Home / ಲೇಖನ / ಇತರೆ / ವಿಜ್ಞಾನಕ್ಕೆ ಸವಾಲು

ವಿಜ್ಞಾನಕ್ಕೆ ಸವಾಲು

ಕೊಪ್ಪಳ ಸಮೀಪದಲ್ಲಿ ಭಾಗ್ಯ ನಗರವಿದೆ. ಅಲ್ಲಿ ವಿನಯ ವೀರೇಶ ಸವಡಿ ಎಂಬ ನಾಲ್ಕು ವರ್‍ಷದ ಬಾಲಕನಿದ್ದಾನೆ. ಮನೆಯಲ್ಲಿ ಕನ್ನಡ, ಶಾಲೆಯಲ್ಲಿ ಕನ್ನಡ, ಸ್ನೇಹಿತರೂ ಕನ್ನಡ ಮಾತನಾಡುವರು. ಶಾಲೆಯಲ್ಲಿ ನೆರೆಹೊರೆಯವರೂ ಕನ್ನಡ ಮಾತನಾಡುವರು. ಈ ಬಾಲಕನ ಅಣ್ಣ ವಿಕಾಸ ವೀರೇಶ ಸವಡಿಗೂ ಕನ್ನಡ ಮಾತ್ರ ಬರುವುದು. ತಾಯಿಗೆ ಕನ್ನಡ ಮಾತ್ರ ಗೊತ್ತಿರುವುದು, ತಂದೆ-ವೀರೇಶ ಸವಡಿಗೆ ಅಲ್ಪ ಸ್ವಲ್ಪ ಹಿಂದಿ ಗೊತ್ತು ! ಅಷ್ಟು ಬಿಟ್ಟರೆ ಯಾರಿಗೂ ಹಿಂದಿಯ ಗಂಧ ಗಾಳಿಯೇ ತಿಳಿಯದು ! ಆದರೆ.. ವಿನಯ ವೀರೇಶ ಸವಡಿ ಮಾತ್ರ ಮಾತನಾಡುವುದು ಹಿಂದಿಯಲ್ಲಿ. ಕನ್ನಡವೆಂದರೆ… ಅರ್‍ಥವಾಗದು… ಹೇಗಿದೆ ವಿನಯ ವೀರೇಶ ಸವಡಿಯ ಪೂರ್ವಜನ್ಮದ ಸುಕೃತ ಫಲ…??

ಯಾವುದೇ ಮಗು ಹುಟ್ಟಿದ ವರ್ಷದೊಳಗೆ ಮಾತನಾಡಲು ಶುರು ಮಾಡುತ್ತದೆ. ಆದರೆ.. ವಿನಯ ವೀರೇಶ ಸವಡಿ ಸುಮಾರು ಎರಡೂವರೆ ವರ್ಷ ಕಳೆದರೂ ಬರೀ ತೊದಲು ಮಾತನ್ನು ಕೂಡಾ ಆಡಿಲ್ಲ. ಇದು ಮನೆಯವರಿಗೆಲ್ಲ ಭಾರೀ ತಲೆನೋವು ತಂದಿತ್ತು. ಬರುಬರುತ್ತಾ ಮೂರನೆಯ ವರ್ಷಕ್ಕೆ ತೊದಲು ನುಡಿ ಮೊದಲ ನುಡಿ ಮೊದಲಾಯಿತು! ಅಮ್ಮಾ ಎಂದರೆ- ಆಯಿ, ಅಪ್ಪ ಎಂದರೆ ಅಬ್ಬ, ಹೋಗು ಎಂದರೆ- ತು ಜಾವ್, ಊಟಕ್ಕೆ ಬಾರೋ ಎಂದರೆ ಖಾನಾ ರೆಡಿ ಹೈ ? ಎನ್ನುವ.

ಇವರು ಕನ್ನಡ ಎಂದರೆ- ಬಾಲಕ ಮಾತ್ರ ಹಿಂದಿ ನುಡಿವ. ಟೀವಿ ಪ್ರಭಾವವಿಲ್ಲ. ಪರಿಸರ ಒತ್ತಡವಿಲ್ಲ. ಬಾಲಕ ಹಿಂದಿಯಲ್ಲಿ ಉತ್ತರಿಸುವ ಈಗಾಗಲೇ ಬಳ್ಳಾರಿ ಆಸ್ಪತ್ರೆಗೆ ಅಂಡಲೆದಿದ್ದು ಆಯಿತು. ಪರಿಹಾರವಿಲ್ಲ. ಮನೋವೈದ್ಯರು ಭಾಷಾ ವಿಜ್ಞಾನಿಗಳಿಗೆ ಈ ಬಾಲಕನಿಂದು ಸವಾಲಾಗಿದ್ದಾನೆ! ಈ ಬಾಲಕನ ಮಾತಿನ ರಹಸ್ಯ ಭೇದಿಸಲು ಇನ್ನು ಯಾರಿಗೆ ಸಾಧ್ಯವಾಗುತ್ತಿಲ್ಲ. ಹಿಂದಿನ ಜನ್ಮ ರಹಸ್ಯನೂ ಇರಬಹುದೇನೋ.. ಸಾವಿರಕ್ಕೆ ಒಬ್ಬರು ಈ ರೀತಿ ಅಚ್ಚರಿ ಮೂಡಿಸಲು ಸಾಧ್ಯವಿದೆಯೆಂಬುದನ್ನು ಯಾರೂ ತಳ್ಳಿ ಹಾಕುವಂತಿಲ್ಲ.

ಏನೇ ಇರಲಿ ಎಂತ ಮಾತನಾಡಲಿ ಎನಯ ವೀರೇಶ ಸವಡಿಯ ಮಾತಿನ ಮರ್‍ಮ ಇಂದಲ್ಲ ನಾಳೇ ಬೆಳಕಿಗೆ ಬಂದೇ ಬರುವುದು! ಬರುಬರುತ್ತಾ ಬೆಳೆಬೆಳೆಯುತ್ತಾ ಸದರಿ ಬಾಲಕನೇ ಮಾತಿನ ಮರ್ಮ ಹೊರಗೆಡುವ ಸಾಧ್ಯತೆಯನ್ನು ಅಲ್ಲಗೆಳೆಯಲಾಗದು.

ನಾವು ನೀವು ಎಲ್ಲರೂ ಕಾದು ನೋಡೋಣವಲ್ಲವೇ??
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...