Home / ಲೇಖನ / ವಿಜ್ಞಾನ / ಮುಪ್ಪನ್ನು ಮುಂದೂಡವಲ್ಲಿ ಸಫಲರಾದ ವಿಜ್ಞಾನಿಗಳು

ಮುಪ್ಪನ್ನು ಮುಂದೂಡವಲ್ಲಿ ಸಫಲರಾದ ವಿಜ್ಞಾನಿಗಳು

ಮುಪ್ಪು ಯಾರಿಗೆ ತಾನೆ ಇಷ್ಟ? ಯಾವ ಕಾಲದಲ್ಲಿಯೂ ತಾರುಣ್ಯದಿಂದಲೇ ಇರಬೇಕೆಂಬ ಅಭಿಲಾಷೆ ಈ ಮಾನವನದ್ದು ಪೌರಾಣಿಕ ಕಾಲದಲ್ಲಿ ಮಂತ್ರಶಕ್ತಿಯಿಂದ ಮಾಯವಾಗುವುದು. ಮುದುಕ ಯುವಕನಾಗುವುದು, ಗಂಡು ಹೆಣ್ಣಾಗುವುದು ಸರ್ವೆಸಾಮಾನ್ಯ. ಇವೆಲ್ಲ ವೈಜ್ಞಾನಿಕವಾಗಿ ದೂರವಾದವುಗಳು. ಆದರೆ ವಾಸ್ತವವಾಗಿ ವೈಜ್ಞಾನಿಕವಾಗಿ ಸದಾ ತಾರುಣ್ಯದಲ್ಲಿಯೇ ಇರಬೇಕೆನ್ನುವುದು ವಿಜ್ಞಾನಕ್ಕೆ ಸಂಶೋಧನೆಗೆ ಬಿಟ್ಟ ವಿಷಯವಾಗಿದೆ. ಹಾಗೆ ನೋಡಿದರೆ ‘ಕ್ಲೋನಿಂಗ್’ ವಿಷಯ ಬಂದಾಗ ಮರುಸೃಷ್ಟಿ ಸಾಧ್ಯವೆಂದಾದರೂ ಈ ವಯಸ್ಸನ್ನು ಇಳಿಗೊಳಿಸದಿರುವುದು ಅಸಾಧ್ಯದ ಮಾತೆಂದು ಎಲ್ಲರೂ ಭಾವಿಸಿದ್ದರು. ಅಮೇರಿಕದ ಹೊಸ್ಟನ್ನಿನಲ್ಲಿ ಮಿಲ್ಲರ್ ಕ್ಯಾರ್ಲ್ಸ್ ಎಂಬ ೮೧ ವರ್ಷ ವಯೋವೃದ್ಧ ಸದಾ ಯವ್ವನಾವಸ್ಥೆಯಲ್ಲಿಯೇ ಇರಬೇಕೆಂದು ಬಯಸಿ ತನ್ನ ಜೀವಿತಾವಧಿಯಲ್ಲಿಯೇ ಮುಪ್ಪನ್ನು ಬರದಿರುವಂತೆ ಮಾಡುವ ಸಂಶೋಧಕರಿಗೆ ೧ ಲಕ್ಷ ಡಾಲರ್ ಬಹುಮಾನ ನೀಡುವುದಾಗಿ ೧೯೯೯ ರಲ್ಲಿ ಘೋಶಿಸಿದ ನಂತರ ಕ್ಯಾರ್ಲ್ಸ್ ಅವರ ಸತತ ಪ್ರಯತ್ನಗಳ ದೆಸೆಯಿಂದ ಹಲವಾರು ವಿಜ್ಞಾನಿಗಳು ರೇಗಾನ್ ಕಾರ್ಪೊರೇಶನ್ ಎಂಬ ವಿಜ್ಞಾನದ ಸಂಸ್ಥೆಯನ್ನು ಕಟ್ಟಿದರು. ಈ ಸಮಿತಿಯಲ್ಲಿ ಪ್ರಖ್ಯಾತ ವೈದ್ಯ ವಿಜ್ಞಾನಿಗಳು