Home / ಕವನ / ಕವಿತೆ / ಅಮ್ಮ!

ಅಮ್ಮ!

(ವಿಯೋಗ ಗೀತ)


ಅಮ್ಮ! ನಿನ್ನ ವಿಯೋಗದರಿವಿನಲಿ ನನ್ನೆದೆಯು
ಸಂತಾಪದಲಿ ಸಿಡಿಯುತಿತ್ತು!
ದುಮ್ಮಾನದುರಿಯಲ್ಲಿ ಆಹುತಿಗೆ ಸಂದಿತ್ತು!
ಮನವು ಸುಡುಗಾಡಿನಂತಿತ್ತು!


ಕಣ್ಣೀರ ಕಾಳ್ಪುರವು ಕಾಲಾಗಿ ಹರಿದತ್ತು!
ಉತ್ಸಾಹದೈಸಿರಿಯ ಮೇಲೆ
ಮಣ್ಣೆರಚಿದಂತಾಯ್ತು! ನಲವಿನೊರತೆಯು ಬರತು,
ನಾಟ್ಯವೆಸೆಗಿತು ದುಃಖಲೀಲೆ!


ಜೀವನದ ದಾರಿಯಲಿ ಕೈದೀಪದಂತಿದ್ದೆ;-
ದೀಪವದು ನಂದಿದಂತಾಯ್ತು!
ಓವಿ ಮುನ್ನಡೆಸುತಿಹ ಊರ್ಗೋಲಿನಂತಿದ್ದೆ;-
ಆ ಕೋಲು ಮುರಿದ ಹಾಗಾಯ್ತು


ಕಣ್ಣಿಗಾ ನಿನ್ನ ಭೌತಿಕ ಶರೀರದ ರೂಹು
ಇನ್ನು ಕಾಣದಿರಲೇನಹುದು?-
ನಿನ್ನ ಮಂಗಲ ರೂಪವೆನ್ನ ಹೃದಯದ ಪಟದಿ
ಅಚ್ಚಳಿಯದಂತೆ ನೆಲಸಿಹುದು


ಎನ್ನಲ್ಲಿ ಹೆಚ್ಚಾದ ನಿನ್ನೊಲವ ನೆನೆನೆನೆದು,
ಅವ್ಯಾಜ ಪ್ರೇಮವನು ಸ್ಮರಿಸಿ,
ಉನ್ನತಿಯನೈದುತಿದೆ ವಿರಹಾಗ್ನಿಯದನೀಗ
ನ೦ದಿಸುವೆ ಕಂಬನಿಯ ಸುರಿಸಿ


ನಾನಂದು ಶಾಲೆಯಿಂದೈತರುವ ಸಮಯದಲಿ
ಒ೦ದಿನಿತು ಹೊತ್ತಾಗುವಲ್ಲಿ,
ನೀನು ಮನೆಯಿಂದಿಳಿದು ಬಂದೆನ್ನ ದಾರಿಯನು
ಕಾಯುತ್ತ ನಿಂತಿದ್ದೆಯಲ್ಲಿ


ಹೆಣ್ಣಮಕ್ಕಳು ನಿನಗೆ ಹುಟ್ಟಿದಿಹ ಮರುಕದಲಿ
ಚಿಕ್ಕಂದು ನಮ್ಮ ತಲೆ ನೆಯ್ದು,
ಗೋರಂಟಿ ಹೂದಂಡೆ ನೆತ್ತಿವರೆಗೂ ಸೂಡಿ,
ಸಂತೋಷವಾಂತಿದ್ದೆಯೊಲಿದು


ಅದನೀಗ ಮನದಲ್ಲಿ ನೆನೆವಲ್ಲಿ, ಕೂರಲಗು
ನೆಟ್ಟಂತೆ ವೇದನೆಯ ಬಾಧೆ
ಒದವುತಿದೆ; ನಿನ್ನತುಲ ಮಮತೆಯರಿವಾಗುತಿದೆ
ನಲ್ಮೆಯಾ ನೆನಹದಾಗುತ್ತಿದೆ


ಅಸ್ಥಿರದ ಜಡದೇಹ ಮರೆಯಾದರೇನಂತೆ?
ನಿನ್ನ ಪರಿಶುದ್ಧಾತ್ಮದೊಲವು
ಸುಸ್ಥಿರವದಾಗೆನ್ನ ಬೆಂಬಿಡದೆ ಸರಿಯಾಗಿ
ಪೊರೆಯುತಕಿರಲನವರತವು!
*****
೧೯೩೫

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...