ಗಂಡು ಮೆಟ್ಟಿನ ನಾಡು

ಗಂಡು ಮೆಟ್ಟಿನ ನಾಡು ಕನ್ನಡ ನಾಡು
ಗಂಡುಗಲಿಗಳ ಶೌರ್ಯ ಸಾಹಸ ಬೀಡು
ತ್ಯಾಗ ಪ್ರೀತಿ ಶೌರ್ಯಕೆ ಹೆಸರಾಯಿತೊ ಅಂದು…
ಇತಿಹಾಸದ ಪುಟಪುಟದಿ ಉಳಿಯಿತಿದೊ ಇಂದು
ಪುಲಿಕೇಶಿ ಮಯೂರ ವಿಕ್ರಮಾದಿತ್ಯರು
ಗಂಡೆದೆಯ ಗುಂಡುಗಳು; ಗಂಡರಿಗೆ ಗಂಡರು
ಬನವಾಸಿ ಕಲ್ಯಾಣ ಬಾದಾಮಿ ಮಣ್ಣಲಿ
ಮೆರೆದಂತ ಶೂರರು; ಕನ್ನಡ ರಣಧೀರರು
ಸಿರಿಗನ್ನಡ ಬಾವುಟ ಮುಗಿಲೆತ್ತರಕ್ಕೇರಿಸಿ
ಕಲಿಗನ್ನಡ ಜಯಭೇರಿ ದಿಕ್ಕದಿಕ್ಕಲು ಬಾರಿಸಿ
ಕನ್ನಡ ರಾಜೇಶ್ವರಿಗೆ ಕೀರ್ತಿ ತಂದರೋ…
ದಿಟ್ಟೆದೆಗಳ ಹಾದಿಗೆ ಸ್ಫೂರ್ತಿ ಆದರೊ
ನೃಪತುಂಗ ಹೊಯ್ಸಳ ಕೃಷ್ಣದೇವರಾಯ
ಏಳು ಸುತ್ತಿನಾ ಕೋಟೆ ಮದಕರಿ ನಾಯಕರು
ಎಚ್ಚಮ್ಮ ನಾಯಕ ಕಿತ್ತೂರು ಚೆನ್ನಮ್ಮ
ಆಂಗ್ಲರನು ಬಗ್ಗುಬಡಿದ ಬೆಳವಡಿ ಮಲ್ಲಮ್ಮ
ಕನ್ನಡ ಚೈತನ್ಯವ ತಮ್ಮಲ್ಲೆ ಸೂಸುತ
ಕನ್ನಡ ಪ್ರತಾಪವ ವಿಶ್ವಕ್ಕೆ ತೋರುತ
ರಣರಂಗದ ತುಮುಲದಲಿ ವೀರ ಹೆಜ್ಜೆ ಇಟ್ಟರೋ…
ಜಗದೇಕ ವೀರರಿಗೆ ಮಾದರಿ ಆದರೊ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಯಿ ಬೊಗಳಿದ್ದು ಕೇಳಿಸಲಿಲ್ಲ
Next post ಹಕ್ಕಿಯ ಉಳಿಸೋಣ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…