ಅಣು ಜೀವಿ ವಿಜ್ಞಾನಿಗಳು, ಪೋಷಕಾಂಶ ಪರಿಣಿತರು ವ್ಯಾಯಾಮ ಪಂಡಿತರು ಮುಂತಾದ ವಿವಿಧ ಕ್ಷೇತ್ರಗಳ ೧,೦೦೦ ಕ್ಕೂ ಹೆಚ್ಚು ಜನ ವೃದ್ಧಾಪ್ಯವನ್ನು ಹಿಮ್ಮೆಟ್ಟಿಸುವ ಸಂಶೋಧನೆಯಲ್ಲಿ ತೊಡಗಿದರು. ಕೊನೆಗೊಂದು ದಿನ ಫ್ರಾನ್ಸಿನ ಕ್ರಿಸ್ ಜತೆಗೂಡಿ D.N.A. ಅಣು ವಿನ್ಯಾಸ ಪತ್ತೆಮಾಡಿದ ನೊಬೆಲ್‌ ಪ್ರಶಸ್ತಿ ವಿಜೇತ ವಿಜ್ಞಾನಿ ಡಾ|| ಜೇಮ್ಸ್ ವಾಟ್ಸನ್ ಸಲಹಾ ಮಂಡಲಯಲ್ಲಿರುವ ಗೇರಾನ್ ಕಾರ್ಪೋರೇಶನ್ನಿನ ಪ್ರತಿಭಾವಂತ ವಿಜ್ಞಾನಿ ಡಾ|| ಮೈಕ್ ವೆಸ್ಟ್ ವೃದ್ಯಾಪ್ಯಕ್ಕೆ ಸಂಬಂಧಿಸಿದ ಅತ್ಯಂತ ಮಹತ್ವದ ಅನ್ವೇಷಣೆಯ ಬಗೆಗೆ ಬೆಳಕು ಚಲ್ಲಿದರು. ನಮ್ಮ ದೇಹದಲ್ಲಿ ೧೦೦ ಟ್ರಿಲಿಯನ್ ಜೀವಕೋಶಗಳಿದ್ದು ಈ ಜೀವಕೋಶಗಳು ಅಮರವಾದರೆ ನಮ್ಮದೇಹವು ಅಮರವಾಗುತ್ತದೆ. ಈ ಜೀವಿಕೋಶಗಳ ಅಮರತ್ವವನ್ನು “ಹೆಪ್ಲಿಕ್ ಮಿತಿ” ಎಂಬ ಸರಳ ನಿಯಮವೊಂದು ರೂಪಿಸುತ್ತದೆ.

ನಮ್ಮ ದೇಹದ ಅಂಗಾಂಗಗಳಿಂದ ತೆಗೆದ ಜೀವಕೋಶಗಳನ್ನು ಪ್ರಯೋಗ ಶಾಲೆಯಲ್ಲಿ ಬೆಳಸಿದಾಗ ಅವು ಸು. ೫೦ ಬಾರಿ ವಿಭಜನೆಯಾಗುತ್ತವೆ. ಈ ಮಿತಿ ಅಂಗಾಂಶಗಳನ್ನು ಆಧರಿಸಿ ಬದಲಾಗುತ್ತದೆ. ಈ ಮಿತಿಯನ್ನು ದಾಟಿದ ನಂತರ ಕೋಶವಿಭಜನೆ ನಿಂತು ಜೀವಕೋಶಗಳಿಗೆ ಮುಪ್ಪು ಬರುತ್ತದೆ. ಈ ನಿಯಮವನ್ನು ಪ್ರತಿಪಾದಿಸಿದ ಕ್ಯಾಲಿಫೋರ್ನಿಯಾದ ವಿ.ವಿ.