Home / ಲೇಖನ / ಇತರೆ / ವಿಜ್ಞಾನಕ್ಕೆ ಸವಾಲು

ವಿಜ್ಞಾನಕ್ಕೆ ಸವಾಲು

ಕೊಪ್ಪಳ ಸಮೀಪದಲ್ಲಿ ಭಾಗ್ಯ ನಗರವಿದೆ. ಅಲ್ಲಿ ವಿನಯ ವೀರೇಶ ಸವಡಿ ಎಂಬ ನಾಲ್ಕು ವರ್‍ಷದ ಬಾಲಕನಿದ್ದಾನೆ. ಮನೆಯಲ್ಲಿ ಕನ್ನಡ, ಶಾಲೆಯಲ್ಲಿ ಕನ್ನಡ, ಸ್ನೇಹಿತರೂ ಕನ್ನಡ ಮಾತನಾಡುವರು. ಶಾಲೆಯಲ್ಲಿ ನೆರೆಹೊರೆಯವರೂ ಕನ್ನಡ ಮಾತನಾಡುವರು. ಈ ಬಾಲಕನ ಅಣ್ಣ ವಿಕಾಸ ವೀರೇಶ ಸವಡಿಗೂ ಕನ್ನಡ ಮಾತ್ರ ಬರುವುದು. ತಾಯಿಗೆ ಕನ್ನಡ ಮಾತ್ರ ಗೊತ್ತಿರುವುದು, ತಂದೆ-ವೀರೇಶ ಸವಡಿಗೆ ಅಲ್ಪ ಸ್ವಲ್ಪ ಹಿಂದಿ ಗೊತ್ತು ! ಅಷ್ಟು ಬಿಟ್ಟರೆ ಯಾರಿಗೂ ಹಿಂದಿಯ ಗಂಧ ಗಾಳಿಯೇ ತಿಳಿಯದು ! ಆದರೆ.. ವಿನಯ ವೀರೇಶ ಸವಡಿ ಮಾತ್ರ ಮಾತನಾಡುವುದು ಹಿಂದಿಯಲ್ಲಿ. ಕನ್ನಡವೆಂದರೆ… ಅರ್‍ಥವಾಗದು… ಹೇಗಿದೆ ವಿನಯ ವೀರೇಶ ಸವಡಿಯ ಪೂರ್ವಜನ್ಮದ ಸುಕೃತ ಫಲ…??

ಯಾವುದೇ ಮಗು ಹುಟ್ಟಿದ ವರ್ಷದೊಳಗೆ ಮಾತನಾಡಲು ಶುರು ಮಾಡುತ್ತದೆ. ಆದರೆ.. ವಿನಯ ವೀರೇಶ ಸವಡಿ ಸುಮಾರು ಎರಡೂವರೆ ವರ್ಷ ಕಳೆದರೂ ಬರೀ ತೊದಲು ಮಾತನ್ನು ಕೂಡಾ ಆಡಿಲ್ಲ. ಇದು ಮನೆಯವರಿಗೆಲ್ಲ ಭಾರೀ ತಲೆನೋವು ತಂದಿತ್ತು. ಬರುಬರುತ್ತಾ ಮೂರನೆಯ ವರ್ಷಕ್ಕೆ ತೊದಲು ನುಡಿ ಮೊದಲ ನುಡಿ ಮೊದಲಾಯಿತು! ಅಮ್ಮಾ ಎಂದರೆ- ಆಯಿ, ಅಪ್ಪ ಎಂದರೆ ಅಬ್ಬ, ಹೋಗು ಎಂದರೆ- ತು ಜಾವ್, ಊಟಕ್ಕೆ ಬಾರೋ ಎಂದರೆ ಖಾನಾ ರೆಡಿ ಹೈ ? ಎನ್ನುವ.

ಇವರು ಕನ್ನಡ ಎಂದರೆ- ಬಾಲಕ ಮಾತ್ರ ಹಿಂದಿ ನುಡಿವ. ಟೀವಿ ಪ್ರಭಾವವಿಲ್ಲ. ಪರಿಸರ ಒತ್ತಡವಿಲ್ಲ. ಬಾಲಕ ಹಿಂದಿಯಲ್ಲಿ ಉತ್ತರಿಸುವ ಈಗಾಗಲೇ ಬಳ್ಳಾರಿ ಆಸ್ಪತ್ರೆಗೆ ಅಂಡಲೆದಿದ್ದು ಆಯಿತು. ಪರಿಹಾರವಿಲ್ಲ. ಮನೋವೈದ್ಯರು ಭಾಷಾ ವಿಜ್ಞಾನಿಗಳಿಗೆ ಈ ಬಾಲಕನಿಂದು ಸವಾಲಾಗಿದ್ದಾನೆ! ಈ ಬಾಲಕನ ಮಾತಿನ ರಹಸ್ಯ ಭೇದಿಸಲು ಇನ್ನು ಯಾರಿಗೆ ಸಾಧ್ಯವಾಗುತ್ತಿಲ್ಲ. ಹಿಂದಿನ ಜನ್ಮ ರಹಸ್ಯನೂ ಇರಬಹುದೇನೋ.. ಸಾವಿರಕ್ಕೆ ಒಬ್ಬರು ಈ ರೀತಿ ಅಚ್ಚರಿ ಮೂಡಿಸಲು ಸಾಧ್ಯವಿದೆಯೆಂಬುದನ್ನು ಯಾರೂ ತಳ್ಳಿ ಹಾಕುವಂತಿಲ್ಲ.

ಏನೇ ಇರಲಿ ಎಂತ ಮಾತನಾಡಲಿ ಎನಯ ವೀರೇಶ ಸವಡಿಯ ಮಾತಿನ ಮರ್‍ಮ ಇಂದಲ್ಲ ನಾಳೇ ಬೆಳಕಿಗೆ ಬಂದೇ ಬರುವುದು! ಬರುಬರುತ್ತಾ ಬೆಳೆಬೆಳೆಯುತ್ತಾ ಸದರಿ ಬಾಲಕನೇ ಮಾತಿನ ಮರ್ಮ ಹೊರಗೆಡುವ ಸಾಧ್ಯತೆಯನ್ನು ಅಲ್ಲಗೆಳೆಯಲಾಗದು.

ನಾವು ನೀವು ಎಲ್ಲರೂ ಕಾದು ನೋಡೋಣವಲ್ಲವೇ??
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...