Home / ಕವನ / ಕವಿತೆ / ಓಂ! ನಮೋ!

ಓಂ! ನಮೋ!

ನಿನ್ನ ಮಗಳಾದ ಲಕ್ಷ್ಮಿಯಂತೆ ಸೌಂದರ್ಯದ ತವರಲ್ಲ ನಾನು
ಓ! ಸಮುದ್ರ!
ಆದರೆ ಮಗುವಿನಂತೆ ನಿನ್ನನು ಪ್ರೀತಿಸಿದೆ! ಕರುಣಿಸು ತಂದೆ!
ನಾರಾಯಣನಂತೆ ಲಕ್ಷ್ಮೀಲೋಲನಲ್ಲ, ಶೇಷಶಾಯಿಯಲ್ಲ ಓ! ಸಮುದ್ರ!
ಅವನಂತೆ ಪಾರಾಯಣ ಮಾಡಿದೆ ನಿನ್ನ! ಉರವಣಿಸೆನ್ನ ಮನವ, ತಂದೆ!
ಚಂದ್ರನಂತೆ ನಿನ್ನ ಹೈದಯವನು ಉಕ್ಕೇರಿಸಿದವನಲ್ಲ, ಓ! ಸಮುದ್ರ!
ಆದರೆ ನಿನ್ನ ಮಹಿಮೆಯ ನೋಡಿ ಉಕ್ಕೇರಿದವನು, ತಂದೆ!
ನೀಲಕಂಠನಂತೆ,-ನಿನ್ನನುರಿಸಿದ ವಿಷವ ನುಂಗಿಲ್ಲ, ಓ! ಸಮುದ್ರ!
ಆದರೆ ರಾಕ್ಷಸರಂತೆ ಅಮೃತವನೊಂದೆ ಬಯಸಿದವನಲ್ಲ, ಕರುಣಿಸು ತಂದೆ!
ದೇವನಂತೆ ಮತ್ಸ್ಯಕೂರ್ಮವಾಗಿ ನಿನ್ನ ತೊಡೆಯ ಮೇಲಾಡಿಲ್ಲ,
ಓ! ಸಮುದ್ರ!
ಆದರೆ ಕೂರ್ಮ-ಮತ್ಸ್ಯಗಳಲ್ಲಿ ಸಹ ದೇವರನ್ನು ಕಂಡಿರುವೆನು, ತಂದೆ!
ದೇವತೆಗಳಂತೆ ನಿನ್ನಾಳವನು ಮಂಥಿಸಿ ತಿಳಿದಿಲ್ಲ, ಓ! ಸಮುದ್ರ!
ಆದರೆ ಚಿಂತಿಸಲು ಅದು ಕಣ್ಣೆದುರಿಗೆ ತಾನಾಗಿ ಹೊಳೆದಿಹುದು, ತಂದೆ!
ಶೆಲ್ಲಿಯಂತೆ ಮರಣದ ತೆರೆಯೆತ್ತಿ, ನಿನ್ನನ್ನು ನೋಡಿದವನಲ್ಲ
ಓ! ಸಮುದ್ರ!
ಆದರೆ ನಿನ್ನ ತೆರೆತೆರೆಯಲ್ಲಿ ಹುಟ್ಟುಸಾವಿನ ಗುಟ್ಟನು, ಕಾವ್ಯದ
ಶೆಲೆಯನು ಕಂಡೆನು, ತಂದೆ!
ಹಿಂದಿನ ಕಾವ್ಯದಲ್ಲಿಯಂತೆ ನಿನ್ನ ರೂಪವಿಲ್ಲಿ ಥಳಥಳಿಸಿಲ್ಲ, ಓ! ಸಮುದ್ರ!
ಆದರೆ ನಿನ್ನನ್ನು ನೋಡದೆ ಬಣ್ಣಿಸಿ ನಾನು ಹಳಹಳಿಸಿಲ್ಲ, ತಂದೆ!
ನಿನ್ನ ಸಾವಿರ ಭಂಗಿಗಳನ್ನು ಕೀರ್ತಿಸಲು ಸ್ವರವಿಲ್ಲ, ನನ್ನ ಪುಂಗಿಗೆ.
ನಿನ್ನ ಬಣ್ಣ-ಬಣ್ಣಗಳ ಬಣ್ಣಿಸುವ ಕುಸುರಿಲ್ಲ ನನ್ನ ಕಲೆಗೆ.
ಒ೦ದೇ ಒಂದು ಮಾತನು ನೂರೊಂದು ಸಲ ಸಾರುವೆನು,-
ನಿನ್ನ ನೋಡಿ ನನ್ನ ಜೀವನಕೆ ಮ೦ಗಳವಾಯ್ತು, ಮ೦ಗಳವಾಯ್ತು,
ಮಹಾಮಂಗಳವಾಯ್ತು!
ಓಂ! ನಮೋ! ಸಮುದ್ರಪುರುಷಾಯ!
*****
Tagged:

Leave a Reply

Your email address will not be published. Required fields are marked *

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...