Home / ಕವನ / ಕವಿತೆ / ಬಸವಣ್ಣ

ಬಸವಣ್ಣ

ಬಾಗೇವಾಡಿ ಬಸವ, ಬಹಳ ದೊಡ್ಡವನೆಂದು
ಬೆಳ್ಳಿಯ ಮಗಡ ಮಾಡ್ಸೆನೊ | ಬಸವಣ್ಣ
ಹೊನ್ನ ಹಣಿಕಟ್ಟ ಬಿಗಿಸೇನೊ ೧

ಚೆಂದುಳ್ಳ ಪಟ್ಟದಕಲ್ಲು, ಇಂಬುಳ್ಳ ಗುಡಿಯಾಗ
ಮಂದಾನ ಬಸವ ಮಲಗ್ಯಾನ | ಗುಡಿ ಮುಂದ
ಕಂದನ ಬೇಡವರು ಕಡೆಯಿಲ್ಲ ೨

ಕುಂಟೋಜಿ ಬಸವಣ್ಣ, ಬಂಟಾಗಿ ಕಾದಾಡಿ
ಕುಂಟಾದ ಕಾಲ ಮುರಕೊಂಡು | ಪರಿಸ್ಯಾಗ
ಮಂಟಪದ ಮುಂದ ಮಲಗ್ಯಾನ ೩

ಕೋಲೆನ್ನಿರೆ ಸೀಗೀಗೆ, ಕೋಲೆನ್ನಿರಿ ಗೌರೀಗೆ
ಕೋಲುಕಲ್ಯಾಣ ಬಸವಾಗ | ಬಲಗೊಂಡ್ರ
ಬಾರದ ಹಾಡು ಬರತಾವ ೪

ಭೂಮಿ ಹುಟ್ಟಿದ ಮೊದಲು, ಭೂಮಿ ಕಟ್ಟದ ಮೊದಲು
ಭೂಪ ಹುಟ್ಟೀದ ಬಸವಯ್ಯ| ಮ್ಯಾಲೀನ
ಶಿವಗೇಳು ದಿನಕ ಹಿರಿಯಾನ ೫

ಕಟ್ಟಿಕಟ್ಟದ ಮೊದಲು, ಕಲ್ಯಾಣ್ಹುಟ್ಟದ ಮೊದಲು
ಬಲ್ಲಿದ್ಹುಟ್ಯಾನ ಬಸವಯ್ಯ | ಮ್ಯಾಲೀನ
ಶಿವಗೇಳು ದಿನಕ ಹಿರಿಯಾನ ೬

ಹಾದಿಮಣ್ಣನು ತಂದು, ಗೀರ ಬಸವನ ಮಾಡಿ
ಹೋರೆನ್ನಬಹುದೆ ಬಸವಯ್ಯ, ನಿಂಪಾದ್ಕ
ನಾಣೇವನುಟ್ಟು ಶರಣಂದೆ ೭

ಕಟ್ಟಿ ಮಣ್ಣನು ತಂದು, ಕೆತ್ತಿ ಬಸವನ ಮಾಡಿ
ಎತ್ತೆನ್ನಬಹುದೆ ಬಸವಯ್ಯ | ನಿ೦ಪಾದ್ಕ
ಪಟ್ಟೊಳ್ಳಿ ಇಟ್ಟು ಶರಣಂದೆ ೮

ಆಗಾಸದಡಿವ್ಯಾಗ, ಧೂಪದ ಹೊಗೆಯೆದ್ದು
ಭೂಪ ಬಸವಯ್ನ ಶಿವಪೂಜೆ, ಆಗುವಾಗ
ಆಗಾಸ ಘಂಟೆ ಢಣಲೆಂದು ೯

ತುಂಬೀದ ಹೊಳಿಯಾಗ, ಕೊಂಬ ಕಾಣಿಸತಾವ
ಬಂಗಾರದಿನಿಯ ಬಸವಣ್ಣ | ಬರುವಾಗ
ತುಂಬೀದ ಗಂಗೆ ತುಳಿಕ್ಯಾಳ ೧೦

ಏರಬಾರದ ಗುಡ್ಡ, ಹ್ಯಾಂಗೇರಿದಿ ಬಸವಣ್ಣ
ಬೋರಂಗಿ ಪಕ್ಕ ಸರಜಂಗು | ಕಟಿಗೊಂಡು
ಏರಿ ಮೇದಾನೊ ಎಳೆ ಹುಲ್ಲೊ ೧೧

ಕಂಡಿರೆ ನಂಬಸವನ, ಪುಂಡತನ ಗೋಳೆಲ್ಲ
ಹೆಂಡಿಽಯ ಒಡೆದು ಬರತಾನ || ಬಸವಯ್ನ
ಕೋಡಿನ ಮ್ಯಾಲೆ ಕೈಲಾಸ ೧೨

