Home / ಲೇಖನ / ಇತರೆ / ವಿಜ್ಞಾನಕ್ಕೆ ಸವಾಲು

ವಿಜ್ಞಾನಕ್ಕೆ ಸವಾಲು

ಕೊಪ್ಪಳ ಸಮೀಪದಲ್ಲಿ ಭಾಗ್ಯ ನಗರವಿದೆ. ಅಲ್ಲಿ ವಿನಯ ವೀರೇಶ ಸವಡಿ ಎಂಬ ನಾಲ್ಕು ವರ್‍ಷದ ಬಾಲಕನಿದ್ದಾನೆ. ಮನೆಯಲ್ಲಿ ಕನ್ನಡ, ಶಾಲೆಯಲ್ಲಿ ಕನ್ನಡ, ಸ್ನೇಹಿತರೂ ಕನ್ನಡ ಮಾತನಾಡುವರು. ಶಾಲೆಯಲ್ಲಿ ನೆರೆಹೊರೆಯವರೂ ಕನ್ನಡ ಮಾತನಾಡುವರು. ಈ ಬಾಲಕನ ಅಣ್ಣ ವಿಕಾಸ ವೀರೇಶ ಸವಡಿಗೂ ಕನ್ನಡ ಮಾತ್ರ ಬರುವುದು. ತಾಯಿಗೆ ಕನ್ನಡ ಮಾತ್ರ ಗೊತ್ತಿರುವುದು, ತಂದೆ-ವೀರೇಶ ಸವಡಿಗೆ ಅಲ್ಪ ಸ್ವಲ್ಪ ಹಿಂದಿ ಗೊತ್ತು ! ಅಷ್ಟು ಬಿಟ್ಟರೆ ಯಾರಿಗೂ ಹಿಂದಿಯ ಗಂಧ ಗಾಳಿಯೇ ತಿಳಿಯದು ! ಆದರೆ.. ವಿನಯ ವೀರೇಶ ಸವಡಿ ಮಾತ್ರ ಮಾತನಾಡುವುದು ಹಿಂದಿಯಲ್ಲಿ. ಕನ್ನಡವೆಂದರೆ… ಅರ್‍ಥವಾಗದು… ಹೇಗಿದೆ ವಿನಯ ವೀರೇಶ ಸವಡಿಯ ಪೂರ್ವಜನ್ಮದ ಸುಕೃತ ಫಲ…??

ಯಾವುದೇ ಮಗು ಹುಟ್ಟಿದ ವರ್ಷದೊಳಗೆ ಮಾತನಾಡಲು ಶುರು ಮಾಡುತ್ತದೆ. ಆದರೆ.. ವಿನಯ ವೀರೇಶ ಸವಡಿ ಸುಮಾರು ಎರಡೂವರೆ ವರ್ಷ ಕಳೆದರೂ ಬರೀ ತೊದಲು ಮಾತನ್ನು ಕೂಡಾ ಆಡಿಲ್ಲ. ಇದು ಮನೆಯವರಿಗೆಲ್ಲ ಭಾರೀ ತಲೆನೋವು ತಂದಿತ್ತು. ಬರುಬರುತ್ತಾ ಮೂರನೆಯ ವರ್ಷಕ್ಕೆ ತೊದಲು ನುಡಿ ಮೊದಲ ನುಡಿ ಮೊದಲಾಯಿತು! ಅಮ್ಮಾ ಎಂದರೆ- ಆಯಿ, ಅಪ್ಪ ಎಂದರೆ ಅಬ್ಬ, ಹೋಗು ಎಂದರೆ- ತು ಜಾವ್, ಊಟಕ್ಕೆ ಬಾರೋ ಎಂದರೆ ಖಾನಾ ರೆಡಿ ಹೈ ? ಎನ್ನುವ.

ಇವರು ಕನ್ನಡ ಎಂದರೆ- ಬಾಲಕ ಮಾತ್ರ ಹಿಂದಿ ನುಡಿವ. ಟೀವಿ ಪ್ರಭಾವವಿಲ್ಲ. ಪರಿಸರ ಒತ್ತಡವಿಲ್ಲ. ಬಾಲಕ ಹಿಂದಿಯಲ್ಲಿ ಉತ್ತರಿಸುವ ಈಗಾಗಲೇ ಬಳ್ಳಾರಿ ಆಸ್ಪತ್ರೆಗೆ ಅಂಡಲೆದಿದ್ದು ಆಯಿತು. ಪರಿಹಾರವಿಲ್ಲ. ಮನೋವೈದ್ಯರು ಭಾಷಾ ವಿಜ್ಞಾನಿಗಳಿಗೆ ಈ ಬಾಲಕನಿಂದು ಸವಾಲಾಗಿದ್ದಾನೆ! ಈ ಬಾಲಕನ ಮಾತಿನ ರಹಸ್ಯ ಭೇದಿಸಲು ಇನ್ನು ಯಾರಿಗೆ ಸಾಧ್ಯವಾಗುತ್ತಿಲ್ಲ. ಹಿಂದಿನ ಜನ್ಮ ರಹಸ್ಯನೂ ಇರಬಹುದೇನೋ.. ಸಾವಿರಕ್ಕೆ ಒಬ್ಬರು ಈ ರೀತಿ ಅಚ್ಚರಿ ಮೂಡಿಸಲು ಸಾಧ್ಯವಿದೆಯೆಂಬುದನ್ನು ಯಾರೂ ತಳ್ಳಿ ಹಾಕುವಂತಿಲ್ಲ.

ಏನೇ ಇರಲಿ ಎಂತ ಮಾತನಾಡಲಿ ಎನಯ ವೀರೇಶ ಸವಡಿಯ ಮಾತಿನ ಮರ್‍ಮ ಇಂದಲ್ಲ ನಾಳೇ ಬೆಳಕಿಗೆ ಬಂದೇ ಬರುವುದು! ಬರುಬರುತ್ತಾ ಬೆಳೆಬೆಳೆಯುತ್ತಾ ಸದರಿ ಬಾಲಕನೇ ಮಾತಿನ ಮರ್ಮ ಹೊರಗೆಡುವ ಸಾಧ್ಯತೆಯನ್ನು ಅಲ್ಲಗೆಳೆಯಲಾಗದು.

ನಾವು ನೀವು ಎಲ್ಲರೂ ಕಾದು ನೋಡೋಣವಲ್ಲವೇ??
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...