Home / ಲೇಖನ / ಹಾಸ್ಯ / ಕನಸು ನನಸಾಯಿತು

ಕನಸು ನನಸಾಯಿತು

ಆಗ ಮಲೆನಾಡಿನ ಕೇಂದ್ರವಾದ ಸಾಗರದಲ್ಲಿ ಬ್ಯಾಂಕ್ ನೌಕರಿಯಲ್ಲಿದ್ದೆ. ಸಾಗರದಲ್ಲಿನ ಜಡಿಮಳೆಯಿಂದ ಬೇಸತ್ತ ನಾನು ಮೈಸೂರಿಗೆ ವರ್‍ಗವಾಗುವ ಬಗ್ಗೆ ಮನದಲ್ಲಿಯೇ ಕಲ್ಪನೆ ಮಾಡಿಕೊಂಡು ಮಂಡಿಗೆ ಮೆಯ್ಯುತ್ತಿದ್ದೆ.

ಅದೊಂದು ದಿನ ಚಿಂತೆ ಮಾಡುತ್ತಲೇ ನಿದ್ದೆ ಆವರಿಸಿತ್ತು. ನನಗೆ ಮೈಸೂರಿಗೆ ವರ್‍ಗವಾಗಿ ರೈಲಿನಲ್ಲಿ ನಾನು ನನ್ನವಳ ಸಂಗಡ ಪ್ರಯಾಣಿಸಿ ಮೈಸೂರು ನಿಲ್ದಾಣದಲ್ಲಿ ಇಳಿದೆ. ನಮ್ಮ ಮಾವನವರು ನಮ್ಮನ್ನು ಸ್ವಾಗತಿಸಲು ಫ್ಲಾಟ್ ಫಾರಂನಲ್ಲಿ ಕಾಯುತ್ತಿರುವುದರ ಬಗ್ಗೆ ಕನಸು ಕಂಡೆ.

ಬೆಳಗ್ಗೆ ಎದ್ದೊಡನೆ ಕನಸಿನ ಬಗ್ಗೆ ನನ್ನವಳಿಗೆ ಹೇಳಿದೆ. “ರ್ರೀ, ನೀವು ಈಗಲೇ ಬೆಂಗಳೂರಿಗೆ ಹೋಗಿ ಹೆಡ್ ಆಫೀಸ್ನಲ್ಲಿ ಮೇಲಧಿಕಾರಿಯನ್ನು ಕಂಡು ಸಾಗರದ ಹವಾ ನನಗೆ ಒಗ್ಗುತ್ತಿಲ್ಲ. ಮೈಸೂರಿಗೆ ವರ್‍ಗಾ ಮಾಡಿ” ಎಂದು ಕೇಳಿಕೊಳ್ಳಿ ಎಂದು ಆಕೆ ಸಲಹೆ ನೀಡಿದಳು.

ಅವಳು ಹೇಳಿದ್ದು ಸರಿ ಎಂದೆನಿಸಿ ಕೂಡಲೇ ಬೆಂಗಳೂರಿಗೆ ಹೊರಟೆ. ಮೇಲಧಿಕಾರಿಗಳಲ್ಲಿ ವಿನಂತಿಸಿದೆ.

“ಏನು? ನಿಮಗೆ ಮೈಸೂರೇ ಆಗ ಬೇಕೋ? ನಿಮಗಿಂತ ಸೀನಿಯರ್ ಎಷ್ಟೋ ಜನ ವರ್‍ಗ ಬೇಕೆಂದು ಹಾರಾಡುತ್ತಿದ್ದಾರೆ. ಅದೆಲ್ಲ ಆಗೋದಿಲ್ಲ ಬೇಕಾದರೆ ಹತ್ತಿರದ ಯಾವುದಾದರೂ ಹಳ್ಳಿಗೆ ಹಾಕೋಣ” ಎಂದು ಆಧಿಕಾರಿ ಗುಡುಗಿದರು.

ಕನಸು ನನಸಾಗಿದ್ದರೆ, ಎಷ್ಟು ಚಿನ್ನಾಗಿರುತ್ತಿತ್ತು. ಬಂದ ದಾರಿಗೆ ಸುಂಕವಿಲ್ಲವಾಯಿತಲ್ಲ ಎಂದುಕೊಂಡು ಸಾಗರಕ್ಕೆ ಮರಳಿದೆ. ಒಂದು ವಾರ ಕಳದಿರ‍ಬಹುದು. ಬೆಳಿಗ್ಗ ಬ್ಯಾಂಕಿಗೆ ಹೋದಾಗ ಅಚ್ಚರಿಯೊಂದು ಕಾದಿತ್ತು. ಮ್ಯಾನೇಜರ್ ನನ್ನನ್ನು ಕರೆದು “ಎಲ್ಲರಿಗೂ ಸ್ವೀಟ್ ತರಿಸಿ” ಎಂದರು. ನನಗೆ ತಳಬುಡ ಏನೂ ತಿಳಿಯಲಿಲ್ಲ.

“ನೋಡಿ ನಿಮ್ಮ ವರ್‍ಗದ ಆರ್‍ಡರ್” ಎನ್ನುತ್ತಾ ನನ್ನ ಕೈಯಲ್ಲಿತ್ತರು. ನನಗೆ ಮೈಸೂರು ಹತ್ತಿರದ ಹಳ್ಳಿ ಯಾವುದಾದರೂ ಇರಬಹುದು ಎಂಬ ಆತಂಕ ಅದರೆ ದೈವವಶಾತ್ ಮೈಸೂರಿಗೇ ವರ್‍ಗವಾಗಿತ್ತು! ಮನಸ್ಸಿನಲ್ಲಿ ಮೇಲ್ನೋಟಕ್ಕೆ ತೀಕ್ಷ್ಣವಾಗಿ ಅಂತರಂಗದಲ್ಲಿ ಮೃದುವಾಗಿಯೂ ಇದ್ದ ಅಧಿಕಾರಿಯನ್ನು ಮನಸಾರೆ ವಂದಿಸಿದೆ.
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...