Home / ಕಥೆ / ಕಿರು ಕಥೆ / ಜ್ಯೋರ್ತಿಗುರು

ಜ್ಯೋರ್ತಿಗುರು

ಶಿಷ್ಯನೊಬ್ಬ ಗುರುವನ್ನು ಹುಡುಕಿಹೊರಟಿದ್ದ. ವನದಲ್ಲಿ ಬಂದಾಗ ದೊಡ್ಡ ವೃಕ್ಷಗಳನ್ನು ನೋಡಿದ. ಶಾಖೆ ಶಾಖೆಯಲ್ಲಿ ಗೊಂಚಲು ಗೊಂಚಲು ಎಲೆ, ಹೂ, ಕಾಯಿ, ಫಲಗಳು. ಕಾಂಡದಲ್ಲಿ ಅತೀವ ಧೃಡತೆ, ಬೇರಿನಲ್ಲಿ ಅಸಾಧ್ಯಬಿಗಿ, ಹಿಡಿತ, ಜೀವಸಂಚಾರ ಎಲ್ಲವನ್ನೂ ಗ್ರಹಿಸಿದ, ಅಗಾಧವಾದ ಸಂತಸದಿಂದ ನಮಿಸಿ “ವೃಕ್ಷಗುರುವೇ ನಮಃ ಎಂದು ಧ್ಯಾನ ಮಾಡಿ ಮುಂದೆ ನಡೆದ.”

ಹೋಗುವ ದಾರಿಯಲ್ಲಿ ಒಂದು ಬಿದಿರಿನ ತೋಪು ಸಿಕ್ಕಿತು. ಬಳಲಿದ್ದ ಶಿಷ್ಯ, ವಿರಮಿಸಲು ಬಿದಿರಿನ ತೋಪಿನಲ್ಲಿ ಕುಳಿತ. ಒಂದು ಚಿಕ್ಕ ಬಿದಿರನ್ನು ಮುರಿದು ಏಳು ರಂಧ್ರಮಾಡಿ ಊದತೊಡಗಿದ. ನಾದದ ಸಪ್ತ ಸ್ವರ ತರಂಗದಲ್ಲಿ ಮುಳುಗಿದ. ನಾದ ಬ್ರಹ್ಮನಲ್ಲಿ ಲೀನನಾಗಿ ನಮಿಸಿ ಮುಂದೆ ಸಾಗಿದ.

ಝುಳು ಝುಳು ಎಂದು ನದಿಯೊಂದು ಹರಿಯುತಿತ್ತು. ಬೆಟ್ಟ ಗುಡ್ಡ ಧುಮುಕಿ, ಕಣಿವೆ ಕಂದರ ದಾಟಿ ಬರುತ್ತಿದ್ದ ನದಿಯ ದಡದಲ್ಲೇ ನಡೆದು ಬಂದ ಶಿಷ್ಯ. ಬಾಯಾರಿ ಬಳಲಿರಲು ಬೊಗಸೆಯಲ್ಲಿ ನದಿಯ ನೀರನ್ನು ಕುಡಿದು “ದಾಹ ತೀರಿಸಿದ ಗುರುವೆ ನಿನಗೆ ನದಿಯೆ ನಮೋ” ಎಂದು ಮುನ್ನಡೆದ.

ಹಾಗೇ ಬರುತ್ತಾ, ಒಂದು ಬೆಟ್ಟದ ಎದುರಲ್ಲಿ ಬಂದು ನಿಂತ. ಹರಿದಾಡುತ್ತಿದ್ದ ಮನವನ್ನು ಬೆಟ್ಟದ ದೃಢತೆಯಲ್ಲಿ ನಿಲ್ಲಿಸಿ ಧ್ಯಾನಗೈದ. ತನ್ನ ಅಂತರಂಗದಲ್ಲಿ ಜ್ಯೋರ್ತಿಗುರುವನ್ನು ಕಂಡ. ಕಣ್ಣು ತೆರೆದಾಗ ಬೆಟ್ಟದಡಿ ವಾಸವಾಗಿದ್ದ ಗುರುಗಳು ಬಂದು
“ನೀ ಇಲ್ಲಿಗೇಕೆ ಬಂದಿರುವೆ?” ಎಂದು ಕೇಳಿದರು.
“ನಾನು ಗುರುವನ್ನು ಹುಡುಕಿ ಬಂದಿರುವೆ” ಎಂದ ಶಿಷ್ಯ.
“ನೀನು ಬರುವ ಹಾದಿಯಲ್ಲಿ ನೀ ಸಂಧಿಸಿದವರಾರು?” ಎಂದು ಕೇಳಿದರು ಗುರುಗಳು. “ವೃಕ್ಷಗುರು, ಬಿದಿರಕೊಳಲಗುರು, ನದಿಯಗುರು ಕೊನೆಗೆ ಇಲ್ಲಿ ಧ್ಯಾನದಲ್ಲಿ ಅಂತರಂಗದ ಜ್ಯೋತಿರ್ ಗುರವನ್ನು ಕಂಡೆ” ಎಂದು ಹೇಳಿದ ಶಿಷ್ಯ. ಬಹಿರಂಗದಲ್ಲಿರುವ ಗುರುವನ್ನು, ನಿನ್ನಲ್ಲೇ ಇರುವ ಅಂತರಂಗದ ಗುರುವನ್ನು ನೀ ಕಂಡು ಕೊಂಡ ಮೇಲೆ, ಸರ್ವಂಗುರುಮಯಂ ಜಗತ್ ಆಗಿರುವಾಗ ಮತ್ತೆ ಏಕೆ ಗುರವನ್ನು ಹುಡುಕಿ ಹೊರಟಿರುವೆ?” ಎಂದರು ಗುರುಗಳು. ಇದನ್ನು ಅರಿವಿಗೆ ತಂದ ಗುರುಗಳ ನುಡಿಗೆ ನಮಿಸಿ ಶಿಷ್ಯ ಮುನ್ನಡೆದ.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...