Home / ಕಥೆ / ಕಿರು ಕಥೆ / ಕೊಳ, ಕಪ್ಪೆ, ಅಳಿಲು

ಕೊಳ, ಕಪ್ಪೆ, ಅಳಿಲು

ಕೊಳದಲ್ಲಿ ಸ್ನಾನ ಮಾಡಿ ಬಂದ ಮೂರು ಶಿಷ್ಯರನ್ನು ಗುರುಗಳು ಹೀಗೆ ಕೇಳಿದರು.

“ಶಿಷ್ಯಾ! ಕೊಳದಲ್ಲಿ ಈಜಿ ಸ್ನಾನ ಮಾಡಿ ದಡದಲ್ಲಿ ಕುಳಿತು ಧ್ಯಾನ ಮಾಡುವಾಗ, ನಿನಗಾದ ಅನುಭವವೇನು?” ಎಂದು ಕೇಳಿದರು. ಗುರುಗಳೇ! ಕೊಳದಲ್ಲಿ ಕಪ್ಪೆ ದಡದಲ್ಲಿ ಕುಳಿತ ನನ್ನ ಹತ್ತಿರಕ್ಕೆ ಬಂದು, “ವಟವಟ” ಎನ್ನುತಿತ್ತು. ನನಗೇನು ಅನುಭವವಾಗಲಿಲ್ಲ, ಅರ್ಥವೂ ಆಗಲಿಲ್ಲ.” ಎಂದ ಶಿಷ್ಯ. ಎರಡನೇಯ ಶಿಷ್ಯಾ! “ನಿನ್ನ ಅನುಭವವೇನು?” ಎಂದರು.

ಅಳಿಲು ಬೇಸರವಿಲ್ಲದೆ ಮರ ಹತ್ತುತ್ತಿತ್ತು, ಇಳಿಯುತ್ತಿತ್ತು. ಏನೋ ಹುಡುಕಿ ಹುಡುಕಿ ಸವಿಯುತಿತ್ತು. ಅದನ್ನು ನೋಡುತ್ತಾ ಇದ್ದೆ” ಎಂದ

“ನಿನ್ನ ಅನುಭವವೇನು?” ಎಂದರು ಮೂರನೇಯ ಶಿಷ್ಯನಿಗೆ.

ದಡದಲ್ಲಿ ಕುಳಿತ ನಾನು ಕೊಳದ ಅಂತರಂಗ, ನೀರ ಮೇಲೆ ಬರೆಯುವ ಲಿಪಿಯನ್ನು ನೋಡುತ್ತಿದ್ದೆ. ಆದರೆ ಅರ್ಥವಿಸಲಾರದೆ ಹೋದೆ”. ಎಂದ

“ಕೊಳದ ಕಪ್ಪೆ ನೀರಿನಲ್ಲಿ ಇದ್ದರು ನಾ ಮುಳಗಲಿಲ್ಲ. ನೆಲದ ಮೇಲೆ ಇದ್ದರು ನಾ ನೆಗದು ಬೀಳಲಿಲ್ಲ” ಎಂದು ವಟಗುಟ್ಟಿ ಸಾರುತ್ತಿತ್ತು. ಇದರ ಮರ್ಮ ತಿಳಿಯಲಿಲ್ಲವೇ?” ಶಿಷ್ಯಾ ಎಂದರು ಮೊದಲ ಶಿಷ್ಯನಿಗೆ.

ಪುಟ್ಟ ಅಳಿಲು ಮರ ಹತ್ತಿ ಇಳಿಯುವ ಕರ್ಮಯೋಗ ಮಾಡಿ ಸತ್ಯದ ಹಣ್ಣು ಹುಡುಕಿ ಸವಿಯುವುದನ್ನು ಕಾಣಲಿಲ್ಲವೇ?” ಎಂದರು ಎರಡನೇಯ ಶಿಷ್ಯನಿಗೆ

ಹರಿವ ಕೂಳ ತನ್ನ ಅಂತರಂಗವನ್ನು ನೀರ ಮೇಲೆ ಸಹಜೀವನದ ಸೂತ್ರಗಳನ್ನು ಬರೆಯುತ್ತಿದೆ. ಅದನ್ನು ನಾವು ಅರ್ಥವಿಸ ಬೇಕಲ್ಲವೇ?” ಎಂದರು ಗುರುಗಳು.

ಗುರುಗಳ ನಿರೀಕ್ಷೆಗೆ ಬಾರದ ಶಿಷ್ಯರು ತಲೆ ತಗ್ಗಿಸಿ ಸತ್ಯವನ್ನು ಅರಿತು ಕೊಂಡರು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...