Home / ಕವನ / ಕವಿತೆ / ಪೆಣ್ಣಿನ ಮಹಿಮೆಯು

ಪೆಣ್ಣಿನ ಮಹಿಮೆಯು

ಆಪವೆನಿಪುದು ನೀರು ಅದರಿಂಳಿಳಮಾನವಕೋಟಿ ಜನಿಸಿತು |
ಆಪಸಾಗರನಾಯ್ತು ನಾರಾಯಣ ಗಧಿಷ್ಠಾನಾ ||
ಆದಿಯೋಳಂಡದೊಳು ಗರ್ಭಿತಮಾಗಿ ಹರಿ ತಾಸಮಾಧಿಯೊಳಗಿರೆ
ಆದಿಲಕುಮಿಯು ಪ್ರಕೃತಿದೇವಿಯು ಪತಿಯ ಬಳಿಸಾರೆ || ೧ ||

ಆಗಲಾಗೆ ಸಮಾಧಿ ಭಂಗವು ಅಂಡಶೀಳಿತು ಅದರೊಳಿಹ ಹರಿ |
ನಾಭಿಯಿಂದಲಿ ಕಮಳವೆದ್ದಿತು ಮೇಲೆ ತಾನಾಗ ||
ಆಗಜಿಗಿಯಿತು ಮೂಲಜೋತಿಯು ಆಗಸದಿ ನೇಸರನಾಗಿ ಹೊಳೆಯಿತು |
ಆದಿನಾರಾಯಣನು ತನ್ನಯ ಲೀಲೆ ಪೂಡಿದನು || ೨ ||

ಕಮಳದಹೊಳ್ತಾವಿಧಿಯರೂಪದಿ ಹೊರಟ ತೇಜವು ನಾಲ್ಮೊಗವಪಡೆಯುತೆ |
ಕಮಳಸಂಭವನಾಗಿ ತೋರುತೆ ಸೃಷ್ಟಿ ನಿರ್ಮಿಸಿದ ||
ಪ್ರಕೃತಿಯಿಂ ಘಟಗಳನು ನಿರ್ಮಿಸಿ ಆತ್ಮರೂಪದ ತೇಜವದರೆೊಳು |
ವಿಕೃತಿಪೊಂದದೊಳಿರಿಸಿ ಜೀವನ ರಾಶಿ ಪುಟ್ಟಿಸಿದಾ || ೩ ||

ಪ್ರಕೃತಿರೂಪದ ಪೆಣ್ಣಿನ್ನೋಳ್ಹರಿ ಪುರುಷರೂಪದಿ ಮಿಳತನಾಗಲು |
ಪ್ರಕೃತಿ ಪುರುಷರ ಮಿಲನ ಲೀಲೆಯೆ ವಿಶ್ವವಿಸ್ತಾರಾ ||
ಪ್ರಕೃತಿ ರೂಪದ ಪೆಣ್ಣು ಕ್ಷೇತ್ರವು ಪುರುಷರೂಪದಿ ತೇಜ ಪಡೆಯುತೆ |
ಸಕೃತದೊಳ್ಫಲವೀಯೆ ಮಾನವ ಕೋಟಿ ಜನಿಸುವುದೂ || ೪ ||

ಪೆಣ್ಣು ಅಲ್ಲವೆ ನಮ್ಮಪೆತ್ತಿಹ ಮಾತೆ ಜಗದೊಳು ನಮ್ಮಪೊರೆದಳು |
ಪೆಣ್ಣ ಮಹಿಮೆಯನರಿಯೆ ಪಡೆವವು ನಿತ್ಯಸೌಖ್ಯಗಳಾ ||
ಪೆಣ್ಣು ಪ್ರಕೃತಿಯರೂಪು ಶ್ರೀಹರಿ ಪ್ರಿಯಳುಯೆನಿಸಿದಳಾದಿಲಕ್ಷ್ಮಿಯು |
ಪೆಣ್ಣನೆಂದಿಗು ಬೀಳುಗೆಡಹದೆ ನಡೆಯೆನಿಜಸುಖವೂ || ೫ ||

ಪೆಣ್ಣು ಪಾರ್ವತಿರೂಪುತಾಳುತೆ ಬಳವಕೊಡುವಳು ನಿತ್ಯಮನುಜಗೆ ।
ಪೆಣ್ಣು ಲಕುಮಿಯ ರೂಪಿರಿಂದಲಿ ಧನವನೀಡುವಳೂ ||
ಪೆಣ್ಣು ಸರತಿಸಯಾಗಿ ಬಿಜ್ಜೆಯ ಪೊಳೆಯ ಜಗದೊಳು ಹರಿಸಿಯದರಾ |
ಹಣ್ಣು ಸವಿಯುತೆ ನರನು ಪಡೆವನು ಸೌಖ್ಯ ಇಹಪರವಾ || ೬ ||

