫೋಟ ದಿನೇ ದಿನೇ ಆಗುತ್ತಲೇ ಇದೆ. ಅಭಿವೃದ್ಧಿಯ ಅಗ್ರಪಂಕ್ತಿಯಲ್ಲಿರುವ ಜಪಾನ್ ದೇಶದ ಟೋಕಿಯೋ ಅಮೇರಿಕೆಯ ಪ್ರಮುಖ ನಗರ ನ್ಯೂಯಾರ್ಕ, ಜರ್ಮನಿಯ, ಬರ್ಲಿನ್, ಫ್ರಾನ್ಸಿನ ಪ್ಯಾರಿಸ್ ಜನಸಂಖ್ಯೆಯ ಸ್ಫೋಟದಿಂದ ನಾಗರೀಕರು ತಲ್ಲಣಗೊಳ್ಳುತ್ತಿದ್ದಾರೆ.

ಮುಂದಿನ ಶತಮಾನದಲ್ಲಿ ಭೂಮಿಯ ಮೇಲಿನ ಜನಸಂಖ್ಯೆ ಅಂದಾಜಿಗಿಂತ ಹೆಚ್ಚಾಗುವುದು ನಿಶ್ಚಿತ. ನಾಗರೀಕತೆಯ ವಿಕಾಸದ ತುತ್ತತುದಿಯನ್ನು ತಲುಪಿರುವ ಮಾನವ ಸಂಖ್ಯೆ ೨೦೫೦ರ ವೇಳೆಗೆ ೧,೦೦೦ ಕೋಟಿ (೧೦ ಬಿಲಿಯನ್) ಯನ್ನು ದಾಟಲಿದೆ. ಜಪಾನಿನಲ್ಲಿ ನೆಲದ ಮೇಲೆ ವಾಸ ಮಾಡಲಿಕ್ಕೆ ಸ್ಥಳವೇ ಸಿಗಲಾರದು. ಈಗಾಗಲೇ ಪ್ರತಿ ಕಿ.ಮೀ. ಗಳಿಗೆ ೮,೬೦೦ ಜನಸಂದಣಿ ಇದೆ. ೭ ಕೋಟಿ ಜನಸಂಖ್ಯೆಯ ಸಂದಣಿಯನ್ನು ಭರಿಸಲಾರದೇ ಜಪಾನಿನ ನಗರಗಳು ತುಳುಕುತ್ತಿವೆ. ನೆಲದ ಮೇಲೆ ಸ್ಥಳವಿಲ್ಲದೇ ನೆಲಕ್ಕಾಗಿ (ಕಾಲೂರಲು) ಹುಡುಕಾಟ ನಡೆಯುತ್ತಲಿದೆ. ಈಗಿರುವ ದಾರಿ ಎಂದರೆ ನೆಲದಾಳದಲ್ಲಿಯೋ ಸಮುದ್ರ ಮಧ್ಯೆ ಅಥವಾ ಸಮುದ್ರ ತೀರಗಳಲ್ಲೋ ಅಥವಾ ಅಂತರೀಕ್ಷದಲ್ಲಿಯೇ ನಗರಗಳನ್ನು ನಿರ್ಮಾಣ ಮಾಡಿಯೇ ಜೀವಿಸುವ ಸಂದರ್ಭ ಬಂದಿದೆ.

ಕ್ರಿ.ಶ. ೨೦೫೦ ರವೇಳೆಗೆ ಚಂದ್ರಗ್ರಹದ ಮೇಲೆ ಜನವಸತಿಯ ವಸಾಹತು ಆರಂಭವಾಗಲಿದೆಯಂತೆ. ಈ ನವನಗರಗಳ ನಿರ್ಮಾಣಗಳಿಂದ ನಗರ ಜೀವನ ಸಮಸ್ಯೆಗಳಿಲ್ಲದೆ ಸಾಧ್ಯವೇ ಎಂಬ ಪ್ರಶ್ನೆ. ಮುಂದಾದರೂ ವಿಜ್ಞಾನದಲ್ಲಿ ಹೊಸದನ್ನು ಸಾಧಿಸುತ್ತಲೇ ಇರುವ ಸಂಶೋಧಕರು ಎಲ್ಲಡೆಯಲ್ಲೂ ಜನರನ್ನು ಭರ್ತಿಮಾಡಬಹುದೆನ್ನುತ್ತಾರೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...