ನೊಣ

ಕೆಲಸ ಬೊಗಸೆ ಮುಗಿಸಿ ನಾನು
ಬಯಲ ಬೆಳಕ ಬಯಸಿ ನಾನು
ದೇವರೊಲುಮೆಗೆಳಸಿ ನಾನು
ದಿನವು ದಿನವು ಬೆಳಗಿನಲ್ಲಿ ಮನೆಯ ಬಿಡುವೆನು
ಕುಣಿವ ಕುಲಮನಗಳಿಂದ ತಣಿಯುತಿರುವೆನು
ಮಾನ ಧನದ ಪ್ರಾಣಿಯೊಂದು
ಸೇನೆ ಸೇರಿ ಸರಗಿ ಒಂದು
ಶಿರದ ಮೇಲೆ ಸೆಣಸಿ ನಿಂದು
ಕಿರಿದು ನಾದ ಬೀರಿ ನನ್ನ ತಲುಬುತಿರುವುದು
ಬರಿದೆ ಬೆದರ ತೋರೆ ನಾನು ಬೆದರದಿರುವುದು
ಮೈಲು ಮೈಲು ಮೈಲು ಮತ್ತೆ
ಮೈಲ ಮೂರ ಮುಗಿಸಿ ನಿಂದೆ
ಮೈಲನಾರ ಬಳಸಿ ಬ೦ದೆ
ತಲೆಯ ಬಳಿಸಿ ವಲಯಗಟ್ಟಿ ತೇಲುತಿರುವುದು
ಛಲದ ಪಂಥಪಾಡುಗಳನ್ನು ಪಾಡುತಿರುವುದು
ಮಾಡಲೇನು ಮೊಟ್ಟ ಮೊದಲು
ಸಿಟ್ಟಿನಿ೦ದ ಬಿಟ್ಟು ಬಿಡದೆ
ಪೆಟ್ಟನಿತ್ತು ಬಟ್ಟೆಗೆಡಿಸೆ
ರೊಚ್ಚಿನಿಂದ ತುಚ್ಛಮಾಡಿ ಮುಚ್ಚಿಬರುವುದು
ಬಿಚ್ಚಿ ಬಿಚ್ಚಿ ಬೀರ ಸಿರಿಯ ಪೆರ್ಚಿ ತೋರ್ಪುದು
ನಿಲ್ಲು ನಿಲ್ಲು ಬಲ್ಲೆ ನಿನ್ನ
ಭುಲ್ಲವಿಸುತಲೇರಿ ಬರುವ
ಮಲ್ಲಯುದ್ಧ ಹೊಲ್ಲೆನೆಂದು
ಕೊಡೆಯ ಕೋಲ ಕೈದಿನಿಂದೆ ಕಾದುತಿರ್ದೆನು
ಕದನದಿಂಪು ಕದಲದಂತೆ ತೋರಿಸೆಂದೆನು
ಪ್ರಾಣಿ ಸಣ್ಣದಾದರೇನು
ಪ್ರಾಣ ತೊರೆವ ಸಿರಿಯನರಿಯೆ
ಕ್ಷೋಣಿಯಲ್ಲಿ ಎಣೆಯ ಕಾಣೆ
ನಾಣಿನಿಂದ ಶಿರವ ನಾನೆ ಮಣಿಸುತಿರ್ದೆನು
ಕಣದೆ ವೀರಜೋವಿ ಸಿರಿಯನರಿಯುತಿರ್ದೆನು
ಹೆರರ ಸೀಮೆ ನರರು ಸೇರೆ
ಹರಿದು ಹಾಯ್ದ ಹದನವರಿಯೆ
ಹಿರಿದು ಕಿರಿದು ಮಾತದಲ್ಲ
ಸಣ್ಣ ನೊಣವು ಬಣ್ಣಗೆಡದೆ ತನ್ನ ಸೀಮೆಯ
ಸಾರಿ ದೂರಿ ಪೂರೆದ ಸಿರಿಯ ದಾಸನರಿವನೆ
ದಾಸನಾದೆನೆಂತೊ ನಾನು
ನೀತಿ ಶಾಸ್ತ್ರ ಓದಿನೋಡೆ
ಮಾತೆ ಬಾರದಕಟ ದೇವ
ನಾಡವಾಭಿಮಾನರಾಜತೇಜವಡಗಲು
ನಾಡಿನಲ್ಲಿ ಹೇಡಿತನವು ಬೀಡುಗೊ೦ಡಿತು
ಹನಿಯು ಬೀಳೆ ಹುಟ್ಟಿ ಬೆಳೆದು
ಮನೆಯ ಮಾಡಿ ಹುಲ್ಲಿನಲ್ಲಿ
ಜಡಿಯ ಮಳೆಯು ಜಡಿದು ಬೀಳೆ
ಬಿಸಿಯ ಬಿಸಿಲು ವಸುಧೆಗೇರ ನಶಿಸಿಪೋಪುದು
ಹಸರು ಹಸಿಯ ಹುಲ್ಲಿನೊಡನೆ ಬಸೆದು ಬರುವುದು
೧೦
ಬದುಕಿ ಬಾಳ್ವ ಕಾಲ ಕಡಿಮೆ
ಯಾಗಿ ಇಳೆಯೊಳಳಿದರೇನು
ಗಳಿಗೆ ಹೊತ್ತು ಬೆಳಕು ತೋರಿ
ತನುವ ಸದೆಗೆ ಸಾಟಿಮಾಡಿ ಮಡಿವುದೈಸಲೆ
ಜನಪದಸ್ಯ ಸೇವೆಗಿಂತ ಸಾವು ಲೇಸಲೆ
೧೧
ಹರೆಯ ರಕುತ ಹಾರಿ ಹರಿದ
ಧರೆಯ ಸಿರಿಯ ತರುಣರೆಲ್ಲ
ವೀರ ನರವ ಮಿಡಿಸಿ ನುಡಿಸೆ
ನಾಡ ಸಿರಿಯ ನಾಡಿನಲ್ಲಿ ಹಾಡಿ ಬರುವುದು
ನಾಡ ದಾಸತನದ ಬೇಡಿ ಹಾದಿ ಹಿಡಿವುದು
*****
Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...