Home / ಕವನ / ಕವಿತೆ / ನನ್ ಪುಟ್ನಂಜೀ ರೂಪ

ನನ್ ಪುಟ್ನಂಜೀ ರೂಪ

ಬೇವಾರ್‍ಸಿ! ನನ್ ಪುಟ್ನಂಜೀನ
ರೂಪಾನ್ ಆಡ್ತಿನಿ ಬಾಪ್ಪ!
ನಂಗ್ ಆಗಾಗ್ಗೆ ಆಡೀಸ್ತೈತೆ
ನನ್ ಪುಟ್ನಂಜೀ ರೂಪ! ೧

ಆಲ್ನಲ್ ಕಮಲದ್ ಊ ತೇಲ್ಬುಟ್ಟಿ
ಮೇಲ್ ಒಂದ್ ತೆಳ್ನೆ ಲೇಪ
ಚಿನ್ನದ್ ನೀರ್‍ನಲ್ ಕೊಟ್ಟಂಗೈತೆ
ನನ್ ಪುಟ್ನಂಜೀ ರೂಪ! ೨

ಅಮಾಸೇಲಿ ಅತ್ತೀಸ್ದಂಗೆ
ಒಂದ್ ಅತ್ ನೂರ್ ಮತಾಪ
ಬೆಳಕಾಗ್ತೈತೆ ಕಂಡ್ರೆ ನಂಗೆ
ನನ್ ಪುಟ್ನಂಜೀ ರೂಪ! ೩

ಔಸ್ದೀಗ್ ಇಂಕ್ರ ಬೇಕಂದ್ರೂನೆ
ಔಳ್ ತಾವ್ ಇಲ್ಲ ಕೋಪ!
ಅದಕೆ ಅಸ್ಟೊಂದ್ ಚಂದಾಗೈತೆ
ನನ್ ಪುಟ್ನಂಜೀ ರೂಪ! ೪

ನನಗೇನಾರ ಕೋಪ ಬಂದ್ರೆ
ನಂ ನಂ ಪ್ರೀತಿ ನೆಪ್ಪ
ಕರಕೊಂಡ್ ಬಂದಿ ಕೋಪಾನ್ ಇಕ್ತೈತ್
ನನ್ ಪುಟ್ನಂಜೀ ರೂಪ! ೫

ಬಟ್ಟೇ ಕಪ್ಪೀನ್ ತೊಳಿಯಾಕ್ ನಾವು
ಯಂಗಾಕ್ತೀವಿ ಸೋಪ
ಮನಸಿನ್ ಕೆಟ್ ಬಾವನೇಗೊಳ್ಗಂಗೆ
ನನ್ ಪುಟ್ನಂಜೀ ರೂಪ! ೬

ದೇವರ ತಾಕ್ ನಾನ್ ಒಯಾಕಿಲ್ಲ
ಅಣ್ಣು ಕಾಯಿ ದೂಪ!
ದೇವರ್‍ಗ್ ಅಣ್ ಕಾಯ್ ದೂಪ ಎಲ್ಲಾ
ನನ್ ಪುಟ್ನಂಜೀ ರೂಪ! ೭

ಸಿಡಿಯೋ ಮದ್ದಿನ್ ಸುಟ್ಟಾಕ್ದಂಗೆ
ಮಡಗಿದ್ದೇನೆ ಕೇಪ-
ನನ್ ತಾಪತ್ರೇನ್ ಉಡಾಯ್ಸತೈತೆ
ನನ್ ಪುಟ್ನಂಜೀ ರೂಪ! ೮

ಚಿನ್ನದ ಬರಣೀಲ್ ತುಂಬಿಟ್ಟಂಗೆ
ಆಲು ಸಕ್ರೆ ತುಪ್ಪ-
ಒಳ್ಳೇ ಗುಣಗೊಳ್ನ್ ಒಳಗಿಟ್ಟೈತೆ
ನನ್ ಪುಟ್ನಂಜೀ ರೂಪ! ೯

ಪುಟ್ಟಂಜೀನ ಕೈ ಇಡಿದೋನು
ನೀನೆ ಭಲೆ! ಭೂಪ!
ಅಂತ ನಂಗೆ ಬೆನ್ ತಟ್ತೈತೆ
ನನ್ ಪುಟ್ನಂಜೀ ರೂಪ! ೧೦

ದೇವಸ್ತಾನ್ದಾಗ್ ಎಂಗಿರತೈತೆ
ಚಿನ್ನದ್ ನಂದಾದೀಪ
ಅಂಗ್ ನನ್ ಅಟ್ಟೀನ್ ಬೆಳಗಿಸ್ತೈತೆ
ನನ್ ಪುಟ್ನಂಜೀ ರೂಪ! ೧೧

ಇದನ ಕೇಳ್ದೋರ್ ಯಾರಾರ್ ‘ಅಯ್ಯೊ!
ಇವನ್ ಒಬ್ ಉಚ್ಚ! ಪಾಪ!’
ಅಂದೋರ್‍ಗ್ ‘ಅಯ್ಯೋ ಪಾಪಾಂ’ತೈತೆ
ನನ್ ಪುಟ್ನಂಜೀ ರೂಪ! ೧೨
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...