ನೋಡಿರಿ ನಂಬಸವನ, ಕೀಡೋಳಿ ತನವಾನ
ಗೋಡಿಽಯ ಒಡೆದು ಬರತಾನ | ಬಸವಯ್ನ
ಇನಿಯ ಮ್ಯಾಲೈತಿ ಕೈಲಾಸ ೧೩

ಎರಗಿ ನೋಡುನು ಬಾರ, ಹಿರಿಯಗಸಿ ಬನವಾನ
ಸರಗೋಳ ಗಂಟಿ ಹುರಗೆಜ್ಜಿ| ನಂಬಸವ
ಚೆಲುವಾನ ನೋಡ ಮರತೇಕ ೧೪

ಹೊಕ್ಕು ನೋಡುನು ಬಾರ, ಚಿಕ್ಕಗಸಿ ಬಸವಾನ
ಒಕ್ಕಳ ಗಂಟೆ ಹುರಗೆಜ್ಜೆ | ನಂಬಸವ
ಸುತ್ತ ಮರತೇಕ ಬಲು ಚೆಲುವ ೧೫

ಎತ್ತ ಕಾಯುವಣ್ಣ, ನಮ್ಮೆತ್ತ ಕಂಡೇನೊ
ಮುತ್ತಿನ ಹಗ್ಗ ಮುಗುವಾಣ | ಹಾಕ್ಕೊಂಡು
ಹುತ್ತೀನ ಕೆಳಗ ಮಲಗ್ಯಾನೋ ೧೬

ಕಟ್ಟೀಯ ಹೊಲಗಳ, ಮೆಟ್ಟದಿರು ಬಸವಣ್ಣ
ಮಕ್ಕಳ೦ದಿಗರ ಬಡಬಗರ | ಹೊಲಗಽಳ
ಮೆಟ್ಟದಿರು ಚೆನ್ನ -ಬಸವಣ್ಣ ೧೭

ಕರಿಯ ಕೋಡಿನ ಬಸವ, ಕೆರೆಯಾಗ ಹ್ಯಾಂಗಿದ್ದೊ
ಕೆರಿ ಬತ್ತಿ ಕೆರಿಯ ಮಳಲೊತ್ತಿ | ಬಸವಾನ
ಕರದ ಬಾಡ್ಯಾವ ಬಿಸಲೀಗೆ ೧೮

ಕೆಂಪ ಕೋಡಿನ ಬಸವ, ತಂಪಿನಾಗ್ಹ್ಯಾಂಗಿದ್ಯೊ
ತಂಪೊತ್ತಿ ತಂವ ಮಳಲೊತ್ತಿ, ಬಸವಾನ
ಕೆಂಪು ಬಾಡ್ಯಾವ ಬಿಸಲೀಗೆ ೧೯

ಕೌಜಗನ ತತ್ತ್ಯಾಗ, ಹ್ಯಾಂಗಿದ್ದಿ ಬಸವಯ್ಯ
ಎಂದೆಂದಿಗಿ ಮಾಗಿ ಮಳೆಗಾಲ | ಮಂಜಿನಾಗ
ಹ್ಯಾಂಗಿದ್ದಿರಿ ಚೆನ್ನಬಸವಯ್ಯ ೨೦

ಹರಿವೂವ ಹಳದಾಗ, ಡುರಿಕೆಂತ ಬರವೂರ
ಚಿಟಿಗೊಳಗ ಬಾಲ ಮುಳಗದಲೆ | ಬರುವಂಥ
ಬಂಟ ಚೆಂಚಲಿ ಬಸವಯ್ಯ ೨೧

ತುಂಬೀದ ಹೊಳಿಯಾಗ, ಅಂಬಾಂತ ಬರವೂರ
ಹಿಂದೀನ ಬಾಲ ಮುಣಗದಲೆ | ಬರುವಂಥ
ಧೀರ ದೇಗಲೊಳ್ಳಿ ಬಸವಯ್ಯ ೨೨

ಕಡಲಿಕಾಳನು ತಿಂದ ಮಡುವಿನ ನೀರ ಕುಡಿದ
ಕಡೆಯ ಬಾಗಿಲಕ ಡರಕೀಯ | ಹೊಡಿವಂಥ
ವೀರ ಕಾದ್ರೊಳ್ಳಿ ಬಸವಯ್ಯ ೨೩

ಉದ್ದಿನ ಕಾಳ ತಿಂದು, ತೆಗ್ಗಿನ ನೀರ ಕುಡಿದು
ಹೆಬ್ಬಾಗಿಲದಾಗ ಡರಕೀಯ | ಹೊಡಿವಂಥ
ಚೆಲುವ ಹುಂಡೇದ ಬಸವಯ್ಯ ೨೪

ಕಡಲಿಕಾಳನಽಟು, ಕಟಿದಾರ ನಂಬಸವನ
ಕಡಲ ನಮ್ಮಲ್ಲಿ ಅವರೂಪ | ಬಸವಯ್ನ
ಕಟಿದಾರ ಕಲ್ಯಾಣ ಮಟದಾಗ ೨೫

ಉದ್ದಿಽನ ಕಾಳಽಟು, ತಿದ್ದ್ಯಾರ ಬಸವಯ್ನ
ಉದ್ದು ನಮ್ಮಲ್ಲಿ ಅಪರೂಪ, ಬಸವಯ್ನ
ತಿದ್ಯಾರುಳುವೀಯ ಗುಡಿಯಾಗ ೨೬
*****

Tagged:

Leave a Reply

Your email address will not be published. Required fields are marked *

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...