Home / ಕವನ / ಕವಿತೆ / ಅರವಿಂದ

ಅರವಿಂದ

ಅರವಿಂದ ಅರವಿಂದ ನಂದನದ ಕಂದ
ಎಲ್ಲರೆದೆ ಬೆಳಗಿಸುವ ಹೃದಯಾರವಿಂದ

ಬಾಲ್ಯವನು ಕಳೆದದ್ದು ಬಿಳಿಯ ದೇಶದಲಿ
ಯೌವನವು ಬೆಳಗಿದ್ದು ಭಾರತಕೆ ಮರಳಿ

ಚಿಕ್ಕಂದಿನಿಂದಲೇ ಮೇಧಾವಿತನವು
ಅಚ್ಚರಿಯ ಮೂಡಿಸಿತು ಅಂತಃಚೇತನವು

ತಂದೆ ಬಿಳಿಯರ ರೀತಿ ತಾಯಿ ಭಾರತ ಗರತಿ
ಎರಡು ಸಂಸ್ಕೃತಿಗಳನು ಉಂಡಿತೀ ಜ್ಯೋತಿ

ಕೆಸರಿನಲ್ಲಿದ್ದರೂ ಕಮಲ ಕಮಲವೇ ಹೌದು
ಲಂಡನ್ನಿನಲ್ಲಿಯೇ ತಾಯ್ನಾಡ ಓದು

ಎನಿತೊ ಭಾಷಗಳನ್ನು ಕರಗತವ ಗೈದು
ಸಂಸ್ಕೃತದ ತಿರುಳೆಲ್ಲ ಮೈಗೊಂಡ ಸಾಥು

ಸ್ಥಾತಂತ್ರ್ಯ ಸಂಗ್ರಾಮ ಸೆರೆಮನೆಗೆ ಕಳಿಸಿತ್ತು
ಆತ್ಮಶಕ್ತಿಯ ಪಡೆಯೆ ಗರಡಿ ಮನೆಯಾಯ್ತು

ನಲವತ್ತು ವರ್ಷಗಳ ಏಕಾಂತ ತಪಿಸಿ
ಪೂರ್ಣಯೋಗವ ಕಂಡನಾ ಗುರುಮಹರ್ಷಿ

ದೇಶಸೇವೆಯ ದೀಕ್ಷೆ ತೊಟ್ಟು ಸ್ಥಾತಂತ್ರ್ಯಕ್ಕೆ
ದುಡಿಯುತ್ತ ದಿವ್ಯಾತ್ಮ ಒಳ್ಳೆ ಹಣ್ಣಾಯ್ತು

ಕೊನೆಗೆ ಪಾಂಡೀಚೆರಿಯು ಆತ್ಮಸಂಧಾನಕ್ಕೆ
ಎಲೆಮನೆಯ ಶಾಂತಿಯ ಪುಣ್ಯನೆಲೆಯಾಯ್ತು

ಅನ್ನಮಯ ಪ್ರಾಣಮಯ ಮನೋಮಯ ದಾಟಿ
ವಿಜ್ಜಾನ ಮಯದಿಂದ ಆನಂದ ಗುರಿಗೆ

ಮಾನವನು ದೇವಮಾನವನಾಗುವ ವಿಕಾಸ
ಪ್ರೇಮ ಶಕ್ತಿ ಜ್ಞಾನ ಬಾಳ ಮುಪ್ಪರಿಗೆ

ಎಂಬ ತತ್ವವ ಸಾರಿ ಆಧ್ಯಾತ್ಮ ಸಿರಿಯ
ಜಗಕೆಲ್ಲ ಬೀರಿದರು, ಭಾರತವ ಬೆಳಗಿ

ಆರೊವಿಲ್ಲಾಗಿರುವ ವಿಶ್ವಚೇತನ ಕೇಂದ್ರ
ಮಾನವರ ನಡೆಸುತಿದೆ ಹೊಸ ತೂರ್ಯ ಮೊಳಗಿ
***

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...