Home / ಕವನ / ಕವಿತೆ / ಜೀವನದ ರೂಪನ್ನೆ ಬದಲಿಸುವ, ಬಾ!

ಜೀವನದ ರೂಪನ್ನೆ ಬದಲಿಸುವ, ಬಾ!

ಕೈಯ ಕೈಯಲಿ ಇಟ್ಟು
ಕಣ್ಣ ಕಣ್ಣಲಿ ನಟ್ಟು
ಮುಂದಕ್ಕೆ ಸಾಗೋಣ, ನೋಡೋಣ ಬಾ;
ನಾನು ನೀನೂ ಕೂಡಿ
ವಿಧಿಯೊಡನೆ ಹೆಣಗಾಡಿ
ಜೀವನದ ರೂಪನ್ನೆ ಬದಲಿಸುವ, ಬಾ!

ನದಿಯ ತಣ್ದುಟಿ ಮೇಲೆ
ಶಶಿಯ ಒಲವಿನ ಓಲೆ
ಕೊರೆಸಿ ಕುಣಿವುದನು ಓದೋಣ ಬಾ;
ಬಾಳಿನಂಗಳದಲ್ಲಿ
ಸಾವ ಪಂಜರದಲ್ಲಿ
ಅಳಿದುಳಿದ ಕುಲವನ್ನು ಕಾಣೋಣ, ಬಾ!

ನಾಡ ಸುತ್ತಲು ಸುತ್ತಿ
ಹಾಡ ಮಿಂಚಿನ ಕತ್ತಿ
ಝಳಪಿಸುತ ಇರುಳನ್ನು ಇರಿಯೋಣ ಬಾ;
ನಾನು ನೀನೂ ಕೂಡಿ
ಜೀವನವ ಜಾಲಾಡಿ
ಹುದುಗಿರುವ ಮುತ್ತನ್ನು ಆಯೋಣ, ಬಾ!

ಸಿರಿಯ ಸಂತಸ ಕೂಟ,
ಹೊರೆಯ ಸಿಂಗರ ಮಾಟ,
ಮರೆಯ ಹೆಣ್ಣಿನ ಬೇಟ, ಕಾಣೋಣ ಬಾ;
ಅದಕೆ ಜೀವವ ತೆತ್ತ
ಲೆಕ್ಕವಿಲ್ಲದ ಮೊತ್ತ
ಜನರ ಜೀವನವನ್ನು ಎಣಿಸೋಣ, ಬಾ!

ನಾಡ ಬಿಡುಗಡೆಗಾಗಿ
ಓಡ ಅರಳುಗಳಾಗಿ
ಬಾಡಿರುವ ಹೂಗಳನು ಆಯೋಣ ಬಾ;
ಅವರ ಜೀವನದ ನಾಡಿ
ಸಿಡಿಲ ನದಿಗಳ ಕೋಡಿ
ಕೊಚ್ಚಿಸುತ, ಕ್ರಾಂತಿಯನು ಹರಡೋಣ, ಬಾ!

ಜಗವೆ ತನ್ನದು ಎಂದು,
ಕದ್ದು ಎಲ್ಲವ ತಂದು
ಕೂಡಿಟ್ಟ ಕಳ್ಳನನು ಅಳಿಸೋಣ ಬಾ;
ತನ್ನ ಬಾಳ್ವೆಯ ತೆತ್ತು,
ತಾನೆ ಉಳಿದರ ತೊತ್ತು
ಆಗಿ ಅಳಿಯುವ ಜೀವ ಉಳಿಸೋಣ, ಬಾ!

ಅವರ ಕೊನೆಯಿದು ಅಲ್ಲ,
ಇದು ಬರಿಯ ಉರಿಯಲ್ಲ,
ನಾಡಿನೆದೆಗಿಚ್ಚೆಂದು ಅರಿಯೋಣ ಬಾ;
ನಾನು ನೀನೂ ಕೂಡಿ
ಒಲವ ಹಾಡನು ಹಾಡಿ
ಜೀವನದ ರೂಪ, ಬದಲಿಸುವ ಬಾ!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...