Home / ಲೇಖನ / ವಿಜ್ಞಾನ / ಬಂಜೆಯರಿಗೆ ತೊಟ್ಟಿಲು ಭಾಗ್ಯದ ಪ್ರಣಾಳ ಶಿಶುಗಳು

ಬಂಜೆಯರಿಗೆ ತೊಟ್ಟಿಲು ಭಾಗ್ಯದ ಪ್ರಣಾಳ ಶಿಶುಗಳು

ಪ್ರಣಾಳ ಶಿಶುಗಳಿಂದರೆ ಗಾಜಿನ ಬಾಟಲಿಗಳಲ್ಲಿ ಸ್ತ್ರೀ ಅಂಡಾಣು ಗಂಡಿನ ಅಂಡಾಣುಗಳನ್ನು ಗರ್ಭಕೋಶದ ಹೊರಗೆ ಫಲೋತ್ಪತ್ತಿ ಮಾಡಿ, ಭ್ರೂಣವನ್ನು ಉಂಟುಮಾಡಿ ಶಿಶುಗಳನ್ನು ಪಡೆಯಲಾಗುವುದಕ್ಕೆ ಪ್ರಣಾಳ ಶಿಶು ಎಂದು ಕರೆದರೂ ಸಹ ಈ ವಿಜ್ಞಾನವು ಈ ಮಾನವನಿಗೆ ಎಟಕಲಿಕ್ಕಿಲ್ಲವೆಂದು ವಿಜ್ಞಾನಿಗಳೇ ಅಭಿಪ್ರಾಯಪಡುತ್ತಾರೆ.

ವಾಸ್ತವವಾಗಿ ಹೆಣ್ಣಿನ ಅಂಡಾಣುಗಳನ್ನು ಗಂಡಿನ ವೀರ್ಯಾಣುಗಳೊಂದಿಗೆ ಒಂದು ಗಾಜಿನ ಪಾತ್ರೆಯಲ್ಲಿ ಫಲೋತ್ಪಾದನೆ ಮಾಡಿ ಸಾಮಾನ್ಯ ಗರ್ಭಧಾರಣೆಯಂತೆ ಮಗುವು ಬೆಳೆಯಲು ತಾಯಿಯ ಗರ್ಭಕೋಶದೊಳಕ್ಕೆ ಇದನ್ನು ಇಡಲಾಗುವುದು. ಭ್ರೂಣವು ಆ ಗರ್ಭಕೋಶದಲ್ಲಿ ೯ ತಿಂಗಳು ಬೆಳವಣಿಗೆ ಹೊಂದಿ ನಂತರ ಜನಿಸುತ್ತದೆ. ಇಂತಹ ಮಗುವಿಗೆ (ಮಾತ್ರ) ಇಂದು ಪ್ರಣಾಳ ಶಿಶು ಎನ್ನಲಾಗುತ್ತದೆ. ಪ್ರತಿ ಹತ್ತು ಹೆಂಗಸರಲ್ಲಿ ಒಬ್ಬರು ಬಂಜೆಯಾಗಿರುತ್ತಾರೆಂದು ತಜ್ಞರ ಅಭಿಪ್ರಾಯ. ಸಾಮಾನ್ಯವಾದ ಕಾರಣವೇನೆಂದರೆ ಅಂಡಕೋಶಗಳಿಂದ ಗರ್ಭಕೋಶಕ್ಕೆ ಇರುವ ಮಾರ್ಗದಲ್ಲಿನ ಎರಡು ಅಂಡಾಶಯದ ನಾಳಗಳು
ತಡೆಯಲ್ಪಡುತ್ತವೆ. ಇಂತಹ ಸಂದರ್ಭಗಳಲ್ಲಿ ಗಂಡಿನ ವೀರ್ಯಾಣುವು ಹೆಣ್ಣಿನ ಅಂಡಾಣುವನ್ನು ತಲುಪುವುದಿಲ್ಲವಾದ್ದರಿಂದ ಗರ್ಭಧಾರಣೆ ಸಾಧ್ಯವಿಲ್ಲ ಆಗ ಆ ಹೆಣ್ಣು ಬಂಜೆಯಾಗುತ್ತಾಳೆ. ಆಗ ಇಂಥವರು ಮೂಢ ನಂಬಿಕೆಗಳಿಗೆ ಬಲಿಯಾಗುತ್ತಾರೆ. ಮರ ಸುತ್ತುವುದು, ದೇವರಿಗೆ ಹರಕೆ ಹೊರುವುದು, ನಾಗರಪ್ರತಿಷ್ಠೆ ಮಾಡುವುದು, ಉರುಳುಸೇವೆ ಮಾಡುವುದು, ನವಗ್ರಹ ಪೂಜೆ, ತೀರ್ಥಯಾತ್ರೆ ದೇವರ ತೀರ್ಥವನ್ನು ತಲೆಯ ಮೇಲೆ ಪೂಜಾರಿಗಳಿಂದ ಕೊಡಗಟ್ಟಲೆ ಹಾಕಿಸಿಕೊಳ್ಳುವುದನ್ನೂ ಮಾಡಲಾಗುತ್ತದೆ. ಬಂಜೆಯಾದವಳು ಅಶುಭದ ಸಂಕೇತವೆಂದು ಜರಿಯುತ್ತಾರೆ. ಹೀಗೆಲ್ಲ ಮಾಡುವುದರಿಂದ ಮಕ್ಕಳಾಗದಿದ್ದರೆ ಜಗತ್ತಿನಲ್ಲಿ “ಬಂಜೆ” ಎಂಬ ಪದವೇ ಇರುತ್ತಿರಲ್ಲಿಲ್ಲ. ಪ್ರಾಪ್ತ ವಯಸ್ಕಳಾಗುವ ಹೆಣ್ಣಿನ ಹಾರ್ಮೋನುಗಳಲ್ಲಿ ಉಂಟಾಗುವ
ವ್ಯತ್ಯಾಸಗಳಿಂದ ನಾಳಗಳು ತಡೆಯಲ್ಪಡುತ್ತವೆ ಎಂಬ ವಾಸ್ತವವನ್ನು ನಮ್ಮ ಗ್ರಾಮೀಣ ಜನ ಅರಿಯುವುದೇ ಇಲ್ಲ.

