Home / ಕಥೆ / ಕಿರು ಕಥೆ / ಆತ್ಮ ದರ್‍ಶನ

ಆತ್ಮ ದರ್‍ಶನ

ಕಣ್ಣ ಕಿಡಕಿಯಲ್ಲಿ ದೇಹ ಜಗವ ಕಂಡಿತ್ತು. ಕಿವಿಯಿಂದ ಜಗದ ಸಮ್ಮೋಹನ ಕೇಳಿತ್ತು. ಮೂಗಿನಿಂದ ಜಗ ಮೂಸಿತ್ತು. ಬಾಯಿಯಿಂದ ಜಗದ ಹಾಡ ಹಾಡಿತ್ತು. ಇದರಲ್ಲಿ ತನ್ನ ಇಡೀ ದೇಹದ ಅವಯವಗಳು ಜಗದ ಅರಿವಿಗೆ ಕಿಡಕಿ, ಬಾಗಿಲು, ಹೊಸಿಲಿನಂತಾಗಿ ಅರ್ಥವಿಸಲು ನೆರವು ನೀಡಿತ್ತು.

ಆದರೆ ಆತ್ಮ ದರ್‍ಶನಕ್ಕೆ ಯಾವುದು ಕಿಡಕಿ? ಆತ್ಮ ವೀಕ್ಷಣಕ್ಕೆ ಯಾವುದು ಹೊಸಿಲು, ಬಾಗಿಲು? ಹೃದಯಾಕಾಶದಲ್ಲಿ ಪ್ರಾಣಪಕ್ಷಿ ರೆಕ್ಕೆ ಬಡಿದು ಹಾರಬೇಕು. ಅಂತರಂಗ ಶೋಧ ಮಾಡಬೇಕು. ಒಂದೊಂದು ನಕ್ಷತ್ರವನ್ನು ಹೊಕ್ಕು ನೋಡಬೇಕು. ಮೋಡಗಳ ಸರಿಸಬೇಕು. ಚಂದ್ರ, ಸೂರ್‍ಯರನ್ನು ಕಣ್ಣಾಗಿಸಿಕೊಳ್ಳಬೇಕು. ಮಿಂಚನ್ನು ಓದಬೇಕು. ಬೆಳದಿಂಗಳಲ್ಲಿ ಮೀಯಬೇಕು. ಕಿರಣಗಳ ಜೋಡಿಸಿ ಮಾಲೆ ಕಟ್ಟಬೇಕು. ಅನಿರ್‍ವಚನೀಯ ನೀಲಿ ಆಗಸದ ಶುಭ್ರತೆಯ ನನ್ನದಾಗಿಸಿಕೊಳ್ಳಬೇಕು.

ಜಗದ ಕನಸ ಕರಗಿಸಬೇಕು. ಮನದ ಮಂದಾರ ಅರಳಿಸಬೇಕು. ಜಗದ ಕಾಯಿ ಹಣ್ಣಾಗಿ ಉದರಬೇಕು. ಝಗ ಝಗಿಸುವ ಆತ್ಮದ ದರ್ಶನವಾದೀತು.

ಎಲೆಯ ಮೇಲೆ
ಇಬ್ಬನಿಯ ಕನಸು
ಮೈ ಹರಡಿ
ಹೂವಾಗಿ ಅರಳುತ್ತಿದೆ
ಕಾಯಿ, ಹಣ್ಣಾಗಿ ಉದುರುತ್ತಿದೆ
ಮೇಲೆ ಆಗಸದಲ್ಲಿ
ಸೂರ್‍ಯ ಬೆಳಗುತ್ತಿದೆ.
*****

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...