Home / ಲೇಖನ / ವಿಜ್ಞಾನ / ಪರಿಸರ ಮಾಲಿನ್ಯವಿಲ್ಲದ ಸೌರಶಕ್ತಿಕಾರು (ನೂತನ ಪ್ರಯೋಗ)

ಪರಿಸರ ಮಾಲಿನ್ಯವಿಲ್ಲದ ಸೌರಶಕ್ತಿಕಾರು (ನೂತನ ಪ್ರಯೋಗ)

ಬೆಂಗಳೂರಿನ ಅಜಾದ್ ನಗರದ ವಾಸಿ ಸೈಯ್ಯದ್ ಅಹಮ್ಮದ್ ಅವರಿಗೆ ಸೌರಶಕ್ತಿಯಲ್ಲಿ ಗಾಡಿ ಓಡಿಸುವ ಬಯಕೆಯ ತೀವ್ರತೆಯಿಂದಾಗಿ ಕಳೆದ ೩೦ ವರ್‍ಷಗಳ ಸತತ ಪ್ರಯತ್ನದ ಫಲವಾಗಿ ಸೌರಶಕ್ತಿಯಿಂದ ಕಾರು, ಮೂರುಚಕ್ರ, ದ್ವಿಚಕ್ರ ವಾಹನಗಳನ್ನು ಆರಾಮವಾಗಿ ಒಡಿಸಬಹುದೆಂದು ಸಾಬೀತು ಪಡಿಸಿದ್ದಾರೆ. (ಕಡಿಮೆ ವ್ಯಚ್ಚದಲ್ಲಿ) ವೃತ್ತಿಯಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಮಾರಾಟ ಮಾಡುತ್ತಿರುವ ಅಹಮ್ಮದ್ ಏನನ್ನಾದರೂ ಸಾಧಿಸಬೇಕೆಂಬ ಛಲವುಳ್ಳವರು. ತಮ್ಮ ಕೈಗೆ ಸಿಕ್ಕ ವಸ್ತುಗಳನ್ನು (ಉಪಕರಣ) ಬಳಸಿಕೊಂಡು, ಅದಕ್ಕೊಂದು ರೂಪನೀಡಿ ಸೂರ್ಯನ ಶಾಖಾವನ್ನು ಹಾಯಿಸಿ ಪರಿಸರ ಪ್ರೇಮಿ ಕಾರೊಂದನ್ನು ಕೊನೆಗೂ ಸಿದ್ಧಪಡಿಸಿದರು. ಈ ಕಾರಿಗೆ ಇವರು ಖರ್ಚು ಮಾಡಿರುವುದು ಕೇವಲ ೫೦ ಸಾವಿರ ರೂಪಾಯಿಗಳು ಮಾತ್ರ. ಸೌರಶಕ್ತಿ ಚಾಲಿತ ಈ ಕಾರು ೩೨೫ ಕೆ.ಜಿ. ತೂಗುತ್ತದೆ. ಮೋಡ ಸೂರ್ಯನನ್ನು ಮುಚ್ಚಿಕೊಂಡ ಸಂದರ್ಭದಲ್ಲಿಯೂ ಕಾರುಕೆಡದೆಂಬ ಆತಂಕ ಪಡಬೇಕಿಲ್ಲ ಈ ಕಾರಿಗೆ ವಿಶೇಷ ಬ್ಯಾಟರಿ ವ್ಯವಸ್ಥೆಯನ್ನು ಮಾಡಲಾಗಿದೆ. ಒಮ್ಮೆ ಬ್ಯಾಟ್ರಿ ಚಾರ್ಜ್ ಮಾಡಿದರೆ ನೂರು ಕಿ.ಮೀ. ಗಾಡಿ ಓಡಿಸಬಹುದು.

ಈ ಕಾರು ಇತರೆ ಕಾರುಗಳಂತೆ ಸದ್ದು ಮಾಡುವುದಿಲ್ಲ ಹೊಗೆಯನ್ನು ಉಗಳುವುದೇ ಇಲ್ಲ ಗೇರು ಬದಲಿಸುವ ಗೊಂದಲ ಇಲ್ಲ. ಗಾಡಿಹತ್ತಿ ಸೀದಾ ಸ್ಟೇರಿಂಗ್ ತಿರುಗಿಸುತ್ತ ಹೋಗುವುದಷ್ಟೇ ಕೆಲಸ. ಈಗಾಗಲೇ ಬೆಂಗಳೂರಿನ ಸುತ್ತಮುತ್ತ ಎಲ್ಲಿಯೂ ಕೈ ಕೊಡದ ಈ ಕಾರು ಯಶಸ್ವಿಯಾಗಿದೆ. ಬಡವರಿಗೆ ಕೈ ಗೆಟಕುವ ಬೆಲೆಯಲ್ಲಿ ಸಿಗುವ ಈ ಕಾರು ಶ್ರೀಮಂತರಿಗೆ ಮಾಲಿನ್ಯ ರಹಿತ ಈ ಕಾರನ್ನು ಓಡಿಸುವಾಗ ತೃಪ್ತಿಯನ್ನು ನೀಡುತ್ತದೆ. ಪರಿಸರ ಮಾಲಿನ್ಯವಿಲ್ಲದೇ ಕೇವಲ ಸೌರಶಕ್ತಿಯಿಂದಲೇ ನಡೆಯುವ ಈ ಕಾರು ಪರಿಸರವಾದಿಗಳಿಗೆಲ್ಲ ಅತ್ಯಂತ ಅಚ್ಚು ಮೆಚ್ಚಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...