Home / ಲೇಖನ / ವಿಜ್ಞಾನ / ಅಂಗೈಯಲ್ಲಿ ಬ್ರಹ್ಮಾಂಡ (ವೈರ್ಲೆಸ್ ಫಿಡೆಲಿಟಿ)

ಅಂಗೈಯಲ್ಲಿ ಬ್ರಹ್ಮಾಂಡ (ವೈರ್ಲೆಸ್ ಫಿಡೆಲಿಟಿ)

ಇಂದು ಜಗತ್ತಿನಾದ್ಯಂತ ೧೫೦ ಕೋಟಿ ಮೊಬೈಲ್ ಫೋನುಗಳಿವೆ. ಇವೆಲ್ಲವುಗಳನ್ನು ಮೀರಿ ಇಂದು ವೈಫೈ ಮೊಬೈಲ್ ಸಾಧನ ಬಂದಿದೆ. ಇದನ್ನು ಮೀರಿಸುವ ಇನ್ನೊಂದು ಸಾಧನ ಬಂದಿಲ್ಲವೆಂದು ಹೇಳುವುದರೊಳಗಾಗಿ ಇನ್ನೊಂದು ಕಂಪನಿ ಇದಕ್ಕಿಂತಲೂ ವಿಭಿನ್ನವಾದುದನ್ನು ಪ್ರಪಂಚಕ್ಕೆ ನೀಡುತ್ತದೆ. ಇರಲಿ ಈ ವೈ-ಫೈ ಯು ಒಂದು ಕಂಪ್ಯುಟರ್ ಮಾಡುವ ಕೆಲಸಗಳನ್ನೆಲ್ಲ ಮಾಡುತ್ತದೆ. (ಪುಟ್ಟ ಫೋನ್) ಈ Phone ಗೆ ಒಂದು ಇಂಟರ್ ನೆಟ್ ಸಂಪರ್ಕ ಪಡೆದು ಕೊಂಡು ಕಾಲೇಜಿಗೆ ಬರಿಗೈಯಲ್ಲಿ ಹೋಗುವ ವಿದ್ಯಾರ್ಥಿಗಳಿದ್ದಾರೆ. ಯಾವ ಪಾಠವನ್ನು ಬೇಕಾದರೂ ಅವರು ತಕ್ಷಣ ತಮ್ಮ ಪರಸನಲ್ ವೆಬ್‌ಸೈಟಿನಿಂದ ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ. ಮನೆಮುಂದಿದ್ದ ಉದ್ಯಾನವನದಲ್ಲಿ ಕುಳಿತಕೊಂಡು ಕೈಯಲ್ಲಿರುವ ಪುಟ್ಟ ಫೋನಿನ ಪರದೆಯಲ್ಲೇ ಟಿ.ವಿ. ನೋಡಬಹುದು. ಪುಸ್ತಕ ಓದಬಹುದು. ಅಂದಿನ ಪತ್ರಿಕೆ ಓದಬಹುದು. ಇದ್ದಕ್ಕಿದ್ದಂತೆ ಮೊಬೈಲ್ ಪರದೆಯಲ್ಲೊಂದು ಪುಟ್ಟ ಸಂದೇಶ ಪ್ರತ್ಯಕ್ಷವಾಗುತ್ತದೆ. ಇಂದಿನಿಂದ ಸಿಗರೇಟು ಸೇದುವುದು\ಬಿಡಿ ಎಂದು ಹೇಳಿಬಿಡುತ್ತದೆ. ಕೈಯಲ್ಲಿರುವ ಮೊಬೈಲ್ Phone ಮೂಲಕ ಆಫೀಸಿನ ಕಂಪ್ಯೂಟರ್ ಜೊತೆ ಸಂಪರ್ಕ ಪಡೆದುಕೊಳ್ಳಬಹುದು. ಆಫೀಸಿನಲ್ಲಿ ಮಾಡುವ ಕೆಲಸಗಳನ್ನು ಅಲ್ಲೆಕೂತು ಎಲ್ಲಿಯೂ ಕೂತುಮಾಡಬಹುದು. ಪಶ್ಚಿಮ ಯೂರೂಪು ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಇಂಥಹ ಮೊಬೈಲಗಳು ಎಲ್ಲೆಂದರಲ್ಲಿವೆ ೫ ಪೌಂಡ್ ನೀಡಿ ಸಿಂಬಿಯನ್ ಡೇಟವನ್ನು ಮೊಬೈಲಗೆ ಹಾಕಿಸಿಕೊಳ್ಳಬೇಕಷ್ಟೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...