Home / ಕಥೆ / ಕಿರು ಕಥೆ / ಚರ್ಚೆ

ಚರ್ಚೆ

ಒಂದು ಸೇವಾಶ್ರಮದಲ್ಲಿ ಅನೇಕ ಅಂಗವಿಕಲರು, ಕುಂಟರು, ಕುರುಡರು, ಹೆಳವರು, ಮೂಕರು, ಬುದ್ಧಿ ಮಾಂದ್ಯರು, ನಿಶ್ಯಕ್ತರು, ಹೀಗೆ ಹಲವು ಹತ್ತು ಜನರಿದ್ದರು. ಅವರು ಜಗತ್ತನ್ನು ನೋಡುತ್ತಿದ್ದರು. ಜನಗಳು ಹಣೆಯಲ್ಲಿ, ತಿಲಕ, ವಿಭೂತಿ, ಪಟ್ಟೆ, ಮುದ್ರೆ, ನಾಮ, ಅಂಗಾರ ಅಕ್ಷತೆ ಹಚ್ಚಿಕೊಂಡು ದೇವಾಲಯಗಳಿಗೆ ಹೋಗುವುದನ್ನು, ತಮ್ಮ ಧರ್ಮದ ಬಗ್ಗೆ ಬಾಯಿ ತುಂಬಾ ಮಾತಾಡಿ ಗುರುಗಳ ಉಪದೇಶ ಕೇಳಿ ಧರ್ಮ ದೈವದ ಬಗ್ಗೆ ಚರ್ಚೆ ಮಾಡುವುದನ್ನು ನೋಡಿದ್ದರು. ಅಂಗವಿಕಲರು ಒಮ್ಮೆ ಸಭೆ ಸೇರಿ ಚರ್ಚೆಗೆ ತೊಡಗಿದರು.

“ಕುರುಡನ ಕಣ್ಣಿಗೆ ದೈವದ ದರ್ಶನ ಒಳಗಿನ ಕಣ್ಣೆಅಲ್ಲವೇ?” ಎಂದ ಒಬ್ಬ ಹುಟ್ಟು ಕುರುಡ.

ಕೈಯಿಲ್ಲದ ಹೆಳವನಾದ ನನಗೆ “ಹಣೆಯಲ್ಲಿ ಯಾವ ತಿಲಕ ನಾಮ ಇಟ್ಟುಕೊಳ್ಳಲು ನನಗೆ ಕೈ ಇಲ್ಲ. ನನಗೆ ದಯಯೇ ದೈವ, ಧರ್ಮ” ಎಂದ.

ಕುಂಟನೋರ್ವ ಹೇಳಿದ “ನಾನು ನಡೆದು ಹೋಗಲಾರೆ. ನನಗೆ ದೇಹವೇ ದೇವಾಲಯ. ನನ್ನ ಆಂತರ್ಯದಲ್ಲೇ ನನ್ನ ಆರಾಧ್ಯ ದೈವ” ಎಂದ.

“ಹೀಗೆ ಅಂಗವಿಕಲಾರಾದರೂ ನಾವು ನಾಮ, ಮುದ್ರೆ ಮಂದಿರ, ಜಾತಿ ಪಂಗಡಗಳಿಲ್ಲದೆ ದೇವರನ್ನು ದಯೆಯಲ್ಲಿ ಧರ್ಮದಲ್ಲಿ ಕಂಡುಕೊಂಡಿದ್ದೇವೆ. ಎಲ್ಲಾ ನೆಟ್ಟಗಿರುವ ಜನರೇಕೆ ದಯೆಯೇ ಧರ್ಮವೆಂಬುದು ಬಿಟ್ಟು ವಕ್ರಗತಿಯಲ್ಲಿ ಸಾಗಿದ್ದಾರೆ?” ಎಂದ ಮತ್ತೋರ್ವ ಅಂಗವಿಕಲ.

ಇವರೆಲ್ಲರ ಹೃದಯದಲ್ಲಿ ಅಧ್ಯಕ್ಷತೆವಹಿಸಿದ ದೈವ, ದಯೆಯ ಮಹಾಪೂರ ಹರಿಸಿದ.
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...