Home / ಕಥೆ / ಕಿರು ಕಥೆ / ಜ್ಯೋರ್ತಿಗುರು

ಜ್ಯೋರ್ತಿಗುರು

ಶಿಷ್ಯನೊಬ್ಬ ಗುರುವನ್ನು ಹುಡುಕಿಹೊರಟಿದ್ದ. ವನದಲ್ಲಿ ಬಂದಾಗ ದೊಡ್ಡ ವೃಕ್ಷಗಳನ್ನು ನೋಡಿದ. ಶಾಖೆ ಶಾಖೆಯಲ್ಲಿ ಗೊಂಚಲು ಗೊಂಚಲು ಎಲೆ, ಹೂ, ಕಾಯಿ, ಫಲಗಳು. ಕಾಂಡದಲ್ಲಿ ಅತೀವ ಧೃಡತೆ, ಬೇರಿನಲ್ಲಿ ಅಸಾಧ್ಯಬಿಗಿ, ಹಿಡಿತ, ಜೀವಸಂಚಾರ ಎಲ್ಲವನ್ನೂ ಗ್ರಹಿಸಿದ, ಅಗಾಧವಾದ ಸಂತಸದಿಂದ ನಮಿಸಿ “ವೃಕ್ಷಗುರುವೇ ನಮಃ ಎಂದು ಧ್ಯಾನ ಮಾಡಿ ಮುಂದೆ ನಡೆದ.”

ಹೋಗುವ ದಾರಿಯಲ್ಲಿ ಒಂದು ಬಿದಿರಿನ ತೋಪು ಸಿಕ್ಕಿತು. ಬಳಲಿದ್ದ ಶಿಷ್ಯ, ವಿರಮಿಸಲು ಬಿದಿರಿನ ತೋಪಿನಲ್ಲಿ ಕುಳಿತ. ಒಂದು ಚಿಕ್ಕ ಬಿದಿರನ್ನು ಮುರಿದು ಏಳು ರಂಧ್ರಮಾಡಿ ಊದತೊಡಗಿದ. ನಾದದ ಸಪ್ತ ಸ್ವರ ತರಂಗದಲ್ಲಿ ಮುಳುಗಿದ. ನಾದ ಬ್ರಹ್ಮನಲ್ಲಿ ಲೀನನಾಗಿ ನಮಿಸಿ ಮುಂದೆ ಸಾಗಿದ.

ಝುಳು ಝುಳು ಎಂದು ನದಿಯೊಂದು ಹರಿಯುತಿತ್ತು. ಬೆಟ್ಟ ಗುಡ್ಡ ಧುಮುಕಿ, ಕಣಿವೆ ಕಂದರ ದಾಟಿ ಬರುತ್ತಿದ್ದ ನದಿಯ ದಡದಲ್ಲೇ ನಡೆದು ಬಂದ ಶಿಷ್ಯ. ಬಾಯಾರಿ ಬಳಲಿರಲು ಬೊಗಸೆಯಲ್ಲಿ ನದಿಯ ನೀರನ್ನು ಕುಡಿದು “ದಾಹ ತೀರಿಸಿದ ಗುರುವೆ ನಿನಗೆ ನದಿಯೆ ನಮೋ” ಎಂದು ಮುನ್ನಡೆದ.

ಹಾಗೇ ಬರುತ್ತಾ, ಒಂದು ಬೆಟ್ಟದ ಎದುರಲ್ಲಿ ಬಂದು ನಿಂತ. ಹರಿದಾಡುತ್ತಿದ್ದ ಮನವನ್ನು ಬೆಟ್ಟದ ದೃಢತೆಯಲ್ಲಿ ನಿಲ್ಲಿಸಿ ಧ್ಯಾನಗೈದ. ತನ್ನ ಅಂತರಂಗದಲ್ಲಿ ಜ್ಯೋರ್ತಿಗುರುವನ್ನು ಕಂಡ. ಕಣ್ಣು ತೆರೆದಾಗ ಬೆಟ್ಟದಡಿ ವಾಸವಾಗಿದ್ದ ಗುರುಗಳು ಬಂದು
“ನೀ ಇಲ್ಲಿಗೇಕೆ ಬಂದಿರುವೆ?” ಎಂದು ಕೇಳಿದರು.
“ನಾನು ಗುರುವನ್ನು ಹುಡುಕಿ ಬಂದಿರುವೆ” ಎಂದ ಶಿಷ್ಯ.
“ನೀನು ಬರುವ ಹಾದಿಯಲ್ಲಿ ನೀ ಸಂಧಿಸಿದವರಾರು?” ಎಂದು ಕೇಳಿದರು ಗುರುಗಳು. “ವೃಕ್ಷಗುರು, ಬಿದಿರಕೊಳಲಗುರು, ನದಿಯಗುರು ಕೊನೆಗೆ ಇಲ್ಲಿ ಧ್ಯಾನದಲ್ಲಿ ಅಂತರಂಗದ ಜ್ಯೋತಿರ್ ಗುರವನ್ನು ಕಂಡೆ” ಎಂದು ಹೇಳಿದ ಶಿಷ್ಯ. ಬಹಿರಂಗದಲ್ಲಿರುವ ಗುರುವನ್ನು, ನಿನ್ನಲ್ಲೇ ಇರುವ ಅಂತರಂಗದ ಗುರುವನ್ನು ನೀ ಕಂಡು ಕೊಂಡ ಮೇಲೆ, ಸರ್ವಂಗುರುಮಯಂ ಜಗತ್ ಆಗಿರುವಾಗ ಮತ್ತೆ ಏಕೆ ಗುರವನ್ನು ಹುಡುಕಿ ಹೊರಟಿರುವೆ?” ಎಂದರು ಗುರುಗಳು. ಇದನ್ನು ಅರಿವಿಗೆ ತಂದ ಗುರುಗಳ ನುಡಿಗೆ ನಮಿಸಿ ಶಿಷ್ಯ ಮುನ್ನಡೆದ.
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...