ಕಣ್ಣ ರೆಪ್ಪೆಯ ಕೆಳಗೆ

ಎಲ್ಲಿಂದ ಬರುತ್ತವೆಯೋ
ಹಾಳಾದ ಕಣ್ಣೀರು?
ಏಕೆ ಹರಿಯುತ್ತವೆಯೋ
ಬಳಬಳನೆ ಸುಮ್ಮನೆ!

ಗೋರಿಗಳ ಕೇರಿಯಲ್ಲಿ
ಮಸಣ ಸಮಾಧಿಯಲಿ
ಅಂತರಂಗದ ಏಕಾಂತ
ದೂರದೂರದ ತನಕ
ಹಬ್ಬಿರುವ ಮೌನದಲಿ
ಕುಟುಕುತ್ತಿದೆ ಗೋರಿಕಲ್ಲು
ಗಾಳಿಯಲಿ ಕನಸ ತೂರಿ!

ಏಕೆ ಹರಿಯುತ್ತಿದೆ
ಕಣ್ಣೀರು ಧಾರೆಧಾರೆ
ಹೇಳಿ ಹನಿಗಳೇ
ಧಾರೆ ಹಿಡಿದು ನೇರ
ಕಣ್ಣ ಕಿಂಡಿಯಿಂದ ಉಕ್ಕಿ
ಮೂಗಿನ ನೇರಕ್ಕೆ ಬಂದು

ಕಣ್ಣರೆಪ್ಪೆಯ ಕೆಳಗೆ
ಕೋಡಿಯನು ಕಟ್ಟಿ
ಹಿಡಿದಿಡಬಾರದೇ
ಉಪ್ಪು ನೀರಿನ ಬೆಳಕ
ಸ್ವಚ್ಛಂದ ಬೆಳ್ಳಕ್ಕಿ ಸಾಲಿನಲಿ
ಆ ಜನುಮದ ನೋವ
ಹರಿಯ ಬಿಡಬಾರದೇ
ಒತ್ತೊತ್ತು ಕನಸುಗಳ ಬಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸತ್ತು ಬದುಕಿರುವರು
Next post ತಮೋಭೀತಿ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…