Home / ಕವನ / ಕವಿತೆ / ಸಾವಿನ ಮಳೆ ಸೂತಕ

ಸಾವಿನ ಮಳೆ ಸೂತಕ

ಹೌದು!
ಅಲ್ಲೀಗ ಸಾವಿನದೇ ಸುದ್ದಿ
ಸ್ತಬ್ಧವಾಗಿದೆ ಬದುಕು
ಮಳೆಯ ಅಬ್ಬರದ್ದೇ ಸದ್ದು
ಸಿಡಿಲು ಮಳೆಗೆ ಬಿದ್ದ ಗೋಡೆ
ಕೆಳಗೆ ಸಿಲುಕಿದವರೆಷ್ಟು?
ಸತ್ತವರ ಸಂಖ್ಯೆ ಲೆಕ್ಕವಿಟ್ಟವರಾರು?

ಕಡಲ ತಟದ ಅಲೆಗಳು
ಮುನಿದು ರೊಚ್ಚಿನಿಂದ ಅಪ್ಪಳಿಸಿ
ಕೊಚ್ಚಿಹೋದ ಮನೆಗಳೆಷ್ಟು?
ಕೆರೆಕೋಡಿ ಒಡೆದು ರಭಸದಿಂದ
ನುಗ್ಗಿದ ನೀರು ಉರುಳಿಸಿದ
ಗುಡಿಸಲುಗಳ ಲೆಕ್ಕವಿಟ್ಟವರಾರು?

ಬರದ ನಾಡಲಿ ಸುರಿದ
ಸಾವಿನ ಮಳೆ ಅರ್ಭಟಕ
ಬಡವರ ಬದುಕು ಅಸ್ತವ್ಯಸ್ತ
ಮನೆಯೊಳಗೆ ಮಲಗಿದ ಮಗು
ತಣ್ಣನೆಯ ಕ್ರೂರ ಸಾವಿಗೆ
ಕೊಚ್ಚಿ ಹರಿದು ಹೋದದ್ದು
ಅರಿವಿಗೆ ಬಂದಾಗ ಕೈಮೀರಿತ್ತು

ಊರು ಕೇರಿಗಳೀಗ
ಚಿಕ್ಕ ಚಿಕ್ಕ ದ್ವೀಪಗಳು, ಅಲ್ಲೀಗ
ಮಸಣ ಮೌನದ್ದೇ ಕಾರುಭಾರು
ನಾಳೆಯ ಭರವಸೆಯಿಲ್ಲ
ಅನ್ನ ನೀರಿಲ್ಲದೆ ನಡುಗಡ್ಡೆ ಊರಲ್ಲಿ
ಸಾಂಕ್ರಾಮಿಕ ರೋಗಗಳದ್ದೇ ಕೈಮೇಲು
ನಡುಗಡ್ಡೆಯಲಿ ನರಳುವವರ
ಕೈಹಿಡಿದು ಮೇಲೆತ್ತಲಾರದ?
ವಿಧೀಯ ಅಟ್ಟಹಾಸ.

ಮಳೆರಾಯನ ಮುನಿಸಿಗೆ
ಪ್ರಕೃತಿಯ ರೌದ್ರಾವತಾರ
ನಲುಗಿದ ಜನಜೀವನ ತಲ್ಲಣ.
ಕಿತ್ತುಹೋದ ಸಂಪರ್ಕ ಸೇತುಗಳು,
ಸರ್ಕಾರದ ಪರಿಹಾರವಿನ್ನೂ
ಕನ್ನಡಿಯೊಳಗಿನ ಗಂಟು
ಸಂತ್ರಸ್ಥರ ಕೈಗೆ ಹೇಗೆ ಸಿಕ್ಕೀತು?
ಭರವಸೆಯ ಮಾತುಗಳು
ಬಿದ್ದಗೋಡೆಗಳಡಿಯಲ್ಲಿ ಶವವಾದವರು
ಅವರೆಂದೂ ಬಾರದ ದಾರಿಯಲಿ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...