Home / ಕವನ / ಕವಿತೆ / ಸ್ವಪ್ನಹರಿಣ!

ಸ್ವಪ್ನಹರಿಣ!

ಸ್ವಪ್ನಹರಿಣ ಚಪಲ ಚರಣ
ಕಂಗಳಲ್ಲಿ ಇಳಿಯೆ ಹರಣ
ಓಡುತಿಹುದು ವಿಧಿಗೆ ಭೀತ
ಎದೆಯ ಕಾಡೊಳು!

ಜೀವನ ನಿರ್ದಯ ನಿಷಾದ
ದುರ್ದೈವದ ಧನು ಸಜ್ಜಿತ
ಚಿಂತೆಯ ನಂಜಲಗ ತಿವಿದು
ಬೆನ್ನ ಹತ್ತಿದ!

ಭೀತಿಯಿಂದ ತನುಕಂಪಿತ
ನಯನಂಗಳು ಅಶ್ರುಭರಿತ
ಬಂದಿತೆಂದಿತದೊ ಸಮೀಪ
ಕೊನೆಯಗಳಿಗೆಯು

ಕರುಣಾಶ್ರಯವಿಲ್ಲದಾಯ್ತು
ನಿಷ್ಕರುಣಿಯ ಜಗವಾಯಿತು
ಕೆನ್ನೀರಿನ ಮಡುವಾಯಿತು
ಮೃದುಲ ದೇಹವು!

ಕಂಗಳ ಬಟ್ಟಲುಗಳಲ್ಲಿ
ಜಗದಾಸೆಯ ಮದಿರೆಯಲ್ಲಿ
ತುಂಬಿದರೂ ತುಳುಕಿ ತಿಂದು
ದುಃಖಸಾಗರ!

ಪ್ರಕೃತಿಯೆಲ್ಲ ಪ್ರತಿಬಿಂಬಿತ
ನಯನಂಗಳಲತಿ ರಂಜಿತ
ಅದನೊರಸುತ ತೇಲಿ ಬಂತು
ದುಗುಡ ಬೆಂತರ!

ಓಡಿದತ್ತ ಬೆಂಬತ್ತಿದೆ
ನೋಡಿದತ್ತ ನೆಗೆದೆದ್ದಿದೆ
ಮೂರ್ತಿಮಂತ ಮರಣದಂತೆ
ಬಾಳ ರಕ್ಕಸ!

ಸ್ವಪ್ನಹರಿಣ, ನಿಲ್ಲರೆ ಚಣ,
ದಿನ ಸತ್ತಿತು ಇದೆ ಈ ಕ್ಷಣ
ಬಿಸಿಲು ಬಾಣ ತಾಗೆ, ಬಾನ್ಗೆ-
ರಕ್ತ ಚಿಮ್ಮಿತು!

ಕಲ್ಪನೆಯುತ್ತುಂಗ ಶಿಖರ
ಮನದಾಸೆಯ ಸೌಖ್ಯ ಶಿಬಿರ
ಕೈಯ ಚಾಚಿ ಕರೆಯುತಿಹುದು
ತನ್ನ ಎಡೆಯಲಿ!

ಇರುಳಿನ ತೋಳ್‌ ತೊಟ್ಟಿಲಲ್ಲಿ
ಬೆಳುಂದಿಗಳ ಸೆರಗಿನಲ್ಲಿ
ವಿರಮಿಸಿ ಆ ಕರುಣೆಯಲ್ಲಿ
ಬೆಳೆಸು ಬಲವನು.

ನೀನಿರುತಿರೆ ಇದೆ ಸಂಸ್ಕೃತಿ
ನೀ ಬೆಳೆದರೆ ಅವ ಸಾಹಿತಿ
ಮನ ಮಂದಿರದಲಿ ಮೂರುತಿ
ಚೆಲುವು ನಿನ್ನದು!

ಮುನ್ನಡೆಯಲಿ ನೀ ಪ್ರೇರಣೆ
ಪ್ರತಿ ಯತ್ನಕೆ ನೀ ಚೇತನೆ
ನಿತ್ಯ ನೂತ್ನ ರಮ್ಯವದನೆ
ಕಹಿಯ ಕಳೆಯುವೆ!

ಸಾಯಬಾರದೆಂದು ನೀನು
ಕರಿಯಿರುಳಲಿ ಬೆಳಕು ನೀನು
ಬೆಂದ ಬಾಳ ಹಾಳಿನಲ್ಲಿ
ತಣಿವಿನೂಟೆಯು!

ನಿನ್ನುಳಿಸಲು ಜನ ಕೂಡಿದೆ
ದೇವರನ್ನು ಜಗ ಬೇಡಿದೆ
ಚಿಂತಾಕುಲ ಜೀವಿತದಲಿ
ನಿನಗೆ ಕಾದಿದೆ!

ಕ್ಷುಬ್ಬವಿದ್ಧ ಮಾನವ ಕುಲ
ಅದರ ದುಃಖವಾಯಿತಚಲ
ಅದಕ ಯತ್ನವೆಲ್ಲ ವಿಫಲ
ವಿರಸ ಬಾಳುವೆ!

ಪಾಪದ ಕೋಳ್‌ ಗೋಣ್‌ ಬಿಗಿಯಲು
ಶಾಪದ ಕೈ ಅಲುಗಿರಿಯಲು
ನಿನ್ನೊಡಲಿನ ಕಸ್ತೂರಿಯು
ಪ್ರಾಣದಾನ ಮಾಡಲಿ!

ನಮ್ಮೊಡಲಿನ ಚಿಂತೆಯನ್ನು
ನೀಗದಿರುವ ಶಂಕೆಯನ್ನು
ಸ್ವಪ್ನ ಸಜಲ ನಯನ ನೀರ
ತಣಿವ ತೋರಲಿ!

ಚೆಲುವದೋರು ಒಲವನೀಡು
ಕೆಡುಕಳಿಯುವ ಹಾಗೆ ಮಾಡು
ಚಿರಮಂಗಲ ಸುರಸುಂದರ
ಬಾಳ ಕೊನರಿಸು.
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...