Home / ಕವನ / ಕವಿತೆ / ಯೆಂಡಕ್ಕ್ ತರಪ್ಣ

ಯೆಂಡಕ್ಕ್ ತರಪ್ಣ

ಜೀತಾ ಮಾಡಿ ಕಾಸ್ ಕೆರ್‍ಕೊಂಡಿ
ಅಟ್ಟೀಲ್ ಎಡ್ತೀನ್ ಮೋಸೋಸ್ಕಂಡಿ
ಏನೋ ಕುಡಿಯಾಕ್ ಬಂದ್ರೆ-
ಸೇರಿಗ್ ಸೇರು ನೀರ್‍ನೆ ಬೆರಸಿ
ಕಾಸ್ ಕೇಳ್ತೀಯ ಮೋಸ ಮರಸಿ
ಸಾಚಾ ಮನ್ಸರ್ ಬಂದ್ರೆ? ೧

ನನ್ ಕೈ ಕಾಸು! ನಂಗ್ ಔಳ್ ಎಡ್ತಿ!
ಮೋಸ ಮಾಡ್ತೀನ್ ನಾನ್ ಔಳ್ಗ್ ಇಡ್ದಿ!
ಆಮಾತ್ ಅತ್ತಾಗ್ ಬುಡ್ಲಿ!
ಕೂಸೂ ಕೊಟ್ಕೊಂಡ್ ತೆಪ್ಗೆ ತಣ್ಗೆ
ನಿನ್ ಕೈಲ್ ಮೋಸ ವೋಗೋದ್ ನನ್ಗೆ
ಮಾನದ್ ಬುಡಕೆ ಕೊಡ್ಲಿ! ೨

ಯೆಂಡ ಮಾರೋರ್ ಎಲ್ರೂ ಯಿಂಗೇ
ಮೋಸ ಮಾಡ್ತಾರಂತ ನಂಗೆ
ನೀನೇಳ್ಬೇಕ! ನನ್ಗೂ!
ದುಡ್ಡಿನ್ ರುಚಿ ಕಂಡೋರ್ ನಿಂಗೆ
ಎಸ್ಟ್ ಏಳಿದ್ರೇನ್ ನಾವೂ ಸುಂಕೆ?
ಒಬ್ಬನ್ ಚಾಲೇ ಮನ್ಗೂ! ೩

ಕುಡಿಯೋ ನನ ಬಾಯ್ಗ್ ಇನ್ಮೇಲ್ ಬೀಗ
ಆಕ್ತೀನ್ ಅಂತ ಯೋಳ್ತಿನೀಗ
ಎದೇಗ್ ಕೈನ ತಾಕ್ಸಿ!
ಈ ಮಾತ್ ಓದ್ರೆ ಮಾನಕ್ ತೊಂದ್ರೆ!
ರತ್ನನ್ ಮಾತಿನ್ ತೂಕೀಗಂದ್ರೆ
ರತ್ನನ್ ಎಸರೆ ಸಾಕ್ಸಿ! ೪

ಯೋಳ್ತೀನ್ ಕೈನ ಎದೆಮೇಲಿಟ್ಟಿ-
ಈವೊತ್ನಿಂದ ಯೆಂಡ ಬುಟ್ಟೆ
ಮಾನಕ್ ಬದಕ್ಬೇಕಂತ!
ಮನಸ ಮಾನ ಎಂಗೈತೇಂತ
ಗೊತ್ತಿಲ್ದೆ ನಾನೂ ಇವ್ನೀಂತ
ಎಂಗೋ ಇದ್ರೆ ಬಂತ! ೫

ಪ್ರಾಣಕ್ಕಿಂತ ಯೆಂಡ ಯೆಚ್ಚು!
ಯೆಂಡಕ್ಕಿಂತ ಮಾನ ಯೆಚ್ಚು!
ಯೆಂಡದ್ ಮುನಿಯ! ಜಿಪ್ಣ!
ಮಾನದ್ ಮುಂದೆ ಯಾವ್ದ್ ಏನೈತೆ?
ತಕ್ಕೊ! ಕೊಡ್ತೀನ್ ಈಗ್ ಬರತೈತೆ
ಆಳ್ ಯೆಂಡಕ್ಕೆ ತರಪ್ಣ! ೬
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...