Home / ಕಥೆ / ಸಣ್ಣ ಕಥೆ / ಕೆಂಬಲ್ಲಿನ ಗೆಲುವು

ಕೆಂಬಲ್ಲಿನ ಗೆಲುವು

ರಾಜ ಒಡೆಯರವರು ಶ್ರೀರಂಗಪಟ್ಟಣದಲ್ಲಿದ್ದ ತಿರುಮಲ ರಾಯನ ಆಸ್ಥಾನಕ್ಕೆ ಹೋಗುತ್ತಲಿರಬೇಕಾಗಿತ್ತು. ಏಕೆಂದರೆ ಆಗಿನಕಾಲದ ಪಾಳಯಗಾರರೂ ಒಡೆಯರೂ ವಿಜಯನಗರದ ಅರಸರಿಗೆ ಅಧೀನರಾಗಿದ್ದು ಶ್ರೀರಂಗಪಟ್ಟಣದಲ್ಲಿದ್ದ ಅವರ ಪ್ರತಿನಿಧಿಯ ವಶವರ್ತಿಗಳಾಗಿದ್ದರು. ಶ್ರೀರಂಗಪಟ್ಟಣಕ್ಕೆ ಹೋಗುವ ಮಾರ್ಗದಲ್ಲಿ ಒಡೆಯರೂ ಪಾಳಯಗಾರರೂ ಪರಸ್ಪರ ಸೇರಿ ಜಗಳವಾಡುವುದು ಸಾಮಾನ್ಯವಾಗಿತ್ತು.

ಶ್ರೀರಂಗಪಟ್ಟಣಕ್ಕೆ ರಾಜ ಒಡೆಯರು ತಮ್ಮ ಮೈಗಾವಲಿನ ಭಟರೊಡನೆಯೂ ವಾಲಗ ಮೇಳದೊಡನೆಯೂ ಹೊರಟರು. ದಾರಿಯಲ್ಲಿ ಕೆಂಬಲ್ಲೆಂಬ ಗ್ರಾಮದ ಒಡೆಯನೂ ಅದೇ ರೀತಿಯಲ್ಲಿ ಮೇಳತಾಳಗಳೊಡನೆ ಹೋಗುತ್ತಿದ್ದನು. ರಾಜ ಒಡೆಯರಿಗೆ ಇದು ಅವಮಾನವಾಗಿ ತೋರಿತು. “ಮೇಳತಾಳಗಳೊಡನೆ ನಮ್ಮೆದುರಿಗೆ ಯಾರು ಹೋಗುತ್ತಿರುವವರು” ಎಂದು ಕೇಳಲು “ಕೆಂಬಲ್ಲಿನ ಒಡೆಯರು” ಎಂಬ ಉತ್ತರ ಬಂತು. ಕೂಡಲೆ ರಾಜ ಒಡೆಯರು ತಮ್ಮ ವಾದ್ಯಗಳನ್ನು ನಿಲ್ಲಿಸುವಂತೆ ಆಜ್ಞೆ ಮಾಡಿದರು. ಸದ್ದಿಲ್ಲದೆ ಶ್ರೀರಂಗಪಟ್ಟಣವನ್ನು ಸೇರಿ ತಿರುಮಲರಾಯರ ಆಸ್ಥಾನವನ್ನು ಹೊಕ್ಕರು. ಇದನ್ನು ಕಂಡು ತಿರುಮಲರಾಯರು “ಇದೇನು ರಾಜ ಒಡೆಯರೇ ತಮ್ಮ ಪದವಿಗೆ ತಕ್ಕಂತೆ ಮೇಳತಾಳಗಳೊಡನೆ ಪ್ರವೇಶಮಾಡದೆ ಮೌನದಿಂದ ಬಂದಿರಿ?” ಎಂದು ಕೇಳಲು ರಾಜ ಒಡೆಯರು ಕ್ರೋಧದಿಂದ “ಮೇಳತಾಳಗಳನ್ನು ನಮಗಿಂತಲೂ ಕೀಳಾದವರೂ ಇಟ್ಟುಕೊಳ್ಳುವಾಗ ಅದರಿಂದ ನಮ್ಮ ಪದವಿಗೇನು ಗೌರವ?” ಎಂದು ನುಡಿದರು. ಇದನ್ನು ಕೇಳಿದ ಕಂಬಲ್ಲಿನ ಒಡೆಯನು ಕೋಪದಿಂದ ಕಣು ಕೆರಳಿಸಿದನು. ಅದನ್ನು ಕಂಡು ರಾಜ ಒಡೆಯರು “ಏಕೆ? ಒಡೆಯರೇ? ನಿಮಗಿಷ್ಟವಾದರೆ ಈಗಲೇ ಯಾರು ಶ್ರೇಷ್ಟರೆಂದು ಕಾಣುವ! ತಾಳಮೇಳಗಳು ಯಾರಿಗೆ ಸಲ್ಲತಕ್ಕದ್ದೆಂದು ನಿರ್ಣಯವಾಗಲಿ ” ಎಂದರು. ತಿರುಮಲರಾಯರು “ನೀವಿಬ್ಬರೂ ಹೀಗೆ ಕಲಹವಾಡಬಾರದು” ಎನ್ನಲು ಅವರೆದುರಿಗೇನೂ ಮಾಡಲಾರದೆ ಇಬ್ಬರೂ ರೋಷವನ್ನು ನುಂಗಿಕೊಂಡು ಸುಮ್ಮನಿದ್ದರು. ಮಾರನೆ ದಿವಸ ಬಂದಕೂಡಲೆ ರಾಜ ಒಡೆಯರು ಕೆಂಬಲ್ಲಿನ ಮೇಲೆ ಪಡೆಸಹಿತ ಹೊರಟು ಆ ಒಡೆಯರನ್ನು ಸೋಲಿಸಿ ಕೆಂಬಲ್ಲನ್ನು ವಶಪಡಿಸಿಕೊಂಡರು.
*****
[ವಿಲ್ಕ್ಸ್, ಸಂ. ೧. ಪುಟ ೨೪]

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...