Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶುಕ್ರವಾರ, ಸೆಪ್ಟೆಂಬರ ೨೫, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶುಕ್ರವಾರ, ಸೆಪ್ಟೆಂಬರ ೨೫, ೧೯೪೨

ಪ್ರೀತಿಯ ಕಿಟಿ,

ನಿನ್ನೆ ಸಂಜೆ ಮೇಲ್ಮಹಡಿಗೆ ಹೋಗಿ ವ್ಯಾನ್ಡ್ಯಾನ್‌ರಲ್ಲಿಗೆ ಹೋದೆ. ಆಗಾಗ ಹರಟೆ ಹೊಡೆದು ಬರಲು ಹಾಗೆ ಹೋಗುವುದು ಸಹಜ. ಅಲ್ಲಿ ಕೆಲವೊಮ್ಮೆ ಮಜವಾಗಿರುತ್ತದೆ. ನಾವೆಲ್ಲ ಅಲ್ಲಿ ಮೊತ್ ಬಿಸ್ಕತ್ತುಗಳ [ನ್ಯಾಪ್ತಲೀನ ಗುಳಿಗೆಗಳಿಂದ ತುಂಬಿದ ಬಟ್ಟೆ ಬೀರುವಿನಲ್ಲಿಟ್ಟರಿಂದ ಆ ಗುಳಿಗೆ ವಾಸನೆ ಪಡೆದ ಬಿಸ್ಕತ್ತುಗಳು ] ತಿಂದು, ಲಿಂಬು ಪಾನಕ ಕುಡಿಯುತ್ತೇವೆ. ನಾವು ಪೀಟರ್ ಬಗ್ಗೆ ಚರ್ಚಿಸಿದೆವು. ಪೀಟರ್ ಅದೆಷ್ಟು ಸಲ ನನ್ನ ಕೆನ್ನಗಳಿಗೆ ಹೊಡೆದು ಪೀಡಿಸುತ್ತಾನೆ ಎಂಬುದನ್ನು ನಾನವರಿಗೆ ಹೇಳಿ, ಹಾಗೆ ಹುಡುಗನಿಂದ ದಬಾವಣೆಗೆ ಒಳಗಾಗುವುದನ್ನು ನಾನು ಇಷ್ಟಪಡುವುದಿಲ್ಲವೆಂದೂ ಹೇಳಿದೆ.

ಆದರೆ ಅವರು ಮಾತ್ರ ಹೆತ್ತವರಲ್ಲಿರುವ ವಿಲಕ್ಷಣ ಶೈಲಿಯಲ್ಲಿ, ನಾನು ಪೀಟರ್‌ನನ್ನು ಇಷ್ಟಪಟ್ಟರೆ ಆಗುತ್ತಿರಲಿಲ್ಲವೇ? ಎಂದು ಕೇಳಿದರು. ಯಾಕೆಂದರೆ ಆತ ನನ್ನನ್ನು ಖಂಡಿತವಾಗಿಯೂ ಬಹಳ ಮೆಚ್ಚಿಕೊಂಡಿದ್ದನು. ನಾನು “ಓ ದೇವರೇ!” ಎಂದುಕೊಂಡೆ ಮತ್ತು ಹೇಳಿದೆ “ಓಹೋ! ಅದು ಸಾಧ್ಯವಿಲ್ಲ”