ಪೆಣ್ಣು ಮೋಹಿನಿಯಾಗಿ ಹರಿದಾನವರ ನಾಶವಗೈದ ಪೂರ್ವದಿ।
ಪೆಣ್ಣು ದುರ್ಗೆಯು ಕೃಷ್ಣಭಗಿನಿಯು ಜಗದಿ ಮೆರೆಯುತ್ತೆ ||
ಪೆಣ್ಣು ಶಾಕಂಬರಿಯು ಭೀಕರ ರೂಪುತಾಳುತೆ ದುಟ್ಟರಕ್ಕಸ- |
ರನ್ನುಸದೆದಳು ಶಕ್ತಿಯೆನಿಸುತೆ ತಾಯಿ ಮಹಕಾಳೀ || ೭ ||

ಪೆಣ್ಣು ಸೀತಿಯು ಘೋರ ರೂಪವತಾಳಿ ಶತಶಿರನನ್ನು ಕೊಂದಳು |
ಪೆಣ್ಣು ಶಾರದೆವಾದಕೆಳೆದಳು ಮುನಿಯ ಶಂಕರನ ||
ಪೆಣ್ಣಿನಕತದಿಂದೆ ರಾಮಾನುಜನು ಯತಿವರನಾದುದದರಿಂ |
ಪೆಣ್ಣು ಜಗದೊಳು ಮಾಡಲಾಗದ ಕಾರ್ಯ ತಾನಿಲ್ಲಾ || ೮ ||

ನುಣ್ಣವೆನಿಪಾ ಕ್ರೈಸ್ತಧರ್ಮವ ಜಗದಿ ಹರಡಿದಯೇ ಶುಪ್ರಭುತಾ |
ಪೆಣ್ಣು ಮೇರಿಯ ದಯದಿಮೆರೆದನು ಸರ್ವದಿಶೆಯಲ್ಲಿ ||
ಪೆಣ್ಣಿನ ಮೋಹಕ್ಕೆ ಹೇಸುತೆ ತ್ಯಜಿಸಿ ಸಂಸಾರವನು ಗೌತುಮ |
ಘನ್ನಮುನಿವರ ಬುದ್ಧನೆನಿಸುತೆ ಮೆರೆದ ವಿಶ್ವದೊಳೂ || ೯ ||

ಪೆಣ್ಣುಮಣಿ ರೇಝಿಯಳು ತನ್ನಯ ಬುದ್ಧಿಕೌಶಲದಿಂದಲಾಳ್ದಳು |
ಪೆಣ್ಣುರಾಣಿಯ ನೂರಜಹನಳ ಸಮರು ಯಾರಿಲ್ಲಾ |
ಪೆಣ್ಣು ಮಣಿಮಾಲೆಯಲಿ ಪೊಳೆವರು ಚನ್ನೆಚನ್ನಮ್ಮಾದಿ ಸತಿಯರು |
ಪೆಣ್ಣು ಪ್ರಾಂತವನಾಳಿ ಪೋದಳು ಸರೋಜಳೆಂಬವಳೂ || ೧೦ ||

ಘನ್ನ ಕೀರ್ತಿಯ ಪಡೆದಹಲ್ಯಯ ದ್ರು‍ಪದಪುತ್ರಿಯಸೀತೆ ತಾರೆಯ |
ಚನ್ನೆಮಂದೊದರಿಯ ಸ್ಮರಣೆಯಮಾಡೆ ಪಾಪಗಳೂ ||
ಇನ್ನುನಾಶವ ಪಡೆದು ಮನುಜನು ಸನ್ನ ಸದ್ಗತಿಪಡೆದುತಾ ನತಿ |
ಘನ್ನಸಂತಸದಿಂದೆ ಮೆರೆವನು ನಿಯತಸಗ್ಗದೊಳೂ || ೧೧ ||

ಪೆಣ್ಣು ವಿರಹಿತ ಮನೆಯು ಪಾಳ್ಗುಡಿ ಪೆಣ್ಣು ಇರ್ದೊಡೆ ದೇವಮಂದಿರ |
ಪೆಣ್ಣು ಮನೆಯ ಲಕುಮಿಯೆನಿಪಳು ಸದ್ಗತಿಯ ತೋರಕಳೂ ||
ಪೆಣ್ಣು ಮುನಿದೊಡೆ ಮಾರಿಯಾಗ್ವಳು ಪೆಣ್ಣು ವೊಲಿದೊಡೆ ಶ್ರೇಯ ತರುವಳು||
ಪೆಣ್ಣು ಸರುವರ ಹೆಮ್ಮೆ ಕುಲದೇವತೆಯು ಯೆನಿಸಿಹಳೂ || ೧೨ ||

ಪೆಣ್ಣು ಸನ್ಮಾರ್ಗದೊಳೆ ಇರ್ದೊಡೆ ತನ್ನ ಕುಲಕೋಟಿಯನು ಮೆರೆವಳು |
ಪೆಣ್ಣು ವಾಮದ ಮಾರ್ಗ ಪಿಡಿದೊಡೆ ಹಾಳುಗೆಡಹುವಳೂ ||
ಪೆಣ್ಣಿಗೆ ಪತಿದೇವನೆನಿಪನು ಪೆಣ್ಣು ಗಂಡನ ಮಂತ್ರಿಯೆನಿಪಳು |
ಪೆಣ್ಣ ಬೀಳ್ದೊಡೆ ನಿಯತನನರಕವು ನರಗೆ ಶಾಶ್ವತವೂ || ೧೩ ||
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...