Home / ಕವನ / ಕವಿತೆ / ಓಂ! ನಮೋ!

ಓಂ! ನಮೋ!

ನಿನ್ನ ಮಗಳಾದ ಲಕ್ಷ್ಮಿಯಂತೆ ಸೌಂದರ್ಯದ ತವರಲ್ಲ ನಾನು
ಓ! ಸಮುದ್ರ!
ಆದರೆ ಮಗುವಿನಂತೆ ನಿನ್ನನು ಪ್ರೀತಿಸಿದೆ! ಕರುಣಿಸು ತಂದೆ!
ನಾರಾಯಣನಂತೆ ಲಕ್ಷ್ಮೀಲೋಲನಲ್ಲ, ಶೇಷಶಾಯಿಯಲ್ಲ ಓ! ಸಮುದ್ರ!
ಅವನಂತೆ ಪಾರಾಯಣ ಮಾಡಿದೆ ನಿನ್ನ! ಉರವಣಿಸೆನ್ನ ಮನವ, ತಂದೆ!
ಚಂದ್ರನಂತೆ ನಿನ್ನ ಹೈದಯವನು ಉಕ್ಕೇರಿಸಿದವನಲ್ಲ, ಓ! ಸಮುದ್ರ!
ಆದರೆ ನಿನ್ನ ಮಹಿಮೆಯ ನೋಡಿ ಉಕ್ಕೇರಿದವನು, ತಂದೆ!
ನೀಲಕಂಠನಂತೆ,-ನಿನ್ನನುರಿಸಿದ ವಿಷವ ನುಂಗಿಲ್ಲ, ಓ! ಸಮುದ್ರ!
ಆದರೆ ರಾಕ್ಷಸರಂತೆ ಅಮೃತವನೊಂದೆ ಬಯಸಿದವನಲ್ಲ, ಕರುಣಿಸು ತಂದೆ!
ದೇವನಂತೆ ಮತ್ಸ್ಯಕೂರ್ಮವಾಗಿ ನಿನ್ನ ತೊಡೆಯ ಮೇಲಾಡಿಲ್ಲ,
ಓ! ಸಮುದ್ರ!
ಆದರೆ ಕೂರ್ಮ-ಮತ್ಸ್ಯಗಳಲ್ಲಿ ಸಹ ದೇವರನ್ನು ಕಂಡಿರುವೆನು, ತಂದೆ!
ದೇವತೆಗಳಂತೆ ನಿನ್ನಾಳವನು ಮಂಥಿಸಿ ತಿಳಿದಿಲ್ಲ, ಓ! ಸಮುದ್ರ!
ಆದರೆ ಚಿಂತಿಸಲು ಅದು ಕಣ್ಣೆದುರಿಗೆ ತಾನಾಗಿ ಹೊಳೆದಿಹುದು, ತಂದೆ!
ಶೆಲ್ಲಿಯಂತೆ ಮರಣದ ತೆರೆಯೆತ್ತಿ, ನಿನ್ನನ್ನು ನೋಡಿದವನಲ್ಲ
ಓ! ಸಮುದ್ರ!
ಆದರೆ ನಿನ್ನ ತೆರೆತೆರೆಯಲ್ಲಿ ಹುಟ್ಟುಸಾವಿನ ಗುಟ್ಟನು, ಕಾವ್ಯದ
ಶೆಲೆಯನು ಕಂಡೆನು, ತಂದೆ!
ಹಿಂದಿನ ಕಾವ್ಯದಲ್ಲಿಯಂತೆ ನಿನ್ನ ರೂಪವಿಲ್ಲಿ ಥಳಥಳಿಸಿಲ್ಲ, ಓ! ಸಮುದ್ರ!
ಆದರೆ ನಿನ್ನನ್ನು ನೋಡದೆ ಬಣ್ಣಿಸಿ ನಾನು ಹಳಹಳಿಸಿಲ್ಲ, ತಂದೆ!
ನಿನ್ನ ಸಾವಿರ ಭಂಗಿಗಳನ್ನು ಕೀರ್ತಿಸಲು ಸ್ವರವಿಲ್ಲ, ನನ್ನ ಪುಂಗಿಗೆ.
ನಿನ್ನ ಬಣ್ಣ-ಬಣ್ಣಗಳ ಬಣ್ಣಿಸುವ ಕುಸುರಿಲ್ಲ ನನ್ನ ಕಲೆಗೆ.
ಒ೦ದೇ ಒಂದು ಮಾತನು ನೂರೊಂದು ಸಲ ಸಾರುವೆನು,-
ನಿನ್ನ ನೋಡಿ ನನ್ನ ಜೀವನಕೆ ಮ೦ಗಳವಾಯ್ತು, ಮ೦ಗಳವಾಯ್ತು,
ಮಹಾಮಂಗಳವಾಯ್ತು!
ಓಂ! ನಮೋ! ಸಮುದ್ರಪುರುಷಾಯ!
*****
Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...