Home / ಕವನ / ಕವಿತೆ / ಭಗ್ನ ಹೃದಯ

ಭಗ್ನ ಹೃದಯ

ತ್ರಿಪುರ ದಹನವದಾಯ್ತು ಲಂಕೆಯನು ಸುಟ್ಟಾಯ್ತು
ಎನಿತೆನಿತೊ ರಾಜ್ಯಗಳು ಭಷ್ಮವಾದೊ!
ಚಾರಿತ್ರ್‍ಯ ಲೇಖಕನ ಅಂಕೆಸಂಕೆಗಳೆಲ್ಲ
ತೋರುವುವು ಭಸ್ಮಾಸುರ ಮಹತ್ವವ!!

ಯಾರ ಕಾಣಿಪುದೆಂತು, ಯಾರು ನೋಡುವರೆಂತು
ಬೆಂದ ಹೃದಯದ ತಾಪ-ಶೂಲಭೂತ!
ಜೀವಧಾರಣನಾತ ಭವ್ಯಜೀವಿಯು ನೋಡೆ
ಫಲಿತ ಫಲದೊಳಗಿರುವ ಹುಳದ ರೂಪ.

ಘೋರ ಕಾನನದಲ್ಲಿ ಪ್ರಕೃತಿ ದೇವಿಯ ವಾಸ,
ಸೊಗಸಿನಾಗರ, ಹಸುರು ಬೀಡು ಕಾಡು
ಕಾನನದ ನಡುದಾರಿ ಸರ್ಪಗಳ ಆವಾಸ
ಸೊಗಸು ಬನ ಹೃದಯದಾ ರೀತಿ ಎಂತೊ!

ರಾಜ ಬೀದಿಯು ನೋಡೆ, ಭವ್ಯ ಮಂದಿರ ಸಾಲು
ನಾಗರಿಕರಾಂತಂತ ದಳಿತ ಜನವೊ!
ಆದರೊಂದು ನಡುವಲ್ಲಿ ವಿಟಜನರ ವ್ಯವಹಾರ
ಕಟುಕರಲ್ಲಲ್ಲಿ ನೋಡೆ-ಸುಖವಿದೆಂತೊ!

ಮುಗುಳುನಗೆ ಮುಖದಲ್ಲಿ ಒಯ್ಯಾರ ತನುವಿನಲಿ
ಅಟ್ಟಹಾಸದ ನಡೆಯು, ತೇಜ ಪೂಜ್ಯ-
ತನ್ನೊಂದು ಭಗ್ನತೆಯ ಆತನಲ್ಲದೆ ಯಾರು
ಅಳೆದು ನೋಡಲು ಸಾಧ್ಯ-ತಿಳಿಯೆ ನಿಜವ!

ಎಲ್ಲೆರೆಲ್ಲರ ನೆಚ್ಚಿ ತನ್ನ ತನ್ನವರೆಂದು
ನಿರಾಶೆ ಜಾಲದ ಜಾಡ್ಯದೊಳ ನುಗ್ಗಿ ಬಗ್ಗಿ;
ಭಗ್ನ ಹೃದಯದ ತಾಪ ಬೆಂದ ದೇಹದ ರೂಪ
ಯಾರೊಡನೆ ಪೇಳಲದೊ, ಕೇಳ್ವರಾರೊ?
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...