ಕೊನೆಗೊಂದು ದಿನ ಈ ಪ್ರನಾಳ ಶಿಶುವಿನ ಜನನದ ಸಂಶೋಧನೆಯನ್ನು ಶರೀರ ವಿಜ್ಞಾನಿ ರಾಬರ್ಟ್ ಎಡ್ವರ್ಡ್ ಮತ್ತು ಪ್ರಸೂತಿ ಶಾಸ್ತ್ರಜ್ಞ ಪ್ಯಾಟರಿಕ್ ಎಂಬ ಬ್ರಿಟಿಷ್ ತಂಡವು ವರ್ಷಗಳ ಪ್ರಯೋಗದ ನಂತರ ಯಶಸ್ಸು ಪಡೆಯಿತು. ಹೆಂಗಸಿನಿಂದ ಆಂಡಾಣುಗಳನ್ನು ಹೊರತೆಗೆದು ಒಂದು ಗಾಜಿನ ಪಾತ್ರೆಯಲ್ಲಿ ಜೀವಂತವಾಗಿಟ್ಟು ಗಂಡಿನ ವೀರ್ಯಾಣುಗಳ ಜೊತೆಯಲ್ಲಿ ಗರ್ಭಧಾರಣೆ ಮಾಡಿಸಿ ನಂತರ ಹೆಂಗಸಿನ ಗರ್ಭಕೋಶದೊಳಕ್ಕೆ ಸ್ಥಾಪಿಸುವಂತಹ
ವಿಧಾನವಮ್ನ ಇವರು ಕಂಡು ಹಿಡಿದರು. ೧೯೭೮ರಲ್ಲಿ ಈ ಸಂಶೋಧಕ ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ಸಫಲರಾದರು. ಒಂದು ಅಂಡಾಣುವಿನ ಜೊತೆಯಲ್ಲಿ ಒಂದು ವೀರ್ಯಾಣುವು ಫಲೋತ್ಪಾದನೆಯಾಗುವ ವಿಧಾನಕ್ಕೆ ಇನ್ ವಿಟ್ರೋ ಗರ್ಭಧಾರಣೆ ವಿಧಾನ ಎಂದು ಹೆಸರು. ಗರ್ಭನಾಳವು ತುಂಬ ಕಿರಿದಾಗಿರುವ ಹೆಂಗಸರಿಗೆ ಮಾತ್ರವಲ್ಲದೇ ತನ್ನ ಗಂಡನ ಬೀಜಾಣುಗಳಲ್ಲಿ ಸಾಕಷ್ಟು ಶಕ್ತಿ ಇಲ್ಲದಿರುವಂತಹ ಸ್ಥಿತಿಯಲ್ಲಿ ಕೂಡ ಈ ವಿಜ್ಞಾನದಿಂದ ಮಗುವನ್ನು
ಪಡೆಯಬಹುದು. ಆದರೆ ಆ ಹೆಂಗಸಿನ ಗಂಡನ ವೀರ್ಯಾಣುವಿನಿಂದಲ್ಲದೇ ಬೇರೆ ಗಂಡಸಿನ ವೀರ್ಯಾಣುವಿನೊಂದಿಗೆ ಅಂಡವು ಫಲೋತ್ಸದಿಸಿದರೆ ಆಗ ಸಾಮಾಜಿಕ, ನೈತಿಕ, ಕಾನೂನಿನ ತೊಂದರೆಗಳು ಉದ್ಭವಿಸಬಹುದೆಂಬ ಕಾರಣವು ಸಮಾಜ ನೀತಿಯಾಗಿದೆ.

