Home / ಲೇಖನ / ಹಾಸ್ಯ / ಕನಸು ನನಸಾಯಿತು

ಕನಸು ನನಸಾಯಿತು

ಆಗ ಮಲೆನಾಡಿನ ಕೇಂದ್ರವಾದ ಸಾಗರದಲ್ಲಿ ಬ್ಯಾಂಕ್ ನೌಕರಿಯಲ್ಲಿದ್ದೆ. ಸಾಗರದಲ್ಲಿನ ಜಡಿಮಳೆಯಿಂದ ಬೇಸತ್ತ ನಾನು ಮೈಸೂರಿಗೆ ವರ್‍ಗವಾಗುವ ಬಗ್ಗೆ ಮನದಲ್ಲಿಯೇ ಕಲ್ಪನೆ ಮಾಡಿಕೊಂಡು ಮಂಡಿಗೆ ಮೆಯ್ಯುತ್ತಿದ್ದೆ.

ಅದೊಂದು ದಿನ ಚಿಂತೆ ಮಾಡುತ್ತಲೇ ನಿದ್ದೆ ಆವರಿಸಿತ್ತು. ನನಗೆ ಮೈಸೂರಿಗೆ ವರ್‍ಗವಾಗಿ ರೈಲಿನಲ್ಲಿ ನಾನು ನನ್ನವಳ ಸಂಗಡ ಪ್ರಯಾಣಿಸಿ ಮೈಸೂರು ನಿಲ್ದಾಣದಲ್ಲಿ ಇಳಿದೆ. ನಮ್ಮ ಮಾವನವರು ನಮ್ಮನ್ನು ಸ್ವಾಗತಿಸಲು ಫ್ಲಾಟ್ ಫಾರಂನಲ್ಲಿ ಕಾಯುತ್ತಿರುವುದರ ಬಗ್ಗೆ ಕನಸು ಕಂಡೆ.

ಬೆಳಗ್ಗೆ ಎದ್ದೊಡನೆ ಕನಸಿನ ಬಗ್ಗೆ ನನ್ನವಳಿಗೆ ಹೇಳಿದೆ. “ರ್ರೀ, ನೀವು ಈಗಲೇ ಬೆಂಗಳೂರಿಗೆ ಹೋಗಿ ಹೆಡ್ ಆಫೀಸ್ನಲ್ಲಿ ಮೇಲಧಿಕಾರಿಯನ್ನು ಕಂಡು ಸಾಗರದ ಹವಾ ನನಗೆ ಒಗ್ಗುತ್ತಿಲ್ಲ. ಮೈಸೂರಿಗೆ ವರ್‍ಗಾ ಮಾಡಿ” ಎಂದು ಕೇಳಿಕೊಳ್ಳಿ ಎಂದು ಆಕೆ ಸಲಹೆ ನೀಡಿದಳು.

ಅವಳು ಹೇಳಿದ್ದು ಸರಿ ಎಂದೆನಿಸಿ ಕೂಡಲೇ ಬೆಂಗಳೂರಿಗೆ ಹೊರಟೆ. ಮೇಲಧಿಕಾರಿಗಳಲ್ಲಿ ವಿನಂತಿಸಿದೆ.

“ಏನು? ನಿಮಗೆ ಮೈಸೂರೇ ಆಗ ಬೇಕೋ? ನಿಮಗಿಂತ ಸೀನಿಯರ್ ಎಷ್ಟೋ ಜನ ವರ್‍ಗ ಬೇಕೆಂದು ಹಾರಾಡುತ್ತಿದ್ದಾರೆ. ಅದೆಲ್ಲ ಆಗೋದಿಲ್ಲ ಬೇಕಾದರೆ ಹತ್ತಿರದ ಯಾವುದಾದರೂ ಹಳ್ಳಿಗೆ ಹಾಕೋಣ” ಎಂದು ಆಧಿಕಾರಿ ಗುಡುಗಿದರು.

ಕನಸು ನನಸಾಗಿದ್ದರೆ, ಎಷ್ಟು ಚಿನ್ನಾಗಿರುತ್ತಿತ್ತು. ಬಂದ ದಾರಿಗೆ ಸುಂಕವಿಲ್ಲವಾಯಿತಲ್ಲ ಎಂದುಕೊಂಡು ಸಾಗರಕ್ಕೆ ಮರಳಿದೆ. ಒಂದು ವಾರ ಕಳದಿರ‍ಬಹುದು. ಬೆಳಿಗ್ಗ ಬ್ಯಾಂಕಿಗೆ ಹೋದಾಗ ಅಚ್ಚರಿಯೊಂದು ಕಾದಿತ್ತು. ಮ್ಯಾನೇಜರ್ ನನ್ನನ್ನು ಕರೆದು “ಎಲ್ಲರಿಗೂ ಸ್ವೀಟ್ ತರಿಸಿ” ಎಂದರು. ನನಗೆ ತಳಬುಡ ಏನೂ ತಿಳಿಯಲಿಲ್ಲ.

“ನೋಡಿ ನಿಮ್ಮ ವರ್‍ಗದ ಆರ್‍ಡರ್” ಎನ್ನುತ್ತಾ ನನ್ನ ಕೈಯಲ್ಲಿತ್ತರು. ನನಗೆ ಮೈಸೂರು ಹತ್ತಿರದ ಹಳ್ಳಿ ಯಾವುದಾದರೂ ಇರಬಹುದು ಎಂಬ ಆತಂಕ ಅದರೆ ದೈವವಶಾತ್ ಮೈಸೂರಿಗೇ ವರ್‍ಗವಾಗಿತ್ತು! ಮನಸ್ಸಿನಲ್ಲಿ ಮೇಲ್ನೋಟಕ್ಕೆ ತೀಕ್ಷ್ಣವಾಗಿ ಅಂತರಂಗದಲ್ಲಿ ಮೃದುವಾಗಿಯೂ ಇದ್ದ ಅಧಿಕಾರಿಯನ್ನು ಮನಸಾರೆ ವಂದಿಸಿದೆ.
*****

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...