ನೊಣ

ಕೆಲಸ ಬೊಗಸೆ ಮುಗಿಸಿ ನಾನು
ಬಯಲ ಬೆಳಕ ಬಯಸಿ ನಾನು
ದೇವರೊಲುಮೆಗೆಳಸಿ ನಾನು
ದಿನವು ದಿನವು ಬೆಳಗಿನಲ್ಲಿ ಮನೆಯ ಬಿಡುವೆನು
ಕುಣಿವ ಕುಲಮನಗಳಿಂದ ತಣಿಯುತಿರುವೆನು
ಮಾನ ಧನದ ಪ್ರಾಣಿಯೊಂದು
ಸೇನೆ ಸೇರಿ ಸರಗಿ ಒಂದು
ಶಿರದ ಮೇಲೆ ಸೆಣಸಿ ನಿಂದು
ಕಿರಿದು ನಾದ ಬೀರಿ ನನ್ನ ತಲುಬುತಿರುವುದು
ಬರಿದೆ ಬೆದರ ತೋರೆ ನಾನು ಬೆದರದಿರುವುದು
ಮೈಲು ಮೈಲು ಮೈಲು ಮತ್ತೆ
ಮೈಲ ಮೂರ ಮುಗಿಸಿ ನಿಂದೆ
ಮೈಲನಾರ ಬಳಸಿ ಬ೦ದೆ
ತಲೆಯ ಬಳಿಸಿ ವಲಯಗಟ್ಟಿ ತೇಲುತಿರುವುದು
ಛಲದ ಪಂಥಪಾಡುಗಳನ್ನು ಪಾಡುತಿರುವುದು
ಮಾಡಲೇನು ಮೊಟ್ಟ ಮೊದಲು
ಸಿಟ್ಟಿನಿ೦ದ ಬಿಟ್ಟು ಬಿಡದೆ
ಪೆಟ್ಟನಿತ್ತು ಬಟ್ಟೆಗೆಡಿಸೆ
ರೊಚ್ಚಿನಿಂದ ತುಚ್ಛಮಾಡಿ ಮುಚ್ಚಿಬರುವುದು
ಬಿಚ್ಚಿ ಬಿಚ್ಚಿ ಬೀರ ಸಿರಿಯ ಪೆರ್ಚಿ ತೋರ್ಪುದು
ನಿಲ್ಲು ನಿಲ್ಲು ಬಲ್ಲೆ ನಿನ್ನ
ಭುಲ್ಲವಿಸುತಲೇರಿ ಬರುವ
ಮಲ್ಲಯುದ್ಧ ಹೊಲ್ಲೆನೆಂದು
ಕೊಡೆಯ ಕೋಲ ಕೈದಿನಿಂದೆ ಕಾದುತಿರ್ದೆನು
ಕದನದಿಂಪು ಕದಲದಂತೆ ತೋರಿಸೆಂದೆನು
ಪ್ರಾಣಿ ಸಣ್ಣದಾದರೇನು
ಪ್ರಾಣ ತೊರೆವ ಸಿರಿಯನರಿಯೆ
ಕ್ಷೋಣಿಯಲ್ಲಿ ಎಣೆಯ ಕಾಣೆ
ನಾಣಿನಿಂದ ಶಿರವ ನಾನೆ ಮಣಿಸುತಿರ್ದೆನು
ಕಣದೆ ವೀರಜೋವಿ ಸಿರಿಯನರಿಯುತಿರ್ದೆನು
ಹೆರರ ಸೀಮೆ ನರರು ಸೇರೆ
ಹರಿದು ಹಾಯ್ದ ಹದನವರಿಯೆ
ಹಿರಿದು ಕಿರಿದು ಮಾತದಲ್ಲ
ಸಣ್ಣ ನೊಣವು ಬಣ್ಣಗೆಡದೆ ತನ್ನ ಸೀಮೆಯ
ಸಾರಿ ದೂರಿ ಪೂರೆದ ಸಿರಿಯ ದಾಸನರಿವನೆ
ದಾಸನಾದೆನೆಂತೊ ನಾನು
ನೀತಿ ಶಾಸ್ತ್ರ ಓದಿನೋಡೆ
ಮಾತೆ ಬಾರದಕಟ ದೇವ
ನಾಡವಾಭಿಮಾನರಾಜತೇಜವಡಗಲು
ನಾಡಿನಲ್ಲಿ ಹೇಡಿತನವು ಬೀಡುಗೊ೦ಡಿತು
ಹನಿಯು ಬೀಳೆ ಹುಟ್ಟಿ ಬೆಳೆದು
ಮನೆಯ ಮಾಡಿ ಹುಲ್ಲಿನಲ್ಲಿ
ಜಡಿಯ ಮಳೆಯು ಜಡಿದು ಬೀಳೆ
ಬಿಸಿಯ ಬಿಸಿಲು ವಸುಧೆಗೇರ ನಶಿಸಿಪೋಪುದು
ಹಸರು ಹಸಿಯ ಹುಲ್ಲಿನೊಡನೆ ಬಸೆದು ಬರುವುದು
೧೦
ಬದುಕಿ ಬಾಳ್ವ ಕಾಲ ಕಡಿಮೆ
ಯಾಗಿ ಇಳೆಯೊಳಳಿದರೇನು
ಗಳಿಗೆ ಹೊತ್ತು ಬೆಳಕು ತೋರಿ
ತನುವ ಸದೆಗೆ ಸಾಟಿಮಾಡಿ ಮಡಿವುದೈಸಲೆ
ಜನಪದಸ್ಯ ಸೇವೆಗಿಂತ ಸಾವು ಲೇಸಲೆ
೧೧
ಹರೆಯ ರಕುತ ಹಾರಿ ಹರಿದ
ಧರೆಯ ಸಿರಿಯ ತರುಣರೆಲ್ಲ
ವೀರ ನರವ ಮಿಡಿಸಿ ನುಡಿಸೆ
ನಾಡ ಸಿರಿಯ ನಾಡಿನಲ್ಲಿ ಹಾಡಿ ಬರುವುದು
ನಾಡ ದಾಸತನದ ಬೇಡಿ ಹಾದಿ ಹಿಡಿವುದು
*****
Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...