ಗರ್ಭಧರಿಸಿದ ಅಂಡವನ್ನು ದ್ರವ ಸಾರಜನಕ ಉಷ್ಟತೆಯಲ್ಲಿ ಕಾಪಾಡಿ ಇಡಲಾಗುತ್ತದೆ. ಬೇಕೆನಿಸಿದಾಗ ಅವುಗಳನ್ನು ಹೆಂಗಸಿನ ಗರ್ಭಕೋಶದಲ್ಲಿ ಇಡಲಾಗುತ್ತದೆ. ಇದು ಮುಂದುವರೆದ ಸಂಶೋಧನೆಯಾಗಿದ್ದು ದುಬಾರಿ ಖರ್ಚಿನ ಕೆಲಸವಾಗಿದೆ. ಇದಕ್ಕಾಗಿ ಬೇರೆ ಹೆಂಗಸಿನ ಗರ್ಭಕೋಶದಲ್ಲಿ ಬೆಳೆಸಿ, ಮಗುವನ್ನು ಹೆತ್ತು ಕೊಡುವ ಬಾಡಿಗೆ ತಾಯಂದಿರೂ ಇದ್ದಾರೆ. ಅತಿ ಹೆಚ್ಚಿನ ಬಾಡಿಗೆ ಶುಲ್ಕವನ್ನು ಬೇಡಿಕೆಯ ಮೇರೆಗೆ ಬದಲಿ ತಾಯಂದಿರನ್ನು ಬಾಡಿಗೆ ಕೊಡುವ
ಸಂಸ್ಥೆಗಳೂ ಇವೆಯಂತೆ.

ಗಂಡನಲ್ಲಿ ತಾಯಿಯಲ್ಲಿ ನ್ಯೂನ್ಯತೆಗಳಿದ್ದು ಎಂದಿಗೂ ಮಕ್ಕಳಾಗುವುದಿಲ್ಲ ಎಂಬ ವಾದಕ್ಕೆ ವಿಜ್ಞಾನವು ಇಂತಹ ಪ್ರಣಾಳ ಶಿಶುಗಳ ಕೊಡುಗೆಯನ್ನು ನೀಡಿದೆ. ಇದು ನಮ್ಮ ದೇಶಕ್ಕೆ ವ್ಯಾಪಕವಾಗಿ ಇನ್ನೂ ಬಂದಿರುವುದಿಲ್ಲ.
*****

ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...