Home / ಕವನ / ಕವಿತೆ / ಬಳ್ಳಾರಿ ಬಿಸಿಲೆಂದರೆ…

ಬಳ್ಳಾರಿ ಬಿಸಿಲೆಂದರೆ…

ಬಳ್ಳಾರಿ ಬಿಸಿಲೆಂದರೆ…
ನಿಗಿ ನಿಗಿ ಉರಿವಕೊಳ್ಳಿ ದೆವ್ವ!!
ನಿತ್ಯ ಬಿಸುಲುಗುದುರೆಯೇರಿ,
ಗರಿಗೆದರಿ, ಧರೆಗಿಳಿವ, ಸೂರ್‍ಯಮಂಡಲ!
ಆಲೆಮನೆಯ, ಕೊಪ್ಪರಿಗೆಯೊಳಗಿನ
ಬಿಸಿ ಬಿಸಿ ಕೆನೆ ಬೆಲ್ಲದ, ಕಾಕಂಬಿ ರಸದ, ಸಿಂಚನ!
ಕಾದ ತಾರೆಣ್ಣೆ, ಮೈಮೇಲೆ ಸುರಿವಿಕೊಂಡಂತೆ!
ಕಮ್ಮಾರ ರೋಸಿಗೊಂಡು ಸಿಟ್ಟಲಿ,
ತಿದಿಯೊತ್ತಿದ ಬಿರುಸಿಗೆ, ಕಿಡಿಕಿಡಿ ಕಾರುವ, ಸೂರ್‍ಯಕಿರಣ!
ಚಳಮಳ ಕಾದ, ಎಮ್ಮೆ ಹಾಲಿನ ಝಳದಂತೆ,
ಮಖಾಮೂತಿಗೆ ರಾಚುವ, ಕೆಂಡದುಂಡೆಯ ಬಿಸಿಲ ಮಳೆ!
ಇಟ್ಟಂಗಿ ಭಟ್ಟಿಯೊಳಗೆ, ಸಿಕ್ಕ ಮರಿ ಹುಲ್ಲೆಯಂಗೆ,
ನಿತ್ಯ ವಿಲವಿಲಾ ಒದ್ದಾಡುವ, ನರಪಿಳ್ಳೆಗಳು!
ಸೀದಕರುಕು, ಅಶ್ಟೇ ಚುರುಕು, ಹರಕು! ಝಲಕು…
ಅಬ್ಬಾ…! ಹುಟ್ಟಬೇಕು ಬಳ್ಳಾರಿ ಬಿಸಿಲಿಗೇ… ಒಮ್ಮೆಯಾದರೂ
ಗಟ್ಟಿತನ ಎತ್ತಿ ತೋರಬೇಕು!

-೨-
ಬಳ್ಳಾರಿ ಬಿಸಿಲೆಂದರೆ…
ಬಿಸಿಲೇ…! ಬಿಸಿಲಿಗೆ, ಬಿಸಲು ಸೇರಿ,
ಚಕ್ರಬಡ್ಡಿ, ಮೀಟರ್‍ ಬಡ್ಡಿ, ಸುಸ್ತಿಬಡ್ಡಿಯಶ್ಟು ತಾಪಮಾನ…
ನವರಂಧ್ರಗಳಲ್ಲಿ… ಎರೆಭೂಮಿಯಂಗೆ ಬಿರುಕು ಬಿಟ್ಟು
ಬಾಯಿಬಿಟ್ಟರೆ, ಬಾನೆಟ್ಟೆತ್ತಿದ ಹಳೆ ಜೀಪಿನ,
ರೇಡಿಯೆಟರಿನ, ಬಿಸಿನೀರಿನಿಂದ ಚಿಮ್ಮುವ ಕಾರಂಜಿ!
ಜ್ವಾಲಾಮುಖಿನೇ ಈ ಧರೆಗಿಳಿದಂತೆ, ನಿತ್ಯ ಭಸಿವ ಬಿಸಿಲು!
ಮನೆ ನಲ್ಲಿಗಳು; ಭುಸು ಭುಸುಗುಡುವ, ಬಿಸಿನೀರಿನ ಬುಗ್ಗೆಗಳು!

-೩-
ಬಳ್ಳಾರಿ ಬಿಸಿಲೆಂದರೆ…
ಕಾದ ಕಮ್ಮಾರನ ಕುಲುಮೆ!  ಇಂದ್ರನ ವಜ್ರಾಯುಧಾ!
ಸಪ್ತ ಸಾಗರಗಳ, ಲಾವರಸದ ಚಿಲುಮೆ!
ಸುಡುಬಿಸಿಲ ಸಿಡಿಲು!
ಶಿವನ ತ್ರಿನೇತ್ರದುರಿಯ ಬೆಂಗಾಡು, ಗುಡ್ಡಗಾಡು, ಗಣೆಗೂಡು…
ಪ್ರಾಣಿ, ಪಕ್ಷಿ, ನರಪಿಳ್ಳೆಗಳಿಗೇ ಗುಕ್ಕು ನೀರಿಲ್ಲದಾ ಸುಡುಗಾಡು!
ಸತ್ತಂತಿರುವ ಹಸಿರು, ಮರ, ಗಿಡಿ, ಬಳ್ಳಿಗಳೆಲ್ಲ ತ್ಯಾಪೆ ಮೋರೆ!
ಕಡುವೈರಿಗೂ ಬೇಡ ಬಿಡು! ಬಳ್ಳಾರಿ ಬಿಸಿಲು… ಉಮ್ರು… ಬೆವ್ರು…
ನಡುರಾತ್ರಿಲಿ ಉರಿವ ಸೂರ್‍ಯ! ಕಾದ ಕೋಟೆಯ ನಿಟ್ಟೂಸಿರು!
ಮೈ, ಕೈ, ಕಾಲು: ಚುರು… ಚುರು…
ಮೂಗು, ಬಾಯಿ, ಕಣ್ಣು: ಉರಿ… ಉರಿ…
ಹರಲಿರುಳು ಬೇಸಿಗೆ ಬಿಸಿಲು!
ಹಾಗಲ್ಲದಿದ್ದರೆ… ಬಳ್ಳಾರಿ ಬಿಸಲೇ ಅಲ್ಲ ಬಿಡಿ!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...