Home / ಕವನ / ಕವಿತೆ / ಬಾಳು

ಬಾಳು

ಆಸರಕಿ ಅಳದಿಟ್ಟು, ಬ್ಯಾಸರಕಿ ಬಳದಿಟ್ಟು
ಚಿಂತಿ ಕಾಲಾಗ ತುಳದಿಟ್ಟು | ಈ ದೇಹ
ಶೀಲ ಮಾಡಿಟ್ಟ ಜನದಾಗ ||

ಕನ್ನೇಯ ಬಡಿಬ್ಯಾಡ, ಕೈಬಳಿ ಒಡೆದಾವು
ಸಣ್ಣಂಚಿನ್ವಾಲೆ ಮುರಿದಾವು | ನನ ಮಗನ
ನನ್ನಾಣಿ ಮಡದಿ ಬಡಿಬ್ಯಾಡ ||

ಛೀ! ಏಳ ಛೀಮಾರಿ, ನಾಚಿಕಿಲ್ಲದ ನಾರಿ
ಗಂಡನ್ನ ಬೈವ ಗೈಯಾಳಿ | ಗಂಡಽಗ
ಆಂವ ಇಂವನೆಂದು ಕರದಾಳ ||

ನನ್ನ ಬೈದರು ಬೈಯ್ಯೊ, ಬೆನ್ನ ಬೈಯಲಿಬ್ಯಾಡ
ಬೆನ್ಹಿಂದ ಬೆಂಕಿ ಒಯ್ಬ್ಯಾಡ | ನನಗೊಬ್ಬ
ತಮ್ಮ ಇರವೂನ ಅರ್ಜೂನ ||

ಅಣ್ಣತಮ್ಮರ ಜಗಳ, ನಿನ್ನೆ ಮೊನ್ನ್ಯಾಗ್ಯಾವ
ಬಣ್ಣ ಬಾಗೀಲ ಎರಡಾಗಿ | ಕಡೆಮಗನ
ಸಣ್ಣವನಾಗಿ ಸರಕೋರೊ ||

ಊರ ಮ್ಯಾಗಲ ಊರ, ದಾರಿಮ್ಯಾಗಲ ಮನೆಯ
ಬಾರದ್ಯಾಕ್ಹೋದ ನನ್ನಣ್ಣ | ನಿನ ಮಡದಿ
ಬ್ಯಾಡಂದಳೇನೊ ನನ ಮನೆಗೆ ||

ಸೆಗಣ್ಣಿ ಮಾತೇನ, ಸೆಗಣಿಯ ದಂಟೇನ
ಗಾಳೀಗೆ ಬಂದ ರವದೀಯ | ಮಾತೀಗೆ
ಮಾರಾಯ ಮನಸ ತೆಗೆದಾರ ||

ಹೊಂದಿಕಿಲ್ಲದ ಮಾತು, ಹೊಂದಿಸ್ಯಾಡಲಿಬ್ಯಾಡ
ಬಂಧಾನ ನಾನು ಬಡಲಾರೆ | ಕಣ್ಣೀರು
ಮುಂದಿರಲಿ ಅವರ ಶಿಸುವೀಗೆ ||

ಅಣ್ಣನ ಮಗಳಂತ, ಹಮ್ಮೀಲಿ ನಾ ತಂದೆ
ಉಣ್ಣಾಳ ಮುಸಕ ತಗಿಯಾಳ | ಅಣ್ಣಯ್ಯ
ಮನ್ನೂಣಿ ಹೇಳ ಮಗಳೀಗೆ ||

ಮನ್ನೂಣಿ ಹೇಳಾಕ, ಹೊನ್ನೆಷ್ಟು ಅಳದೆವ್ವ
ಪುಣ್ಣೇಕ ದಾರಿ ಎರದೀನೆ | ತಂಗೆವ್ವ
ಸೊನ್ನಿಲೆ ಮಗ್ಗ ಇರಹೇಳ ||

ಊರಮ್ಯಾಗ್ಹಾಸಿ, ಬೀಸುವ ಬಿರುಗಾಳಿ
ತೀರಾವ ದುಃಖ ತೋಡುದಕ | ಹಡದವ್ಗ
ಮಾರಿನೋಡಾಕ ಬರಹೇಳ ||

ಹೆಂತಾದು ಮಾಡಿದರು, ಸಿಂತರಿಸಿ ಬಿಡವೂರ
ಹೆಂತಾದ ನನ್ನ ಕೈಗೂಣ | ಶಿವಲಿಂಗ
ಬೆಂಕಿಯಂತವರು ಅರುವಿರಲಿ ||

