Home / ಕವನ / ಕವಿತೆ / ವನಜ್ಯೋತ್ಸ್ನೆ

ವನಜ್ಯೋತ್ಸ್ನೆ

ನಿಬಿಡವನದಲಿ ಪಟ್ಟಮುದ್ರೆಯನೊತ್ತಿ,
ಮಿಳಿದಿರುವೆ ರಂಗದಲಿ ವನಜ್ಯೋತ್ಸ್ನೆ!
ನಿಲುವಾಭರಣ ಚಲುವಸುಂದರಿಪಾರೆ!
ಪ್ರಕೃತಿ ತೋರಣದಲ್ಲಿ ಕೂಡಿರುವೆ, ವೈಯ್ಯಾರವನಿತೆ!
ಕಲಕಲನಿನಾದ ಚಲಚಲನೆ ವೈಖರಿಯ
ತೋರಿರುವೆ, ಸೃಷ್ಟಿ ಚೇತನದಲ್ಲಿ; ಸಂಭೂತೆ!
ನಸುಗೆಂಪುಬಣ್ಣ ತೊಡಿಗೆಯನುತೋರಿ.
ನಿಟ್ಟಡವಿ ದಟ್ಟವನದಿ ಮೆರೆದಿರುವೆ ಕಲ್ಯಾಣಿ!

ಪಾವನನಯನೆ ವನಜ್ಯೋತ್ಸ್ನೆ ಪರಿಪೂರ್ಣೆ!
ಪ್ರಕೃತಿ ಉಸುರಿನಲಿ ಭಾವಸೊಬಗನುತೋರಿ
ಕಾವ್ಯಮಯ ಜಗದಿ ನೀ ವಿಹಾರಿಣಿ ಅತುಳೆ!
ಹೃದಯದಲಿ ಹೊಮ್ಮುತಿದೆ ಉಕ್ಕೇರಿ ಭಾವನೆ
ಹರಿದು ಹೊನಲಾಗಿ ಹರಿಯುತಿದೆ ಮಾಯೆ!
ವನಿತೆ ನಿನ್ನೆಡೆಯ ಸೇರಲು, ತವಕದಿಂ ಸ್ವಪ್ನೆ!
ಕರತಲ, ಕಮಲ, ಕಮನೀಯ ಕಲಾನಿಪುಣೆ
ವಾಣಿ! ವಾಗ್ದವಿ! ಕಾವ್ಯಸರಸಿಯು ನೀನು
ಅಸಾರತ್ವದಲ್ಲಿ, ನಿರ್ಮಾಣ ಸುರಭಿಯಲಿ
ನದ, ನಭ, ನಟನೆ; ತತ್ಸಮಸ್ತದಲಿ
ದರ್ಶನನೀಡಿ ತಳತಳಿಸು ಮಹತಾಯೆ!
ಅತುಳ ತಾಪಸಕುವರಿ ವಿಖ್ಯಾತಮಾನ್ಯೆ!
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...