Home / ಕವನ / ಕವಿತೆ / ಕಣಜಿರಿಗೆ ಹುಳು ಮತ್ತು ನಾನು

ಕಣಜಿರಿಗೆ ಹುಳು ಮತ್ತು ನಾನು

ಹಿತ್ತಲ ಬಾಗಿಲು ಬಹು
ದಿನಗಳಿಂದ ಮುಚ್ಚಿಯೇ ಇತ್ತು
ಇಂದು ಅದೇಕೋ ಬಿಸಿಲು
ಹೆಚ್ಚಾಯಿತೆಂದು ತೆಗೆಯಬೇಕಾಯಿತು

ಉಸಿರುಗಟ್ಟಿದಂತಿದ್ದ ಆ
ಕೋಣೆಯೊಳಗೆ ಸ್ವಲ್ಪ ಗಾಳಿ
ಸ್ಚಲ್ಪ ಬೆಳಕು ಸುಳಿದಾಡಿದಂತೆನಿಸಿ
ಜೀವ ನಿರಾಳವಾಯ್ತು

ಕಂಪ್ಯೂಟರ್ ಪರದೆಯನ್ನೇ
ವಿಶ್ವವೆಂಬಂತೆ ದಿಟ್ಟಿಸಿ
ಸೋತ ಕಣ್ಣುಗಳಿಗೆ
ಹೊಸ ಬೆಳಕು ಹೂಳೆದಂತಾಯ್ತು

ಗಂಟು ಹಿಡಿದ ಕಾಲುಗಳಿಗೆ
ನಡಿಗೆಯ ಕಲಿಸುವಂತೆ ಮೆಲ್ಲಗೆ
ಹೆಜ್ಜೆಗಳಿಟ್ಟು ಹೊರನಡೆದು
ಕಿಟಕಿಯೆಡೆಗೆ ಮುಖ ಮಾಡಿದೆ

ಹೊಸತೊಂದು ಲೋಕಕ್ಕೆ ಬಂದವನಂತೆ
ದಿಗಂತವನೊಮ್ಮೆ ದಿಟ್ಟಿಸಿ
ಮರಕೆ ಸುತ್ತಿಕೊಂಡಿದ್ದ ಹಸಿರು
ಬಳ್ಳಿಯನ್ನೊಮ್ಮೆ ಕಣ್ತುಂಬಿಸಿಕೊಂಡೆ

ಕಿಟಕಿ ಸರಳುಗಳಿಗೆ ಕಣಜಿರಿಗೆ
ಹುಳುವೊಂದು ಗೂಡು ಕಟ್ಟುತ್ತಿತ್ತು
ಅದರತ್ತ ನೋಡಿದ್ದೇ ತಪ್ಪಾಯ್ತೆಂಬಂತೆ
ಬಾಲ ನಿಗುರಿಸಿಕೊಂಡು ಹಾರಿ ಹೋಯಿತು

ಅದು ಅಲ್ಲಿಗೆ ತಿರುಗಿ ಬರುವುದೆಂದು
ಗೂಡು ಕಟ್ಟುವುದೆಂದು ಕಾದೆ
ಬಂದದ್ದು ಕಾಣಲಿಲ್ಲ, ಮರುದಿನವೂ
ಬಂತೋ ಬಾರಲಿಲ್ಲವೋ ತಿಳಿಯಲಿಲ್ಲ

ಗಣಕಯಂತ್ರದ ಕೀಲಿ ಮಣೆಯ ಮೇಲೆ
ಬಿಟ್ಟೂ ಬಿಡದೇ ನರ್ತಿಸುವ ಬೆರಳುಗಳು
ಮನವೇಕೋ ಹಾರಿ ಹೋದ
ಕಣಜಿರಿಗೆ ಹುಳುವನ್ನೇ ನೆನೆಯುತ್ತಿದೆ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...