ಯ ವಿಜ್ಞಾನಿ ಡಾ|| ಹೆಪ್ಲಿಕ್ ಹೇಳುವಂತೆ ಜೀವಕೋಶದಲ್ಲಿರುವ D.N.A. ಸರಪಳಿಯಲ್ಲಿ ‘ಟೆಲೋಮಿರ್’ ಎಂಬ ಭಾಗವಿದೆ. ಷುಲೇಸ್ನ ಎರಡೂ ತುದಿಯಲ್ಲಿರುವ ಪ್ಲಾಸ್ಟಿಕ್ ಕವಚದಂತಿರುವ ಟೆಲೋಮಿರ್ ಭಾಗದ ಉದ್ದ ಪ್ರತಿಭಾರಿ ಜೀವಕೋಶ ವಿಭಜನೆಗೂಂಡಾಗಲೂ ಕಡಿಮೆಯಾಗುತ್ತದೆ. ಈ ಉದ್ದ ಒಂದು ನಿರ್ದಿಷ್ಟ ಮಿತಿಗೆ ಬಂದ ಕೂಡಲೇ ವಿಭಜನೆ ನಿಲ್ಲುತ್ತದೆ. ಟೆಲೋಮಿರನ ಉದ್ದಕ್ಕೂ ಜೀವಕೋಶಗಳ ಸಾವಿಗೂ ಖಚಿತವಾದ ಸಂಬಂಧವಿರುವುದು ಈಗ ಸ್ಪಷ್ಟವಾಗಿದೆ. ಎಲ್ಲ ಜೀವಕೋಶಗಳಲ್ಲಿಯೂ ಟೆಲೋಮಿರೇಟ್ ಎಂಬ ವಂಶವಾಹಿ ಇದ್ದು ಇದು ಟೆಮಿಮಿರ್ ಭಾಗದ ಉದ್ದವನ್ನು ಮತ್ತೊಮ್ಮೆ ಮೊದಲಿನಂತೆ ಮಾಡಿ ಮುಪ್ಪಡರಿದ ಜೀವಕೋಶಗಳನ್ನು ಹಿಂದಿನ ಯೌವ್ವನಾವ್ಯವಸ್ಥೆಗೆ ತರಬಲ್ಲದು.

ಡಾ|| ಹೆಸ್ಕ್ ಅವರೊಂದಿಗೆ ಸಂಶೋಧನೆಯಲ್ಲಿ ನಿರತರಾಗಿರುವ ಡಾ|| ವುಡ್‌ರಿಂಗ್ ರೈಟ್ ಮತ್ತು ಡಾ || ಚೆರಿಶೇ ಅವರುಗಳು ಈದೀಗ ಈ ಸುಪ್ತವಾದ ಜಡಾವಸ್ತೆಯ ವಂಶವಾಹಿನಿಯನ್ನು ಇನ್ನಿತರ ಜೀವಕೋಶಗಳಲ್ಲಿ ಸೇರಿಸಿ ಆ ಜೀವಕೋಶಗಳು ಹೆಪ್ಲಿಕ್, ಮಿತಿಯನ್ನು ದಾಟಿ ನಿರಂತವಾಗಿ ವಿಭಜನೆಯಾಗುವಂತೆ ಮಾಡಲಾಗಿದೆ. ಸಾವಿನ ಅಂಚಿಗೆ ಬಂದಿದ್ದ ಅಂಗಾಂಶವೊಂದರ ಜೀವಕೋಶಗಳನ್ನು ಮತ್ತೊಮ್ಮೆ ಹಿಂದಿನ ಯೌವನವಸ್ಥೆಗೆ ತರುವಲ್ಲಿ ಈ ತಂಡ ಸಂಪೂರ್ಣದಾಗಿ ಯಶಸ್ವಿಯಾಗಿದೆ. ಜೀವಕೋಶದ ಹಂತದಲ್ಲಿ ಇಂದು ಸಾಧ್ಯವಾಗಿರುವ ಅಮರತ್ವ, ಮುಂದೆ ಜೀವಿಯ ಮಟ್ಟದಲ್ಲೂ ಸಾಧ್ಯವಾಗಬಹುದು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...