Home / ಕಥೆ / ಕಿರು ಕಥೆ / ಲಕ್ಷ್ಮೀದೇವಿ

ಲಕ್ಷ್ಮೀದೇವಿ

“ಎಲ್ಲಿ ಹೋಗಿ ಸತ್ತನೋ ಏನೋ ತಿಮ್ಮ, ಎಂಟು ಗಂಟೆಯಾದರೂ ಬರಲೇ ಇಲ್ಲ. ಏ….” ಎಂದು ಒಳಗೆ ಶ್ರೀಮತಿ ಲಕ್ಷ್ಮೀದೇವಿಯವರು ಎಂಟು ಗಂಟೆಯಾದರೂ ಬರದಿದ್ದ ಆಳಿನ ಮೇಲೆ ಕೋಪಿಸಿಕೊಂಡರು.

ಚಹಕ್ಕೆ ಒಳಗಿನಿಂದ ಕರೆಬರಲಿಲ್ಲವೆಂದು ಲಕ್ಷ್ಮೀಪತಿರಾಯರು ಹೀಗೆ ಇಣಿಕಿನೋಡಿದರು. ಪತ್ನಿಯು ಸಿಟ್ಟಿನಿಂದ ಏನೇನೋ ಹಲುಬುತ್ತ ಕೋಣೆಯಿಂದ ಕೋಣೆಗೆ ಸುಳುಮುಳು ಅಲೆಯುತ್ತಿದ್ದಾಳೆ; ಪಾತ್ರೆಗಳನ್ನು ಸರಿಸುತ್ತಿದ್ದಾಳೆ; ವಸ್ತ್ರಗಳನ್ನು ರಾಶಿ ಹಾಕುತ್ತಿದ್ದಾಳೆ.

ರಾಯರ ಪುತ್ರನು ಏನೋ ಬಾಯಿಗೆ ಹಾಕಿಕೊಂಡು ಹೊರಗೆ ಬಂದನು. ಗೋಪೂ ನೋಡು….ಒಳಗೆ ಹೋಗಿ ನಿನ್ನ ಅಮ್ಮನ ಹತ್ತಿರ ಹೇಳು- ಆಳು ಇನ್ನೂ ಬರಲಿಲ್ಲ ಅಂತ ಕಾಣುತ್ತದೆ; ನೀನೇ ಎಮ್ಮೆ ಹಿಂಡಿ ಚಹ ಮಾಡಿಕೊಡು.”

ಪುತ್ರನು ಒಳಗೆ ಹೋಗಿ ತಂದೆಯ ಅಭಿಪ್ರಾಯವನ್ನು ತಾಯಿಗೆ ತನ್ನ ತೊದಲು ನುಡಿಯಲ್ಲಿ ತಿಳಿಸಿದನು.

ಚಹವಿಲ್ಲದೆ ಮಿಡುಕುತ್ತಿದ್ದ ಶ್ರೀಮತಿ ಲಕ್ಷ್ಮೀದೇವಿಯವರು ಕೋಪವನ್ನೆಲ್ಲ ಕೇಂದ್ರೀಕರಿಸಿಕೊಂಡು ಹೊರಗೆ ನುಗ್ಗಿ ಬಂದು “ಅಲ್ಲ, ನನ್ನನ್ನು ನಿಮಗೆ ನನ್ನಪ್ಪ ಐದು ಸಾವಿರ ರೂಪಾಯಿ ಒಟ್ಟಿಗೆ ಕೊಟ್ಟಿದ್ದು ಎಮ್ಮೆ ಹಿಂಡಲಿಕ್ಕಲ್ಲ. ತಿಳಿಯಿತೇ?”

ಚಹವಿಲ್ಲದೆ ಮಿಡುಕುತ್ತಿದ್ದ ಶ್ರೀಮಾನ್ ಲಕ್ಷ್ಮೀಪತಿ ರಾಯರು ತಮ್ಮ ಪತ್ನಿಯ ಮಾತಿನ ಮಳೆಯಲ್ಲಿ ತೊಯ್ದು ಮುದ್ದೆಯಾಗಿ ಮಂಕನಂತೆ ಕುಳಿತುಬಿಟ್ಟರು. ಚಕಾರ ಮಾತಾಡಲಿಲ್ಲ ಅವರು.

ಆಳು ಬಂದು ಎಮ್ಮೆ ಹಿಂಡಿ, ಚಹಮಾಡಿ, ಇಬ್ಬರೂ ಕುಡಿದು ತಮ್ಮ ನಿತ್ಯದ ಕಾರ್ಯಕಲಾಪಗಳಿಗೆ ತೊಡಗಿದರೇನೋ ನಿಜ. ಆದರೆ ರಾಯರ ತಲೆ ಕಿರಿಕಿರಿ ಉಳಿಯಿತು.

ಸಂಜೆಯ ಮುಂದೆ ಅವರು “ನಾಳೆ ಸಂಜೆ ಬರುತ್ತೇನೆ.” ಎಂದು ಹೇಳಿ ಹೊರಟರು.

ಮರುದಿನ ಅವರು ಬರಲು ತುಸು ತಡವಾಯಿತು; ಸಂಜೆಯ ಬದಲು ರಾತ್ರಿಯಾಯಿತು. ಹೊಸ್ತಿಲಿಗೆ ಕಾಲಿಡುವ ಮುಂಚೆ ಲಕ್ಷ್ಮೀದೇವಿಯವರು ತಮ್ಮ ಪತಿಯು ತಡವಾಗಿ ಬಂದ ಬಗ್ಯೆ ಗುಡುಗಿ ಮಿಂಚಿ ಮಾತಿನ ಮಳೆಗರೆದರು.

ರಾಯರು ಚಕಾರ ಮಾತಾಡದೆ ಐದು ಸಾವಿರ ಮುಟ್ಟಿದ ಬಗ್ಗೆ ತಮ್ಮ ಮಾವಂದಿರು-ಅರ್ಥಾತ್ ದೇವಿಯವರ ತಂದೆಯವರು ಕೊಟ್ಟ ಪಾವತಿಯನ್ನು ತಮ್ಮ ಪತ್ನಿಯ ದೃಷ್ಟಿಗೆ ಹಿಡಿದರು.

ಲಕ್ಷ್ಮೀದೇವಿಯ ಕಣ್ಣು ತುಂಬಿ ಬಂದುವು. ಅವರು-ಅಲ್ಲ-ಅವಳು-ನಿಜವಾಗಿ (ಕಂಬನಿ) ಮಳೆಗರೆದಳು.

ಮರುದಿನ ಮುಂಜಾನೆ ರಾಯರು ಎಚ್ಚರಾಗಿ ಕಣ್ಣು ತೆರೆಯುವಾಗ ಲಕ್ಷ್ಮೀದೇವಿ ಕಸ ಹೊಡೆಯುತಿದ್ದಾಳೆ!
*****

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...