Home / ಕಥೆ / ಸಣ್ಣ ಕಥೆ / ಕೆಂಬಲ್ಲಿನ ಗೆಲುವು

ಕೆಂಬಲ್ಲಿನ ಗೆಲುವು

ರಾಜ ಒಡೆಯರವರು ಶ್ರೀರಂಗಪಟ್ಟಣದಲ್ಲಿದ್ದ ತಿರುಮಲ ರಾಯನ ಆಸ್ಥಾನಕ್ಕೆ ಹೋಗುತ್ತಲಿರಬೇಕಾಗಿತ್ತು. ಏಕೆಂದರೆ ಆಗಿನಕಾಲದ ಪಾಳಯಗಾರರೂ ಒಡೆಯರೂ ವಿಜಯನಗರದ ಅರಸರಿಗೆ ಅಧೀನರಾಗಿದ್ದು ಶ್ರೀರಂಗಪಟ್ಟಣದಲ್ಲಿದ್ದ ಅವರ ಪ್ರತಿನಿಧಿಯ ವಶವರ್ತಿಗಳಾಗಿದ್ದರು. ಶ್ರೀರಂಗಪಟ್ಟಣಕ್ಕೆ ಹೋಗುವ ಮಾರ್ಗದಲ್ಲಿ ಒಡೆಯರೂ ಪಾಳಯಗಾರರೂ ಪರಸ್ಪರ ಸೇರಿ ಜಗಳವಾಡುವುದು ಸಾಮಾನ್ಯವಾಗಿತ್ತು.

ಶ್ರೀರಂಗಪಟ್ಟಣಕ್ಕೆ ರಾಜ ಒಡೆಯರು ತಮ್ಮ ಮೈಗಾವಲಿನ ಭಟರೊಡನೆಯೂ ವಾಲಗ ಮೇಳದೊಡನೆಯೂ ಹೊರಟರು. ದಾರಿಯಲ್ಲಿ ಕೆಂಬಲ್ಲೆಂಬ ಗ್ರಾಮದ ಒಡೆಯನೂ ಅದೇ ರೀತಿಯಲ್ಲಿ ಮೇಳತಾಳಗಳೊಡನೆ ಹೋಗುತ್ತಿದ್ದನು. ರಾಜ ಒಡೆಯರಿಗೆ ಇದು ಅವಮಾನವಾಗಿ ತೋರಿತು. “ಮೇಳತಾಳಗಳೊಡನೆ ನಮ್ಮೆದುರಿಗೆ ಯಾರು ಹೋಗುತ್ತಿರುವವರು” ಎಂದು ಕೇಳಲು “ಕೆಂಬಲ್ಲಿನ ಒಡೆಯರು” ಎಂಬ ಉತ್ತರ ಬಂತು. ಕೂಡಲೆ ರಾಜ ಒಡೆಯರು ತಮ್ಮ ವಾದ್ಯಗಳನ್ನು ನಿಲ್ಲಿಸುವಂತೆ ಆಜ್ಞೆ ಮಾಡಿದರು. ಸದ್ದಿಲ್ಲದೆ ಶ್ರೀರಂಗಪಟ್ಟಣವನ್ನು ಸೇರಿ ತಿರುಮಲರಾಯರ ಆಸ್ಥಾನವನ್ನು ಹೊಕ್ಕರು. ಇದನ್ನು ಕಂಡು ತಿರುಮಲರಾಯರು “ಇದೇನು ರಾಜ ಒಡೆಯರೇ ತಮ್ಮ ಪದವಿಗೆ ತಕ್ಕಂತೆ ಮೇಳತಾಳಗಳೊಡನೆ ಪ್ರವೇಶಮಾಡದೆ ಮೌನದಿಂದ ಬಂದಿರಿ?” ಎಂದು ಕೇಳಲು ರಾಜ ಒಡೆಯರು ಕ್ರೋಧದಿಂದ “ಮೇಳತಾಳಗಳನ್ನು ನಮಗಿಂತಲೂ ಕೀಳಾದವರೂ ಇಟ್ಟುಕೊಳ್ಳುವಾಗ ಅದರಿಂದ ನಮ್ಮ ಪದವಿಗೇನು ಗೌರವ?” ಎಂದು ನುಡಿದರು. ಇದನ್ನು ಕೇಳಿದ ಕಂಬಲ್ಲಿನ ಒಡೆಯನು ಕೋಪದಿಂದ ಕಣು ಕೆರಳಿಸಿದನು. ಅದನ್ನು ಕಂಡು ರಾಜ ಒಡೆಯರು “ಏಕೆ? ಒಡೆಯರೇ? ನಿಮಗಿಷ್ಟವಾದರೆ ಈಗಲೇ ಯಾರು ಶ್ರೇಷ್ಟರೆಂದು ಕಾಣುವ! ತಾಳಮೇಳಗಳು ಯಾರಿಗೆ ಸಲ್ಲತಕ್ಕದ್ದೆಂದು ನಿರ್ಣಯವಾಗಲಿ ” ಎಂದರು. ತಿರುಮಲರಾಯರು “ನೀವಿಬ್ಬರೂ ಹೀಗೆ ಕಲಹವಾಡಬಾರದು” ಎನ್ನಲು ಅವರೆದುರಿಗೇನೂ ಮಾಡಲಾರದೆ ಇಬ್ಬರೂ ರೋಷವನ್ನು ನುಂಗಿಕೊಂಡು ಸುಮ್ಮನಿದ್ದರು. ಮಾರನೆ ದಿವಸ ಬಂದಕೂಡಲೆ ರಾಜ ಒಡೆಯರು ಕೆಂಬಲ್ಲಿನ ಮೇಲೆ ಪಡೆಸಹಿತ ಹೊರಟು ಆ ಒಡೆಯರನ್ನು ಸೋಲಿಸಿ ಕೆಂಬಲ್ಲನ್ನು ವಶಪಡಿಸಿಕೊಂಡರು.
*****
[ವಿಲ್ಕ್ಸ್, ಸಂ. ೧. ಪುಟ ೨೪]

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...