Home / ಲೇಖನ / ವಿಜ್ಞಾನ / ರಕ್ತದ ಚಲನೆ ಮತ್ತು ಹೃದಯದ ಬಡಿತ

ರಕ್ತದ ಚಲನೆ ಮತ್ತು ಹೃದಯದ ಬಡಿತ

ಹೃದಯದ ಪ್ರತಿ ಬಡಿತದಲ್ಲೂ ದೇಹದಲ್ಲಿ ಸುತ್ತಿ ತನ್ನೆಡೆಗೆ ಬಂದ ೨೧/೨ ಜೌನ್ಸ್ (೭೦ ಗ್ರಾಂ)ನಷ್ಟು ರಕ್ತವನ್ನು ಪಂಪ್‌ಮಾಡುತ್ತಿರುತ್ತದೆ. ಇದು ಮೋಹ, ಮಧ, ಮಾತ್ಸರ್‍ಯ, ಮತ್ತು ದೈಹಿಕ ಶ್ರಮಕ್ಕೆ ಅನುಗುಣವಾಗಿ ಪ್ರತಿನಿಮಿಷದಲ್ಲಿ೬ ರಿಂದ ೩೫ ಲೀಟರ್ (೨೦೦ ರಿಂದ ೧೨೦೦ ಜಾನ್ಸ್)ವರೆಗೂ ಏರುಪೇರಾಗಬಹುದು. ಸರಾಸರಿ ಒಂದು ನಿಮಿಷದಲ್ಲಾಗುವ ೭೦ ಬಡಿತದಲ್ಲಿ ಸು ೫೦೦೦ ಗ್ರಾಂ. ೧೫ ಕೆ.ಜಿ.) ಆಗುತ್ತದೆ. ಇದೇ ಲೆಕ್ಕದಲ್ಲಿ ಮುಂದುವರಿದು ನೋಡಿದಾಗ ಒಂದು ವರ್ಷದಲ್ಲಿ ಸು. ೬ ಲಕ್ಷ ೮೦ ಸಾವಿರ ಗ್ರ್ಯಾಮ್ ಅಥವಾ ೩೧ ಲಕ್ಷ ಲೀಟರ್ ನಷ್ಟು ರಕ್ತ ಪಂಪ್ ಆಗಿರುವುದನ್ನು ಕಂಡು ಯಾರೊಬ್ಬರಿಗೂ ಈ ಅದ್ಭುತ ಪಂಪ್ ಬಗ್ಗೆ ಅಶ್ಚರ್‍ಯ ಅನ್ನಿಸದೇ ಇರಲಾರರು. ರಕ್ತ ಹೃದಯದಿಂದ ಕಾಲಿನವರೆಗೆ ಒಂದು ನಿಮಿಷಕ್ಕೂ ಕಡಿಮೆ ಅವಧಿಯಲ್ಲಿಯೇ ಬರುತ್ತದೆ. ಈ ಅಂಶವನ್ನು ಮೊದಲಿಗೆ ಹೊರಗೆಡವಿದ್ದವರು ವಿಲಿಯಂ ಹಾರ್‍ವೆ (೧೫೭೮-೧೬೭೫) ಆದರೆ ಇವನು ಹೃದಯದ ಬಡಿತದ ಬಗೆಗೆ ತಿಳಿಯಲಾಗದೇ ಹತಾಶನಾಗಿದ್ದ. ರಕ್ತ ಹೃದಯದಿಂದ ತದೇಕವಾಗಿ ಪಂಪ್ ಆಗಿದ್ದರೆ ದೇಹದ ಯಾವುದೇ ಜೀವಕೋಶಗಳನ್ನು ಜೀವಂತವಾಗಿಯೂ ಚುರುಕಾಗಿಯೂ ಇಡಲು ಸಾಧ್ಯವಿಲ್ಲ ಜೀವಕೋಶಗಳ ಉಳುವಿಗೆ ಬೇಕಾದ ಆಮ್ಲಜನಕ ಈ ರಕ್ತದಿಂದ ಒದಗುತ್ತಿರುತ್ತದೆ. ಆಮ್ಲಜನಕ ರಕ್ತ ದೇಹದ ಎಲ್ಲ ಜೀವಕೋಶಗಳಿಗೂ ತಲುಪಿ ಅಲ್ಲಿಂದ ಆಮ್ಲ ಜನಕಕಳೆದುಕೊಂಡ ರಕ್ತಹೃದಯದ ಮೇಲ್ಬಾಗದ ಬಲ ಕವಾಟಿಗೆ ಬರುತ್ತದೆ. ಈ ಭಾಗಕ್ಕೆ ಬಂದ ರಕ್ತ ಬಲ ಶ್ವಾಸಕೋಶಕ್ಕೆ ಪಂಪ್ ಆಗುತ್ತದೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...