Home / ಲೇಖನ / ಇತರೆ / ವಿಜ್ಞಾನಕ್ಕೆ ಸವಾಲು

ವಿಜ್ಞಾನಕ್ಕೆ ಸವಾಲು

ಕೊಪ್ಪಳ ಸಮೀಪದಲ್ಲಿ ಭಾಗ್ಯ ನಗರವಿದೆ. ಅಲ್ಲಿ ವಿನಯ ವೀರೇಶ ಸವಡಿ ಎಂಬ ನಾಲ್ಕು ವರ್‍ಷದ ಬಾಲಕನಿದ್ದಾನೆ. ಮನೆಯಲ್ಲಿ ಕನ್ನಡ, ಶಾಲೆಯಲ್ಲಿ ಕನ್ನಡ, ಸ್ನೇಹಿತರೂ ಕನ್ನಡ ಮಾತನಾಡುವರು. ಶಾಲೆಯಲ್ಲಿ ನೆರೆಹೊರೆಯವರೂ ಕನ್ನಡ ಮಾತನಾಡುವರು. ಈ ಬಾಲಕನ ಅಣ್ಣ ವಿಕಾಸ ವೀರೇಶ ಸವಡಿಗೂ ಕನ್ನಡ ಮಾತ್ರ ಬರುವುದು. ತಾಯಿಗೆ ಕನ್ನಡ ಮಾತ್ರ ಗೊತ್ತಿರುವುದು, ತಂದೆ-ವೀರೇಶ ಸವಡಿಗೆ ಅಲ್ಪ ಸ್ವಲ್ಪ ಹಿಂದಿ ಗೊತ್ತು ! ಅಷ್ಟು ಬಿಟ್ಟರೆ ಯಾರಿಗೂ ಹಿಂದಿಯ ಗಂಧ ಗಾಳಿಯೇ ತಿಳಿಯದು ! ಆದರೆ.. ವಿನಯ ವೀರೇಶ ಸವಡಿ ಮಾತ್ರ ಮಾತನಾಡುವುದು ಹಿಂದಿಯಲ್ಲಿ. ಕನ್ನಡವೆಂದರೆ… ಅರ್‍ಥವಾಗದು… ಹೇಗಿದೆ ವಿನಯ ವೀರೇಶ ಸವಡಿಯ ಪೂರ್ವಜನ್ಮದ ಸುಕೃತ ಫಲ…??

ಯಾವುದೇ ಮಗು ಹುಟ್ಟಿದ ವರ್ಷದೊಳಗೆ ಮಾತನಾಡಲು ಶುರು ಮಾಡುತ್ತದೆ. ಆದರೆ.. ವಿನಯ ವೀರೇಶ ಸವಡಿ ಸುಮಾರು ಎರಡೂವರೆ ವರ್ಷ ಕಳೆದರೂ ಬರೀ ತೊದಲು ಮಾತನ್ನು ಕೂಡಾ ಆಡಿಲ್ಲ. ಇದು ಮನೆಯವರಿಗೆಲ್ಲ ಭಾರೀ ತಲೆನೋವು ತಂದಿತ್ತು. ಬರುಬರುತ್ತಾ ಮೂರನೆಯ ವರ್ಷಕ್ಕೆ ತೊದಲು ನುಡಿ ಮೊದಲ ನುಡಿ ಮೊದಲಾಯಿತು! ಅಮ್ಮಾ ಎಂದರೆ- ಆಯಿ, ಅಪ್ಪ ಎಂದರೆ ಅಬ್ಬ, ಹೋಗು ಎಂದರೆ- ತು ಜಾವ್, ಊಟಕ್ಕೆ ಬಾರೋ ಎಂದರೆ ಖಾನಾ ರೆಡಿ ಹೈ ? ಎನ್ನುವ.

ಇವರು ಕನ್ನಡ ಎಂದರೆ- ಬಾಲಕ ಮಾತ್ರ ಹಿಂದಿ ನುಡಿವ. ಟೀವಿ ಪ್ರಭಾವವಿಲ್ಲ. ಪರಿಸರ ಒತ್ತಡವಿಲ್ಲ. ಬಾಲಕ ಹಿಂದಿಯಲ್ಲಿ ಉತ್ತರಿಸುವ ಈಗಾಗಲೇ ಬಳ್ಳಾರಿ ಆಸ್ಪತ್ರೆಗೆ ಅಂಡಲೆದಿದ್ದು ಆಯಿತು. ಪರಿಹಾರವಿಲ್ಲ. ಮನೋವೈದ್ಯರು ಭಾಷಾ ವಿಜ್ಞಾನಿಗಳಿಗೆ ಈ ಬಾಲಕನಿಂದು ಸವಾಲಾಗಿದ್ದಾನೆ! ಈ ಬಾಲಕನ ಮಾತಿನ ರಹಸ್ಯ ಭೇದಿಸಲು ಇನ್ನು ಯಾರಿಗೆ ಸಾಧ್ಯವಾಗುತ್ತಿಲ್ಲ. ಹಿಂದಿನ ಜನ್ಮ ರಹಸ್ಯನೂ ಇರಬಹುದೇನೋ.. ಸಾವಿರಕ್ಕೆ ಒಬ್ಬರು ಈ ರೀತಿ ಅಚ್ಚರಿ ಮೂಡಿಸಲು ಸಾಧ್ಯವಿದೆಯೆಂಬುದನ್ನು ಯಾರೂ ತಳ್ಳಿ ಹಾಕುವಂತಿಲ್ಲ.

ಏನೇ ಇರಲಿ ಎಂತ ಮಾತನಾಡಲಿ ಎನಯ ವೀರೇಶ ಸವಡಿಯ ಮಾತಿನ ಮರ್‍ಮ ಇಂದಲ್ಲ ನಾಳೇ ಬೆಳಕಿಗೆ ಬಂದೇ ಬರುವುದು! ಬರುಬರುತ್ತಾ ಬೆಳೆಬೆಳೆಯುತ್ತಾ ಸದರಿ ಬಾಲಕನೇ ಮಾತಿನ ಮರ್ಮ ಹೊರಗೆಡುವ ಸಾಧ್ಯತೆಯನ್ನು ಅಲ್ಲಗೆಳೆಯಲಾಗದು.

ನಾವು ನೀವು ಎಲ್ಲರೂ ಕಾದು ನೋಡೋಣವಲ್ಲವೇ??
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