Home / ಕಥೆ / ಸಣ್ಣ ಕಥೆ / ಸುಗುಣ ಗಂಭೀರ

ಸುಗುಣ ಗಂಭೀರ

ಬೋಳತಲೆ ಚಾಮರಾಜ ಒಡೆಯರ ಕಾಲದಲ್ಲಿ ಒಡೆಯರ ವಂಶಕ್ಕೆ ಅಧಿಕಾರವು ಹೆಚ್ಚಾಗಿರಲಿಲ್ಲ. ಇವರೂ ನೆರೆಹೊರೆಯಲ್ಲಿದ್ದ ಒಡೆಯರೂ ಪಾಳಯಗಾರರೊಂದಿಗೆ ಸೇರಿಕೊಂಡು ಶ್ರೀರಂಗ ಪಟ್ಟಣ ಅಧಿಕಾರಿಗೆ ಪೊಗದಿ ಕೊಡಬೇಕಾಗಿತ್ತು.

ಶ್ರೀರಂಗಪಟ್ಟಣದಲ್ಲಿ ವಿಜಯನಗರದ ಅಧಿಕಾರಿಯಾಗಿ ರಾಮರಾಯನೆಂಬಾತನಿದ್ದನು. ಸುತ್ತಮುತ್ತಣ ಪಾಳಯಗಾರರನ್ನು ಆಳುತ್ತಿದ್ದ ಆತನು ತೊರೆಮಾವಿನಹಳ್ಳಿಯ ರೇಮಟಿ ವೆಂಕಟಾದ್ರಿ ನಾಯಕನನ್ನು ಮೆಚ್ಚಿ ಆತನಿಗೆ ಹೆಚ್ಚು ಅಧಿಕಾರವನ್ನು ಕೊಟ್ಟನು. ಚಾಮರಾಜ ಒಡೆಯರಿಗೆ ಇದು ಸಹಿಸಲಿಲ್ಲ. ಆದರೆ ರಾಮರಾಯನ ಬೆಂಬಲವನ್ನು ಪಡೆದ ವೆಂಕಟಾದ್ರಿ ನಾಯಕನನ್ನು ಇದಿರಿಸುವುದು ಸುಲಭವಾಗಿರಲ್ಲ. ಬಂದ ಆದಾಯದಲ್ಲಿ ಸಾಕಾದಷ್ಟು ಸೈನ್ಯವನ್ನು ಕೂಡಿಸುವುದಕ್ಕೆ ಆಗಲಿಲ್ಲ; ಮತ್ತು ಮೈಸೂರಿಗೆ ಕೋಟೆ ಕಟ್ಟುವುದಕ್ಕೂ ಅವಕಾಶವಿರಲಿಲ್ಲ. ಏಕೆಂದರೆ ಶ್ರೀರಂಗಪಟ್ಟಣದ ಪ್ರತಿನಿಧಿಯು ಹಾಗೆ ಮಾಡಿದಲ್ಲಿ ಕೋಪಗೊಳ್ಳುತ್ತಿದ್ದನು.

ಆಗ ಚಾಮರಾಜ ಒಡೆಯರು ಉಪಾಯವನ್ನು ಯೋಚಿಸಿದರು. ಹಣವನ್ನುಳಿಸಿ ಕೊಳ್ಳುವುದಕ್ಕೂ ಮೈಸೂರಿಗೆ ಕೋಟೆ ಕಟ್ಟುವುದಕ್ಕೂ ಅನುಕೂಲವಾಗುವ ಹಾಗೆ ರಾಮರಾಯನ ಬಳಿಗೆ “ನಮ್ಮ ಹೊಲಗಳಲ್ಲಿ ಮಗಳ ಅಂಗಳದಲ್ಲಿಯೂ ಕಾಡುಹಂದಿಗಳ ಕಾಟ ಹೆಚ್ಚಾಗಿದೆ. ಕಾಡುಹಂದಿಗಳನ್ನು ತಡೆಯಲು ಊರನ್ನು ಕೋಟೆಯಿಂದ ಭದ್ರಪಡಿಸಬೇಕು; ಅದಕ್ಕೆ ಹಣವೂ ಬೇಕು. ಆದ್ದರಿಂದ ತಾವೂ ನಮ್ಮ ಪೊಗದಿಯ ಹಣವನ್ನು ಮನ್ನಿಸಿ ಕೋಟೆ ಕಟ್ಟಲು ಅನುಮತಿ ಕೊಡಬೇಕು” ಎಂದು ಹೇಳಿ ಕಳುಹಿಸಿದರು. ಆತನು ಒಪ್ಪಲು ಪೊಗದಿಯ ಹಣದಿಂದ ಕೋಟೆಯನ್ನು ಕಟ್ಟಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.

ಬಳಿಕ ಒಂದಾನೊಂದುಸಲ ವೆಂಕಟಪ್ಪ ನಾಯಕನು ದಾಳ, ದಮಾಣ, ಅಂದಳ ಮುಂತಾದವುಗಳಿಂದೊಡಗೂಡಿ ಶ್ರೀರಂಗಪಟ್ಟಣಕ್ಕೆ ಹೋಗುತ್ತಿದ್ದಾಗ ಚಾಮರಾಜ ಒಡೆಯರು ಆತನನ್ನು ಕಾಳಗಕ್ಕೆ ಕರೆದರು. ಮೈಸೂರಿನ ಭಟರು ಚನ್ನಾಗಿ ಕಾದಿ ದಾಳದಮಾಣ ಮುಂತಾದುವನ್ನು ಕಿತ್ತುಕೊಂಡರು. ಅಂದಿನಿಂದ ಚಾಮರಾಜ ಒಡೆಯರು ವೆಂಕಟಾದ್ರಿನಾಯಕನು ಒಪ್ಪಿಸಿ ಕೊಂಡಿದ್ದ “ಸುಗುಣ ಗಂಭೀರ” ನೆಂಬ ಬಿರುದನ್ನು ತಾವೇ ವಹಿಸಿದರು.
*****
[ವಂಶರತ್ನಾಕರ, ಪುಟ ೨೦ ; ವಂಶಾವಳಿ, ಪುಟ ೧೭]

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...