ಅಲ್ಲದವರ ತಡವಿ, ಜಲ್ಲೆಂದ ನನ ಮನವ
ಕಲ್ಲಾಗ ಕಡ್ಲಿ ಒಡಿದ್ಹಾಂಗ | ನೆಗ್ಗೂಲ
ಮುಳ್ಳಾಗ ಹಾದಿ ತಗೆದ್ಹಾಂಗ ||

ಒಡಹುಟ್ಟಿದವರಿಗೆ, ಒಡಜಾಲಿ ಮುಳ್ಳಾದ
ಹಡದವ್ವಗೀದ ಹುಲಿಯಾದ | ನನ ತಮ್ಮ
ಮಡದಿಗೆ ಮಾಣಿಕ ಹರಳಾದ ||

ಹಡದವ್ವ ನೀ ನನ್ನ, ಹಡದೇನು ಸುಡಬೇಕ
ನಡುಬಟ್ಟಿಲೊಬ್ಬ ಇದಿರಂಡಿ | ಸೆಟಿಗವ್ವ
ಮನಬಲ್ಲ ಬರಿಯ ಬರಿದಾಳ ||

ಆಸೊತ್ರ ನನ ಮನೆಯು, ಬೇಸೊತ್ರ ನನ ಮನೆಯು
ಕೂಸು ಕಾಡಿದರು ನನ ಮನೆಯು | ತವರೂರು
ಏಸು ದಿನ ಇದ್ರ ನೆರೆಮನೆಯು ||

ಬೀಸುವ ಕಲ್ಲಿಗೆ, ಬಿಡಿಮುತು, ರ್ಯಾವಳ
ಬೇಸ್ಯಾಗಿ ಹೊಯ್ಯೊ ಹೊಳೆಗಾರ | ನನ ಮನೆಗೆ
ಬೀಸ ಬರತಾರೊ ಗೆಳತೇರು ||

ಹಾಡ್ಯಾಡಿ ಬೀಸೀನಿ, ಹವಳ ಬಣ್ಣದ ಗೋದಿ
ಬೀಸಾಕ ಹಿಡದೀನಿ ಬಿಳಿಜೋಳ | ಅಣ್ಣಯ್ಯ
ಚ್ಯಾಜಕ ಹಿಡದೀನಿ ನಿನ ಮಗಳ ||

ಏಸನೀ ಬೀಸಿದರ, ಸಾಕಬೇಕೆನ್ನಳ
ಸಾಕ್ಷೇದ ತಾಯಿ ಸಿರಿಗೌರಿ | ಬೀಸೀದ್ಹಿಟ್ಟು
ಸಾಕುಸಾಕಾಗಿ ಬಳಗಕ ||

ಕಲ್ಲ ಕೊಟ್ಟವ್ವಗ, ಎಲ್ಲ ಬಾಗೇವಿರಲಿ
ಮಲ್ಲಿಗಿ ಮುಡಿವ ಮಗನಿರಲಿ | ಹೇಮ್ರಡ್ಡಿ
ಮಲ್ಲವ್ವನಂಥ ಸೊಸಿ ಇರಲಿ ||

ಆದಾವ ನಮಜೋಳ, ತೀರಾಽವ ನಮ ಹಾಡ
ಸಾಕ ಗೌರವ್ವ ಕೈಬೀಡ | ನನ ಮನಿಯ
ಗ್ಯಾನದತ್ತೆವ್ವ ಬೈದಾಳ ||

ಬೀಸೂವ ಕಲ್ಲಿಗೆ, ತೋಳಾಡಿ ತೊಡಿಯಾಡಿ
ನಾಗರ್ಹೆಡಿಯಂತ ನಡವಾಡಿ | ಗೌರವ್ವ
ನಿನ್ನಗೂಡಾಡಿ ದಣಿಯಾವ ||

ಆಗೂವ ಮುಕ್ಕಿಗೆ, ನಾಯಾರ ನೆನೆಯಾಲೆ
ರಾಜೇವ ಸಲುವ ಬಸವಣನ | ಹೇಣೂತಿ
ನೀಲವನ ಹಾಡಿ ನಿಲಸೇನ ||
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...