Home / ಕವನ / ಕವಿತೆ / ನಾಡಿನಳ್ಕರೆ

ನಾಡಿನಳ್ಕರೆ

ಬಾನು ತೆರದಿರೆ ತಿರೆಯ ತೊಯ್ದಿರೆ ಸೂರ್ಯ ತನ್ನನುರಾಗದಿ
ದೃಷ್ಟಿಹೊಂದಿರೆ ರಸೆಗೆ ಹಸುಳೆಯ ಸ್ತನ್ಯಪಾನದ ಭಾವದಿ
ಕನಸುಮುಂದಿರೆ ನಾಡಿನಳ್ಕರೆ ಹೃದಯದೊಳು ಮಡುವಾಗಿರೆ
ನಮ್ಮನಾಡನು ಕುರಿತು ನಾನಿಂದಾವತೆರದೊಳು ಹಾಡಲಿ?

ನಲಿವ ತೋಪಿನ ನಗುವ ಕೆರೆಗಳ ಹುಲುಸು ಪೈರಿನ ಹೊಲಗಳ
ದೂರ ಕುಲಪಿತರಂತೆ ರಕ್ಷೆಗೆ ಕುಳಿತ ಸಾಲಿನ ಮಲೆಗಳ
ಜೀವದಾನದ ಅಂಬುವಾಹದ ಬಯಲ ಮಡಲಿನ ಹಳ್ಳಿಯ
ನಮ್ಮ ನೆಲದೀ ಚೆಲುವ ಕುರಿತಿಂದಾವ ತರದೊಳು ಹಾಡಲಿ?

ದಿನವ ದೇವನ ತೇರಸೆಳೆಯುವ ಕುದುರೆಯೇಳರ ಕೆನತಕೆ
ಹೊಳಲುಗೊಡುವಿಂಚರದ ಕಣಿವೆಯ, ಮಲೆಯ ಗಾಳಿಯ ಮಲೆತಕೆ
ಹುರುಪುಗೊಡುತಿಹ ಹೂತ ಹಿಪ್ಪೆಯ ಕಂಪಿನುಸಿರಿನ ಹುಳುವಿನ
ಹೊಲದ ತಾಯಿಯ ಮೊಲೆಯ ತೆರದೊಳು ಕಣದ ಬಣಬೆಗಳೊಟ್ಟಿನ

ತಳಿರಿನವಕುಂಠನದಿ ಮಾಧವವಧುವಿನಂದದ ಮಾವಿನ
ತರಳಪರ್ಣಾಶ್ವತ್ಥವೃಕ್ಷಕೆ ಮಧುರಳಾಗಿಹ ಬೇವಿನ
ಸ್ವಾವಲಂಬನದಿಂದ ಹಳುವನೆ ತುಂಬುವೊಲು ಬೆಳೆವಾಲದ
ತಂಪುನೆಳಲೊಳು ಬಿಡುವಗೊಳ್ಳಲು ಗೊಲ್ಲನೊಲಿವ ತಮಾಲದ

ಕೋಡತುದಿಯೊಳು ಕಾಡನಡುಗಡೆ ಆತ್ಮದನುಭವಸಾರವ
ತುಂಬಿಯಂದದಿ ಮರ್ತ್ಯ ಕೂಡಿಡೆ ಬಯಸಿ ಭದ್ರಾಗಾರವ
ನಿರ್ಮಿಸಿಹ ನೀತೆರದೊಳೆನುವಂತಿರುವ ಗುಡಿಗೋಪುರಗಳ
ಬದುಕಿಗೂರಿದ ಸೊಬಗೆ ಹರಳಾದಂತೆ ಮೆರೆಯುವ ಪುರಗಳ-

ಮೊಲ್ಲೆ ಮಲ್ಲಿಗೆ ಜಾಜಿ ಸಂಪಗೆ ಸುರಗಿ ಪಾದರಿ ಕೇದಗೆ
ಹಲವು ಹೋಲಿಕೆಗಾದ ಪಂಕಜ ಇರವಂತಿ ಸೇವಂತಿಗೆ
ಪಾರಿಜಾತ ಸುಗಂಧರಾಜ ಕದಂಬ ಜಾಲಿಯ ಸೌಸವ
ಆವ ಮಣ್ಣೀತೆರದ ಕಂಪೊಳು ಪ್ರಕಟಿಪುದು ತನ್ನಾತ್ಮವ?

ತಿಣ್ಣಮಲೆಗಾಳಿಯನು ಹೊಗಳಲೆ ತಪ್ಪಲಿನ ಕಮ್ಮೆಲರನು
ಕೆರೆಯ ಚೆಂದಾವರೆಯ ಹೂಗಳ ಹಾಯ್ದು ಬಹ ತಣ್ಣೆಲರನು
ಮಳೆಯ ಮೋಡದಿ ತೂರಿ ಮಿಂಚನು ಕುಣಿಸಿ ಗುಡುಗನು ದನಿಸುತ
ಜವ್ವನಿಗರೆದೆ ಬೆದರೆ ಬರುವಾ ಮುಂಗಾರ ಬೆದೆಗಾಳಿಯ ?

ಮಾಂದಳಿರ ಕೈಯಾಡೆ ಕೋಗಿಲೆ ಕೂಗೆ ದುಂಬಿಯು ಮೊರೆಯಿಡೆ
ಪಚ್ಚೆಗಿಳಿಗಳ ತೊಡವ ತೋರುತ ಗೋಣಿಮರಗಳು ಸಾಲಿಡೆ
ಹಚ್ಚ ಹಸುರಿನ ನಡುವೆ ಬೆಳ್ಳನೆ ದಾರಿ ಪಯಣಕೆ ಹೊರಟಿರೆ
ನನ್ನ ಚಿತ್ತವ ದಾರಿಗನ ಗೈದೆಲ್ಲಿಗೈದಿಸಲೀ ದಿನ?

ನೆಲಮುಗಿಲ ಕನಸುಗಳ ಕೊಳ್ಳುತ ದನಿಯ ದೋಣಿಯೊಳಾಡಿಸಿ
ಎಲರ ಮಲರಿಸುವಂಥ ಹಕ್ಕಿಗಳಿಂಚರವ ನಾನಾಲಿಸಿ
ಭಾವ ಶೃಂಗಾರದೊಳು ಛಂದೋಗತಿಗೆ ನರ್ತಿಸಲೆಳಸುವೀ
ನುಡಿಯ ಲಾಸ್ಯಕೆ ರಂಗವಾವುದ ಸಜ್ಜುಗೊಳಿಸುವೆನೇಪರಿ?
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...