ಪೀಟರ್ ಸ್ವಲ್ಪ ಹೆಚ್ಚೆ ಎಬಡನಾದರೂ ಹೆಣ್ಣು ಮಕ್ಕಳೊಂದಿಗೆ ಹೆಚ್ಚು ಬೆರೆಯದ ಹುಡುಗರಲ್ಲಿ ಇರುವಂತೆ ಆತನಲ್ಲೂ ಇರುವ ಅತೀ ನಾಚಿಕೆಯ ಕಾರಣದಿಂದ ಹಾಗೆ ವರ್ತಿಸುತ್ತಿರಬಹುದೆಂದು ನನಗನ್ನಿಸುತ್ತದೆ ಎಂದು ಹೇಳಿದೆ. ಇನ್ನೊಂದು ಮಾತು ಹೇಳಲೇಬೇಕು. ಅದೆಂದರೆ ಗುಪ್ತಗೃಹದ [ಗಂಡಸರ ವಿಭಾಗ] ನಿರಾಶ್ರಿತರ ಕಮಿಟಿಯಲ್ಲಿ ಬಹಳ ಕುಶಲಿಗಳಿದ್ದಾರೆ. ಅವರೇನು ಮಾಡಿದರೆಂದು ಹೇಳುವೆ. ನಮಗೋಸ್ಕರ ನಮ್ಮ ಕೆಲವು ವಸ್ತುಗಳನ್ನು ಗುಪ್ತವಾಗಿಟ್ಟುಕೊಂಡ ಸ್ನೇಹಿತನೂ ಹಾಗೂ ಟ್ರೇವಿಸ್‌ನ ಚೀಫ್ ರಿಪ್ರೆಸೆಂಟೆಟಿವ್ ಆದ ವ್ಯಾನ್ ಡಿಜ್ಕ್‌ಗೆ ನಮ್ಮ ವಿಷಯಗಳನ್ನು ನಮ್ಮಿಂದಲೇ ತಲುಪಿಸುವಂತೆ ಮಾಡಲು ನಮ್ಮ ಸಂಸ್ಥೆಯೊಂದಿಗೆ ವ್ಯವಹಾರ ನಡೆಸುತ್ತಿದ್ದರು. ಸೌಥ್ ಜೀಲ್ಯಾಂಡಿನ ಕೆಮಿಸ್ಟ್ ಒಬ್ಬನಿಗೆ ಪತ್ರಾಯಿಸಿದರು., ಅದು ಹೇಗಿತ್ತೆಂದರೆ ಅವರು ತನ್ನ ಉತ್ತರದ ಕಾಗದವನ್ನು ವಿಳಾಸವಿರುವ ಲಕೋಟೆಯಲ್ಲಿಟ್ಟು ಕಳಿಸಬೇಕಿತು.. ಡ್ಯಾಡಿ ಆ ಲಕೋಟೆಯನ್ನು ಆಫೀಸಿನ ವಿಳಾಸಕ್ಕೆ ಕಳಿಸಿದರು. ಯಾವಾಗ ಆ ಲಕೋಟೆ ಜೀಲ್ಯಾಂಡಿನಿಂದ ಬರುತ್ತೋ, ಆಗೆಲ್ಲ ಒಳಗಿನ ಪತ್ರವನ್ನು ತೆಗೆದುಕೊಂಡು ಅದರಲ್ಲಿ ನಾವಿನ್ನೂ ಜೀವಂತ ಇರುವದರ ಸಂಕೇತವಾಗಿ ಡ್ಯಾಡಿಯ ಕೈಬರಹದ ಸಂದೇಶವಿಟ್ಟು ಕಳಿಸಲಾಗುತ್ತಿತ್ತು. ಈ ರೀತಿ ವ್ಯಾನ್ ಡಿಜ್ಕ್ ಆ ಉತ್ತರವನ್ನು ಓದಿದರೂ ಯಾರಿಗೂ ಸಂದೇಹ ಬರುತ್ತಿರಲಿಲ್ಲ. ಅವರು ವಿಶೇಷವಾಗಿ ಜೀಲ್ಯಾಂಡನ್ನೆ ಆಯ್ಕೆ ಮಾಡುತ್ತಾರೆ. ಅದು ಬೆಲ್ಜಿಯಂಗೆ ಹತ್ತಿರ, ಮತ್ತು ಸುಲಭವಾಗಿ ಪತ್ರಗಳನ್ನು ಗಡಿಯಾಚೆ ಕಳುಹಿಸಲೂಬಹುದು. ಅದಕ್ಕೂ ಹೆಚ್ಚಾಗಿ ಜೀಲ್ಯಾಂಡಿಗೆ ವಿಶೇಷ ಪರವಾನಿಗೆಯ ಹೊರತಾಗಿ ಯಾರೊಬ್ಬರಿಗೂ ಅನುಮತಿ ಇಲ್ಲ. ಹಾಗಾಗಿ ನಾವಲ್ಲಿ ಇದ್ದೆವೆಂದು ಅವರೆಂದುಕೊಂಡರೆ, ಆತ ಪ್ರಯತ್ನಿಸಲೂ ಆಗುತ್ತಿರಲಿಲ್ಲ ಮತ್ತು ನಮ್ಮ ಅವಲೋಕಿಸಲು ಆಗುತ್ತಿರಲಿಲ್ಲ.

ನಿನ್ನ,
ಆನ್.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...