Home / ಕವನ / ಕವಿತೆ / ಅಮ್ಮ!

ಅಮ್ಮ!

(ವಿಯೋಗ ಗೀತ)


ಅಮ್ಮ! ನಿನ್ನ ವಿಯೋಗದರಿವಿನಲಿ ನನ್ನೆದೆಯು
ಸಂತಾಪದಲಿ ಸಿಡಿಯುತಿತ್ತು!
ದುಮ್ಮಾನದುರಿಯಲ್ಲಿ ಆಹುತಿಗೆ ಸಂದಿತ್ತು!
ಮನವು ಸುಡುಗಾಡಿನಂತಿತ್ತು!


ಕಣ್ಣೀರ ಕಾಳ್ಪುರವು ಕಾಲಾಗಿ ಹರಿದತ್ತು!
ಉತ್ಸಾಹದೈಸಿರಿಯ ಮೇಲೆ
ಮಣ್ಣೆರಚಿದಂತಾಯ್ತು! ನಲವಿನೊರತೆಯು ಬರತು,
ನಾಟ್ಯವೆಸೆಗಿತು ದುಃಖಲೀಲೆ!


ಜೀವನದ ದಾರಿಯಲಿ ಕೈದೀಪದಂತಿದ್ದೆ;-
ದೀಪವದು ನಂದಿದಂತಾಯ್ತು!
ಓವಿ ಮುನ್ನಡೆಸುತಿಹ ಊರ್ಗೋಲಿನಂತಿದ್ದೆ;-
ಆ ಕೋಲು ಮುರಿದ ಹಾಗಾಯ್ತು


ಕಣ್ಣಿಗಾ ನಿನ್ನ ಭೌತಿಕ ಶರೀರದ ರೂಹು
ಇನ್ನು ಕಾಣದಿರಲೇನಹುದು?-
ನಿನ್ನ ಮಂಗಲ ರೂಪವೆನ್ನ ಹೃದಯದ ಪಟದಿ
ಅಚ್ಚಳಿಯದಂತೆ ನೆಲಸಿಹುದು


ಎನ್ನಲ್ಲಿ ಹೆಚ್ಚಾದ ನಿನ್ನೊಲವ ನೆನೆನೆನೆದು,
ಅವ್ಯಾಜ ಪ್ರೇಮವನು ಸ್ಮರಿಸಿ,
ಉನ್ನತಿಯನೈದುತಿದೆ ವಿರಹಾಗ್ನಿಯದನೀಗ
ನ೦ದಿಸುವೆ ಕಂಬನಿಯ ಸುರಿಸಿ


ನಾನಂದು ಶಾಲೆಯಿಂದೈತರುವ ಸಮಯದಲಿ
ಒ೦ದಿನಿತು ಹೊತ್ತಾಗುವಲ್ಲಿ,
ನೀನು ಮನೆಯಿಂದಿಳಿದು ಬಂದೆನ್ನ ದಾರಿಯನು
ಕಾಯುತ್ತ ನಿಂತಿದ್ದೆಯಲ್ಲಿ


ಹೆಣ್ಣಮಕ್ಕಳು ನಿನಗೆ ಹುಟ್ಟಿದಿಹ ಮರುಕದಲಿ
ಚಿಕ್ಕಂದು ನಮ್ಮ ತಲೆ ನೆಯ್ದು,
ಗೋರಂಟಿ ಹೂದಂಡೆ ನೆತ್ತಿವರೆಗೂ ಸೂಡಿ,
ಸಂತೋಷವಾಂತಿದ್ದೆಯೊಲಿದು


ಅದನೀಗ ಮನದಲ್ಲಿ ನೆನೆವಲ್ಲಿ, ಕೂರಲಗು
ನೆಟ್ಟಂತೆ ವೇದನೆಯ ಬಾಧೆ
ಒದವುತಿದೆ; ನಿನ್ನತುಲ ಮಮತೆಯರಿವಾಗುತಿದೆ
ನಲ್ಮೆಯಾ ನೆನಹದಾಗುತ್ತಿದೆ


ಅಸ್ಥಿರದ ಜಡದೇಹ ಮರೆಯಾದರೇನಂತೆ?
ನಿನ್ನ ಪರಿಶುದ್ಧಾತ್ಮದೊಲವು
ಸುಸ್ಥಿರವದಾಗೆನ್ನ ಬೆಂಬಿಡದೆ ಸರಿಯಾಗಿ
ಪೊರೆಯುತಕಿರಲನವರತವು!
*****
೧೯೩೫

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...