Home / ಲೇಖನ / ಇತರೆ / ರ್‍ಯೂಹೈ ಕತೆ

ರ್‍ಯೂಹೈ ಕತೆ

ರ್‍ಯೂಹೈ ಎಂದರೆ… ಚೀನಾ ಭಾಷೆ, ವಿಷಕಾರಿ, ರಾಸಾಯನಿಕ ಹಾಗೂ ಸ್ಫೋಟಕ ಸಾಮಾಗ್ರಿಗಳ ಬೃಹತ್ ಸಂಗ್ರಹವಿದ್ದ ಗೋದಾಮು ಎಂದು ಅರ್ಥ.

ದಿನಾಂಕ ೧೨-೦೮-೧೫ ರ ರಾತ್ರಿ ೧೧.೨೦ ಸುಮಾರಿಗೆ ಈ ರ್‍ಯುಹೈನಲ್ಲಿ ಭಾರೀ ಅನರ್ಥ ಸಂಭವಿಸಿದೆ. ಅಲ್ಲಿ ಅವಳಿ ಸ್ಫೋಟ ಸಂಭವಿಸಿದೆ. ಈ ಸ್ಫೋಟದ ತೀವ್ರತೆಗೆ ಗೋದಾಮಿನ ಕಟ್ಟಡ ಛಿದ್ರವಿಚಿದ್ರವಾಗಿದೆ.

ಈ ಸ್ಫೋಟದಿಂದ ಸಿಡಿದ ಬೆಂಕಿಯ ತುಣುಕುಗಳಿಂದ ಸುತ್ತಮುತ್ತಲಿನ ಕಟ್ಟಡ ಹಾಗೂ ಗೋದಾಮುಗಳಿಗೂ ಬೆಂಕಿ ಹತ್ತಿಕೊಂಡಿದೆ.

ಇಲ್ಲಿ ಇನ್ನೊಂದು ದುರಂತವನ್ನು ಹೇಳಲೇಬೇಕು! ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ದಳದ ೨೧ ಮಂದಿ ಬೆಂಕಿಗೆ ಆಹುತಿಯಾಗಿರುವರು.

ಇದು ಉತ್ತರ ಚೀನಾದ ಪ್ರಮುಖ ಬಂದರು ಪಟ್ಟಣ ಟೈನ್‌ಜಿನ್‌ನ ಪ್ರದೇಶವಾಗಿದ್ದು ಈವರೆಗೆ ೫೦ ಮಂದಿ ಮೃತರಾಗಿರುವರು.

ಈ ಸರಣಿ ಸ್ಫೋಟದಲ್ಲಿ ೭೦೦ ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅದರಲ್ಲಿ ೭೧ ಗಾಯಾಳುಗಳ ಸ್ಥಿತಿ-ಗತಿ ತುಂಬಾ ಗಂಭೀರವಾಗಿದೆ.

ಈ ದುರಂತದಲ್ಲಿ ಇನ್ನೊಂದು ದುರಂತವೆಂದರೆ… ಸುಮಾರು ೨೧ ಮಂದಿ ಈಗಾಗಲೇ ನಾಪತ್ತೆಯಾಗಿರುವರು.

ಅಬ್ಬಾ! ಸುರಕ್ಷತೆಯ ತೀವ್ರ ದೃಷ್ಠಿಯಿಂದ ಸ್ಫೋಟದ ಸ್ಥಳದಿಂದ ಸುಮಾರು ೧೦,೦೦೦ ಕ್ಕೂ ಹೆಚ್ಚು ಜನರನ್ನು ತೆರವು ಮಾಡಲಾಗಿದೆಂದು ಅಲ್ಲಿನ ಅಧಿಕಾರಿಗಳು ಈಗಾಗಲೇ ದೃಢಪಡಿಸಿರುವರು.

ಈ ಘಟನಾ ಸ್ಥಳದಲ್ಲಿ ಮತ್ತಷ್ಟು ಜನರು ಅಪಾಯಕ್ಕೆ ಸಿಲುಕಿರುವ ಸಾಧ್ಯತೆಗಳಿವೆಯೆಂದೂ ಇನ್ನೂ ಸಾವು ನೋವಿನ ಸಂಖ್ಯೆ ದುಪ್ಪಟ್ಟಾಗುವ ಎಲ್ಲ ಅವಕಾಶಗಳು ಹೆಚ್ಚಿವೆಯೆಂದೂ ಇದು ಬೃಹತ್ ಚೀನಾದಲ್ಲಿನ ಈವರೆಗಿನ ಬಹು ದೊಡ್ಡ ಕೈಗಾರಿಕಾ ಅವಘಡವಾಗಿಯೆಂದೂ ಚೀನಾದ ರಕ್ಷಣಾ ಕಾರ್ಯಕರ್ತರು ತೀವ್ರ ಶಂಕೆ ವ್ಯಕ್ತಪಡಿಸಿರುವರು!

ಮುದ್ದು ಮಕ್ಕಳೆ. ಈವತ್ತು ನಾವೆಲ್ಲ ಭಾರಿ ಭಾರೀ ಮುಂದುವರೆದಿದ್ದೇವೆಂದು ಭ್ರಮಿಸಿದ್ದೇವೆ. ಅಪಾಯ-ದುರಂತ ಸಂಭವಿಸಿದಾಗ ಅದರಿಂದ ಪಾರಾಗಲು ಇನ್ನು ಸಾಧ್ಯವಾಗುತ್ತಿಲ್ಲವೆಂಬುದನ್ನು ನಮ್ಮ ಜನರು ಅರ್ಥ ಮಾಡಿಕೊಳ್ಳಬೇಕು. ಗರ್ವ ಪಡಲು ಇಲ್ಲಿ ಅಂಥಾ ಸಾಧನೆಯಾಗಿಲ್ಲವೆಂಬುದನ್ನು ಅರಿತು ವಿನಯದಿಂದ ಬಾಳಿದರೆ ಜೀವನ ಸಾರ್ಥಕವಾಗುವುದು ಅಲ್ಲವೇ??
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...