Home / ಕವನ / ಕವಿತೆ / ಅಣಬೆ

ಅಣಬೆ

            ೧
ತನಸು ತಿರೆಯ ತೀಡಿಬರಲು
ಬನಪನಾಂತು ಮೂಡಿ ಬರುವ
ಮನಕೆ ಮಾಟಮಾಡಿ ಕಾ೦ಬ
ಅಣಬೆ ಚೆಲುವ ಕಳೆಯಕೀರಿ ಹೊಳೆಯುತಿರುವುದು
ತಳಿರಜೊಂಪನಳಿವಸೊ೦ಪ ತಿಳಿಸುತ್ತಿರುವುದು
ಬಾನಮೇಲೆ ತೇಲಿಕಾಂಬ
ಬಾನಗೊಡೆಯ ಕೋಲ ಕಾಣೆ
ಕ್ಷೋಣಿಗದುವೆ ಮಾಣದೆಂದು
ಕ೦ಬದಿ೦ಬನೊ೦ದಿ ಬಾನಸೊಂಪನೀವೆಯ
ಕುಂದದಿರ್ದ ಚಂದ್ರಬಿ೦ಬದಿ೦ಪನೀವೆಯ
ನೀರನೆಲೆಯ ತೆರೆಯ ಮೇಲೆ
ಸರಿದು ಸರಿದು ಸುಳಿಯುತಿರುವ
ಪರಮ ಸಿರಿಯ ತಿರೆಗೆ ತರುವ
ಬುರುಗಿನಿರವ ತೋರಿಯೆನ್ನ ಕುಣಿಸುತಿರುವೆಯ
ಪರಮಹರುಷವಿತ್ತು ಮನಕೆ ತಣಿಸುತಿರುವೆಯ
ಚ೦ಚರೀಕತತಿಯಣಂಬೆ
ಮಿಂಚಿನಂಥ ಮೈಯಸಿರಿಗೆ
ಸಂಚರಿಸದ ಸಂಚನೋಡೆ
ಮೂಸದಿರ್ದ ಪುಷ್ಪವಾಗಿ ವಸುಧೆಗೆಸೆವುದು
ವಾಸನಾರುಚಿಯ ಜನವು ಮೂಸಿ ತಿಳಿಯದು
ತಿಳಿಯದಂತೆ ತೆರಳಿ ಬಂದು
ಬಾಳ ಬಳಗ ಬಳಸಿ ತಾಳಿ
ಹಾಲುತಿವೆ ಹಾಲುಹೊಲದೆ
ಕಾಲಕಳೆವ ಕಳೆಯ ಕಂಡು ಹಿಗ್ಗುತಿರ್ದೆನು
ಕೀಳುಮೇಲು ಭಾವಗಳನು ಧೂಳಿಗೊಟ್ಟೆನು
ದೇವಗಂಗೆ ತಂಪಿನ ಗಿರಿಯ
ಸೇವೆಯಿಂದ ಸಾಗಿ ಮೊರೆಯೆ
ಭಾವಗೀತೆಯಲ್ಲಿ ಏಳ್ವ
ನೊರೆಯ ಸಿರಿಯ ಪರಿಯ ತೋರಿ ಮರುಕವೀವೆಯ
ಪರಮಗಂಗ ತವರ ತೊರೆವ ಪರಿಯ ತೋರ್ಪೆಯ
ಬಾಲತನದ ಲೀಲೆಯಲ್ಲಿ
ಕಾಲ ಕಳೆದ ಸಮಯದಲ್ಲಿ
ಅಣಬೆ ನಿಲಯದಲ್ಲಿ ಮೊಳೆಯೆ
ಲಗುನೆ ಜನಕ ಮನೆಯ ತಾನೆ ಬಿಡಿಸಿಬಿಟ್ಟನು
ಹೈಗನಾಡ ನಾಡನುಡಿಯ ನಡಿಸಿಬಿಟ್ಟನು
ವಸುಧೆಯಲ್ಲಿ ಜನುಮ ಬರುವ
ಬಿಸಜಸುತನ ವಸ್ತುರಾಶಿ
ಬಸಗೆವರೆಯೆ ಮಸಗುತಿರಲು
ಕೀಳುಮೇಲು ಕೆಳಗೆ ಮೇಲೆಯೆಂಬುದರಿಯೆನು
ತುಲನೆಮಾಳ್ಪ ಕಳೆಯ ಕೊಳೆಯ ತಿಳಿಯದಿರುವೆನು
*****
Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...