Home / ಕವನ / ಕವಿತೆ / ಹತ್ತಿಬಿಡಿಸಲಿಕ್ಕೆ ಹೋಗೋಣು ಬಾರೆ

ಹತ್ತಿಬಿಡಿಸಲಿಕ್ಕೆ ಹೋಗೋಣು ಬಾರೆ

ಬಾಲೆ ವಿಲಾಯತಿ ಹತ್ತಿ ಬಿಡಿಸಲಿಕ್ಕೆ
ಆಲಸ್ಯಮಾಡದೆ ಹೋಗುಣ ಬಾರೆ || ಪ ||

ಏಳು ಹೊಲಗಳ ನಡುವೆ ಹಳ್ಳದ ಮೇಲಿರುವ
ಹಳೆ ಹುಳಕ ಹಕ್ಕಲ ಬಾಳ ಬೆಳಕದಿ ಹತ್ತಿದೊಳೆಗಳು
ಗಾಳಿ ಮಳೆಗೆ ಉದುರುತಿಹವು
ಪೇಳುವೆ ಸುತ್ತಲು ಸಣ್ಣ
ಮಳಲಿನೊಳು ಸೀಮಿಕಲ್ಲು ನಟ್ಟಿರ್ಪುದು
ನಿಳಯದ ಕರಕಿ ಹುಲ್ಲು ಕಪಟ ಭೂಮಿ
ತಿಳಿಯ ಮಣ್ಣು ಕರ್ಲಿನಲಿ ಕೆಲವರೆಲ್ಲರು ಮಮ್ಮಾಯಿ
ಕಾಳು ಬಿತ್ತಿ ಹೊನ್ಗಗಳ ಘಳಿಸಿ ಗರ್ವದಿ || ೧ ||

ಊರ ಜನರೊಳೆವರಲ್ಲ
ಒಬ್ಬರೊಬ್ಬರ ಹೊಲಕೆ ಹೋಗದಿರೆ ಎಲ್ಲೆಲ್ಲಿ
ನೋಡಿದರು ಹೆಚ್ಚಿನ ಧಡೆಗಲ್ಲು
ಮೂವತ್ತು ಸೇರಿನ ದಂಡಿಗಿ ಇವರು ತೂಗುವರೋ ಬ್ಯಾರೆ
ಭಾರಿ ಭಾರಿ ಜಡಿ ಜಡಿಯ ತೂಕದ
ಮೂರುವರಿ ದುಡ್ಡುಗಳು ಕೊಡುತಿಹರು
ಆರಗೊಡವಿನ್ನೇನು ನಮಗೆ
ನಾರಿಮಣಿ ನಮ್ಮ ಹೊಲಕೆ ನಡಿಯೇ || ೨ ||

ಸೃಷ್ಟಿಯೊಳು ನಾವೀರ್ವರು ಹುಟ್ಟಿ ಬೆಳೆಯುವರು
ಕಟ್ಟಳತೆ ಇಲ್ಲದ ಭವದ ಕೂಳಿನೊಳು
ಮುಟ್ಟು ಮೈಲಿಗೆಯ ಜಲಹತ್ತಿ
ಬಿಟ್ಟಿದ್ದರೆ ಫಲ ಬೆಳಸಬಾರದ ರೀತಿ
ಎಷ್ಟು ಹೇಳಬೇಕರಿ ಪಾಪದ
ಮಟ್ಟಿಯಲ್ಲಿ ಹಣ ಕಟ್ಟಿಕೊಂಬರು
ಬಿಟ್ಟು ಬಾ ಶಿಶುನಾಳಧೀಶನ
ಬಟ್ಟಬೈಲಿಯ ಹೊಲಕ ನಡಿಯೇ || ೩ ||
*****

 

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...