Home / ಲೇಖನ / ವಿಜ್ಞಾನ / ಜನಸಂಖ್ಯಾ ಸ್ಫೋಟ

ಜನಸಂಖ್ಯಾ ಸ್ಫೋಟ

ಕಳೆದ ದಶಕದ ಕೊನೆಯಲ್ಲಿ ಬೆಂಗಳೂರಿದ ಜನಸಂಖ್ಯೆ ೪೭ ಲಕ್ಷ ವಿತ್ತು, ಕೇವಲ ೧೦ ವರ್ಷಗಳ ಅವಧಿಯಲ್ಲಿ ೮೦ ಲಕ್ಷವನ್ನು ಮೀರಿದೆ. ಇದು ಬೆಂಗಳೂರಿನಂತಹ ಒಂದು ನಗರದ ಕಥೆಯಲ್ಲ ಏಷಿಯಾ, ಲ್ಯಾಟಿನ, ಆಫ್ರಿಕಾ, ಅಮೇರಿಕಾದಂತಹ ನಗರಗಳಲ್ಲಿಯೂ ಕೂಡ ಜನಸಂಖ್ಯೆಯ ಸ್ಫೋಟ ದಿನೇ ದಿನೇ ಆಗುತ್ತಲೇ ಇದೆ. ಅಭಿವೃದ್ಧಿಯ ಅಗ್ರಪಂಕ್ತಿಯಲ್ಲಿರುವ ಜಪಾನ್ ದೇಶದ ಟೋಕಿಯೋ ಅಮೇರಿಕೆಯ ಪ್ರಮುಖ ನಗರ ನ್ಯೂಯಾರ್ಕ, ಜರ್ಮನಿಯ, ಬರ್ಲಿನ್, ಫ್ರಾನ್ಸಿನ ಪ್ಯಾರಿಸ್ ಜನಸಂಖ್ಯೆಯ ಸ್ಫೋಟದಿಂದ ನಾಗರೀಕರು ತಲ್ಲಣಗೊಳ್ಳುತ್ತಿದ್ದಾರೆ.

ಮುಂದಿನ ಶತಮಾನದಲ್ಲಿ ಭೂಮಿಯ ಮೇಲಿನ ಜನಸಂಖ್ಯೆ ಅಂದಾಜಿಗಿಂತ ಹೆಚ್ಚಾಗುವುದು ನಿಶ್ಚಿತ. ನಾಗರೀಕತೆಯ ವಿಕಾಸದ ತುತ್ತತುದಿಯನ್ನು ತಲುಪಿರುವ ಮಾನವ ಸಂಖ್ಯೆ ೨೦೫೦ರ ವೇಳೆಗೆ ೧,೦೦೦ ಕೋಟಿ (೧೦ ಬಿಲಿಯನ್) ಯನ್ನು ದಾಟಲಿದೆ. ಜಪಾನಿನಲ್ಲಿ ನೆಲದ ಮೇಲೆ ವಾಸ ಮಾಡಲಿಕ್ಕೆ ಸ್ಥಳವೇ ಸಿಗಲಾರದು. ಈಗಾಗಲೇ ಪ್ರತಿ ಕಿ.ಮೀ. ಗಳಿಗೆ ೮,೬೦೦ ಜನಸಂದಣಿ ಇದೆ. ೭ ಕೋಟಿ ಜನಸಂಖ್ಯೆಯ ಸಂದಣಿಯನ್ನು ಭರಿಸಲಾರದೇ ಜಪಾನಿನ ನಗರಗಳು ತುಳುಕುತ್ತಿವೆ. ನೆಲದ ಮೇಲೆ ಸ್ಥಳವಿಲ್ಲದೇ ನೆಲಕ್ಕಾಗಿ (ಕಾಲೂರಲು) ಹುಡುಕಾಟ ನಡೆಯುತ್ತಲಿದೆ. ಈಗಿರುವ ದಾರಿ ಎಂದರೆ ನೆಲದಾಳದಲ್ಲಿಯೋ ಸಮುದ್ರ ಮಧ್ಯೆ ಅಥವಾ ಸಮುದ್ರ ತೀರಗಳಲ್ಲೋ ಅಥವಾ ಅಂತರೀಕ್ಷದಲ್ಲಿಯೇ ನಗರಗಳನ್ನು ನಿರ್ಮಾಣ ಮಾಡಿಯೇ ಜೀವಿಸುವ ಸಂದರ್ಭ ಬಂದಿದೆ.

ಕ್ರಿ.ಶ. ೨೦೫೦ ರವೇಳೆಗೆ ಚಂದ್ರಗ್ರಹದ ಮೇಲೆ ಜನವಸತಿಯ ವಸಾಹತು ಆರಂಭವಾಗಲಿದೆಯಂತೆ. ಈ ನವನಗರಗಳ ನಿರ್ಮಾಣಗಳಿಂದ ನಗರ ಜೀವನ ಸಮಸ್ಯೆಗಳಿಲ್ಲದೆ ಸಾಧ್ಯವೇ ಎಂಬ ಪ್ರಶ್ನೆ. ಮುಂದಾದರೂ ವಿಜ್ಞಾನದಲ್ಲಿ ಹೊಸದನ್ನು ಸಾಧಿಸುತ್ತಲೇ ಇರುವ ಸಂಶೋಧಕರು ಎಲ್ಲಡೆಯಲ್ಲೂ ಜನರನ್ನು ಭರ್ತಿಮಾಡಬಹುದೆನ್ನುತ್ತಾರೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...