Home / ಕವನ / ಕವಿತೆ / ಕುಳಬಾನವ್ವಾ ನಾನು ಕುಳಬಾನ

ಕುಳಬಾನವ್ವಾ ನಾನು ಕುಳಬಾನ

ಕುಳಬಾನವ್ವಾ ನಾನು ಕುಳಬಾನ ||ಪ||

ಆ ಕುಳ್ಳು ಈ ಕುಳ್ಳು ಕಾಕುಳ್ಳು ಬೀಕುಳ್ಳು
ಕಾಡೆಮ್ಮೆ ಕಾಡೆತ್ತು ಕುಳಬಾನ
ತುಂತುಂ ತಂದಾರ ಕುಳ್ರೊಟ್ಟಿ ತಟ್ಟ್ಯಾರ
ಒಣಗಾಕಿ ಒಟ್ಟ್ಯಾರ ಕುಳಬಾನ

ಹರೆಯದ ಬಾಲ್ಯಾರು ಪುಟಚಂಡು ಚಲುವೇರು
ಉಟಸೆರಗು ಕಚ್ಹ್ಯಾಕಿ ಕಟ್ಟ್ಯಾರ
ಹವಳದ ಕಣ್ಣಿಂದ ಡಾಳಿಂಬ್ರ ಕೈಯಿಂದ
ಎದಿಪುಟಿಸಿ ಮೈಪುಟಿಸಿ ಒಟ್ಟ್ಯಾರ

ಕೆಮ್ಮಣ್ಣು ಸಾರ್‍ಸ್ಯಾರ ಬಿಳಿಸುಣ್ಣಾ ಸುರವ್ಯಾರ
ಕುಳ್ಳಾಗ ಮಾಲಿಂಗ ಮಾಡ್ಯಾರ
ಹಿತ್ಲಾಗ ಕತ್ಲಾಗ ಕಂಟೀಯ ಕಳ್ಳ್ಯಾಗ
ಗುಳ್ಳೆತ್ತು ಹಕ್ಕಲಕ ಕಟ್ಟ್ಯಾರ

ಛೀ ನಾಯಿ ಬಂದಾವು ಛೂಮೂಗು ಮೂಸ್ಯಾವು
ಹೆಗ್ಣವ್ವ ಹೆಗ್ಣಪ್ಪ ಹೊಕ್ಕಾರ
ಇಲಿಮಾವ ಇಣಿಕ್ಯಾನು ಬೆಕ್ಕಪ್ಪ ತಿಣಿಕ್ಯಾನು
ಕರಿಚೋಲು ಕೆಂಚೋಳು ಕಾಡ್ಯಾವ

ಕಾಮಣ್ಣ ಹಬ್ಬಕ್ಕ ಹುಡುಗಾರು ಬಂದಾರು
ರಾತ್ರ್‍ಯಾಗ ಕುಳಬಾನ ಕದ್ದಾರೋ
ಕಾಮನ್ನ ಬೆಂಕ್ಯಾಗ ಕುಳಬಾನ ಹಾಕ್ಯಾರೊ
ಭೋ ಶಿವಗ ಭೋರೆಂದು ಸುಟ್ಟಾರೋ


ಕುಳಬಾನ = ಕುಳ್ಳಿನ ಬಣಿವೆ
ಕಾಕುಳ್ಳು = ಅಡವಿ ಕುಳ್ಳು
ಬೀಕುಳ್ಳು = ಪುಡಿಕುಳ್ಳು, ಬೀಕಲಾ

Tagged:

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...